ಆ್ಯಪ್ನಗರ

ಮಂಗಗಳ ಹಾವಳಿ; ಗ್ರಾಮಸ್ಥರು ಕಂಗಾಲು

ಪಾಲಬಾವಿ: ಗ್ರಾಮದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, ಶನಿವಾರ ಲಕ್ಷ ್ಮಣ ಕರೋಶಿ ಎಂಬುವರ ಬಲ ತೋಳಿಗೆ ಕಚ್ಚಿ ಗಾಯಗೊಳಿಸಿದೆ...

Vijaya Karnataka 16 Jun 2019, 5:00 am
ಪಾಲಬಾವಿ: ಗ್ರಾಮದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, ಶನಿವಾರ ಲಕ್ಷ ್ಮಣ ಕರೋಶಿ ಎಂಬುವರ ಬಲ ತೋಳಿಗೆ ಕಚ್ಚಿ ಗಾಯಗೊಳಿಸಿದೆ. ಇವರ ಮೇಲೆ ವಾರದ ಹಿಂದೆಯೇ ಮಂಗ ಹಲ್ಲೆ ಮಾಡಿ ಕಿವಿ ಕಚ್ಚಿ ಗಾಯಗೊಳಿಸಿತ್ತು. ಅಲ್ಲದೆ, ಜೂ.6ರಂದು ಕಾಡಶೆಟ್ಟಿ ತೋಟದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ಜಮೆಲ್ಲಾ ಇಸಾಕ್‌ ಮುಜಾವರ (8) ಎಂಬ ಬಾಲಕಿಯ ಮುಖವನ್ನು ಕೋತಿ ಕಚ್ಚಿ ಗಾಯಗೊಳಿಸಿದೆ.
Vijaya Karnataka Web BEL-15PALABAVI2(A) PHOTO


ಮಂಗಗಳ ಹಾವಳಿಯಿಂದ ಗ್ರಾಮಸ್ಥರು ಕಂಗಾಲಾಗಿದ್ದು, ತೋಟ, ಗದ್ದೆಗಳಲ್ಲಿ ಒಬ್ಬರೂ ತಿರುಗಾಡುವಂತಿಲ್ಲ, ಮಹಿಳೆಯರು, ಮಕ್ಕಳನ್ನು ಕಂಡರೆ ಮಂಗ ಅವರ ಮೇಲೆರಗಿ ಹಲ್ಲೆ ಮಾಡುತ್ತಿದೆ. ಗ್ರಾಮದಲ್ಲಿ ನೂರಾರು ಮಂಗಗಳಿದ್ದು, ಅದರಲ್ಲೊಂದು ಮಂಗ ಜನರ ಮೇಲೆ ಆಕ್ರಮಣ ಮಾಡಿ ಗಾಯಗೊಳಿಸುತ್ತಿದೆ. ''ಕಳೆದ ಒಂದು ತಿಂಗಳಲ್ಲಿ ನನಗೆ 4-5ಬಾರಿ ಮಂಗ ಕಚ್ಚಿದೆ. ಮುಗಳಖೋಡ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಬೇಕೆಂದರೆ ಅಲ್ಲಿನ ಸಿಬ್ಬಂದಿ ಮಂಗನ ಕಡಿತಕ್ಕೆ ತಮ್ಮಲ್ಲಿ ಔಷಧ ಲಭ್ಯವಿಲ್ಲವೆಂದು ಹೇಳುತ್ತಿದ್ದಾರೆ. ಹಾಗಾಗಿ ಸೂಕ್ತ ಚಿಕಿತ್ಸೆಯೂ ಸಿಗುತ್ತಿಲ್ಲ'' ಎಂದು ಲಕ್ಷ ್ಮಣ ಕರೋಶಿ ದೂರಿದರು.

''ಗ್ರಾಮದ ಕಾಡಶೆಟ್ಟಿ ತೋಟದಲ್ಲಿ ಮಂಗಗಳ ಕಾಟ ತಡೆಯುವಂತೆ ಅರಣ್ಯಾಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಮಂಗಗಳಿಂದ ಅನಾಹುತವಾದರೆ ತಾಲೂಕು ಅರಣ್ಯಾಧಿಕಾರಿಗಳೇ ಹೊಣೆಗಾರರು'' ಎಂದು ಗ್ರಾಪಂ ಉಪಾಧ್ಯಕ್ಷ ಸದಾಶಿವ ಭಂಡಾರಿ ಎಚ್ಚರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ