ಆ್ಯಪ್ನಗರ

ಶಾಲೆಯಲ್ಲಿ ಹಣ, ಟಿವಿ ಕಳ್ಳತನ

Vijaya Karnataka 4 Aug 2018, 5:00 am
ರಾಯಬಾಗ:ತಾಲೂಕಿನ ಅಳಗವಾಡಿ ಗ್ರಾಮದ ಶಾಂತಿಸಾಗರ ಶಿಕ್ಷ ಣ ಸಂಸ್ಥೆಯ ಶಾಲೆಯ ಬೀಗ ಮುರಿದು ಗುರುವಾರ ಕಳ್ಳತನ ಮಾಡಲಾಗಿದೆ. ಶಾಲೆಯಲ್ಲಿದ್ದ 22,500 ರೂ. ನಗದು, 1 ಟಿವಿ, ಟೇಬಲ್‌, ವೀಲ್‌ಚೇರ್‌, ಸ್ಟೆಪ್ಲೆ ೖಜರ್‌, ರಿಸಿವರ್‌ ಸೇರಿದಂತೆ ಅಂದಾಜು 52 ಸಾವಿರ ರೂ. ಮೊತ್ತದ ವಸ್ತುಗಳನ್ನು ಕಳ್ಳರು ಕದ್ದಿದ್ದಾರೆ. ಶಾಲೆಯಲ್ಲಿನ ವಸ್ತುಗಳು ಕಳುವಾದ ಕುರಿತು ಹಾರೂಗೇರಿ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದರೂ ದೂರು ಸ್ವೀಕರಿಸಿಲ್ಲ ಎಂದು ಸಂಸ್ಥೆ ಅಧ್ಯಕ್ಷ ಗೋಪಾಲ ಹಂಜೆ ಆರೋಪಿಸಿದ್ದಾರೆ.
Vijaya Karnataka Web BEL-3RAIBAG5PHOTO


ಗ್ರಾಮದಲ್ಲಿ ಈಚೆಗೆ ಕಳ್ಳರ ಹಾವಳಿ ಹೆಚ್ಚಾಗಿದ್ದು, ಕಳೆದ ತಿಂಗಳಲ್ಲಿ ಒಂದೇ ರಾತ್ರಿ 7 ವಿದ್ಯುತ್‌ ಮೋಟಾರಗಳು ಕಳುವಾಗಿವೆ. ಅಲ್ಲದೆ, ಮೇಕೆ, ಕುರಿ ಮುಂತಾದ ಪ್ರಾಣಿಗಳು ಸಹ ಕಳ್ಳತನವಾಗುತ್ತಿವೆ. ಈ ಬಗ್ಗೆ ಪೊಲೀಸರು ಹೆಚ್ಚಿನ ಕಾಳಜಿ ವಹಿಸಿ ಕಳ್ಳರನ್ನು ಹಿಡಿದು, ಗ್ರಾಮದಲ್ಲಿ ಕಳ್ಳತನ ತಡೆಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ