ಆ್ಯಪ್ನಗರ

ಬಿಲ್ಲು- ಬಾಣ ಬಳಸಿ ಕೋತಿ ಬೇಟೆ

ಜನ ಕಂಡು ವಾಹನ ಬಿಟ್ಟು ಪರಾರಿಯಾದ ದುಷ್ಕರ್ಮಿಗಳು ಎಂಕೆ...

Vijaya Karnataka 20 Jun 2018, 5:00 am
ಎಂ.ಕೆ.ಹುಬ್ಬಳ್ಳಿ: ಸಮೀಪದ ಪಾರಿಶ್ವಾಡ ರಸ್ತೆ ಪಕ್ಕದ ಜೋಡು ಕೆರೆ ಬಳಿ ಕೋತಿಯೊಂದನ್ನು ಹತ್ಯೆ ಮಾಡಿದ ದುಷ್ಕರ್ಮಿಗಳ ತಂಡವೊಂದು ಸುತ್ತಲಿನ ರೈತರು, ಯುವಕರು ಬರುತ್ತಿದ್ದಂತೆ ಕೃತ್ಯಕ್ಕೆ ತಂದಿದ್ದ ವಾಹನ ಬಿಟ್ಟು ಪರಾರಿಯಾಗಿದ್ದಾರೆ.
Vijaya Karnataka Web monkey hunting using bow arrow
ಬಿಲ್ಲು- ಬಾಣ ಬಳಸಿ ಕೋತಿ ಬೇಟೆ


ಟ್ರ್ಯಾಕ್ಸ್‌ನಲ್ಲಿ ಬಂದಿದ್ದ ಮೂವರು ಮಹಿಳೆಯರು ಹಾಗೂ ಒಬ್ಬ ಪುರುಷನಿದ್ದ ತಂಡದಿಂದ ಈ ಕೃತ್ಯ ನಡೆದಿದೆ. ಬೆಳಗ್ಗೆ ಬಂದಿದ್ದ ದುಷ್ಕರ್ಮಿಗಳು ಬಿಲ್ಲು-ಬಾಣ ಬಳಸಿ ಕೋತಿಗಳನ್ನು ಹತ್ಯೆ ಮಾಡಿ ಒಯ್ಯಲು ಯತ್ನಿಸುತ್ತಿದ್ದರು ಎನ್ನಲಾಗಿದೆ.

ಬಾಣ ತಗುಲಿ ಗಂಭೀರ ಗಾಯಗೊಂಡ ಕೋತಿ ಚೀರಾಡುತ್ತಿದ್ದಂತೆ ಗಮನಿಸಿದ ಅಕ್ಕಪಕ್ಕದ ಜಮೀನಿನಲ್ಲಿದ್ದ ರೈತರು, ಯುವಕರು ಘಟನಾ ಸ್ಥಳಕ್ಕೆ ಬಂದು ಬೇಟೆಯಲ್ಲಿ ತೊಡಗಿದ್ದವರನ್ನು ಪ್ರಶ್ನಿಸುತ್ತಿದ್ದಂತೆ ಆರೋಪಿತರು ತಾವು ತಂದಿದ್ದ ವಾಹನ ಬಿಟ್ಟು ಪಕ್ಕದಲ್ಲಿದ್ದ ಕಬ್ಬಿನ ಗದ್ದೆಯ ಮೂಲಕ ಪರಾರಿಯಾಗಿದ್ಧಾರೆ. ಅವರು ಬಿಟ್ಟು ಹೋಗಿದ್ದ ವಾಹನ ಒಯ್ಯಲು ಬರಬಹುದೆಂದು ಸ್ಥಳೀಯರು ಮೃತ ಕೋತಿ ಇಟ್ಟುಕೊಂಡು ಕಾಯುತ್ತ ಸಂಜೆ ತನಕ ಕುಳಿತಿದ್ದರು.

ಆದರೆ, ಅವರು ಇತ್ತ ಸುಳಿಯದ ಕಾರಣ ಸಂಜೆ ವೇಳೆಗೆ ತಾವೆ ಗುಂಡಿ ತೆಗೆದು ಪೂಜೆ ನೆರವೇರಿಸಿ ಮೃತ ಕೋತಿಯ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಪೊಲೀಸರು ಕೂಡ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ