ಬೆಳಗಾವಿ: ಮಿರಜ್- ಕ್ಯಾಸಲರಾಕ್ ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯ ಮೊಬೈಲ್ ಕದ್ದು ಹಲ್ಲೆನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ಬೆಳಗಾವಿ ರೈಲ್ವೆ ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ್ದಾರೆ. ಮಿರಜ್ನ ಆನಂದ ಅಶೋಕ ಶಿಕಲಗಾರ್(27) ಬಂಧಿತ ಆರೋಪಿ. ರಾಯಬಾಗ ತಾಲೂಕಿನ ಯಬರಟ್ಟಿ ಗ್ರಾಮದ ಶಂಕರ ಕಲ್ಲಪ್ಪ ಒಡೆಯರ ಎಂಬುವವರು ಶನಿವಾರ ರಾತ್ರಿ ಕುಡಚಿಯಿಂದ ಬೆಳಗಾವಿ ಕಡೆಗೆ ಬರುತ್ತಿದ್ದಾಗ ಆರೋಪಿಯು ಅವರ ಮೊಬೈಲ್ ಕಸಿದಿದ್ದಾನೆ. ಪ್ರಶ್ನಿಸಿದ್ದಕ್ಕೆ ಹಲ್ಲೆಮಾಡಿ ಪರಾರಿಯಾಗಿದ್ದಾನೆ ಎಂದು ಗಾಯಾಳು ಶಂಕರ ದೂರು ನೀಡಿದ್ದರು.
ಮೊಬೈಲ್ ಕಳವು: ಓರ್ವನ ಬಂಧನ
ಬೆಳಗಾವಿ: ಮಿರಜ್- ಕ್ಯಾಸಲರಾಕ್ ಪ್ಯಾಸೆಂಜರ್ ರೈಲಿನಲ್ಲಿ ...
Vijaya Karnataka 17 Feb 2020, 5:00 am