ಆ್ಯಪ್ನಗರ

ಮೂರುಸಾವಿರ ಮಠಕ್ಕೆ ಆಹ್ವಾನಿಸಲು ಮೂರನೇ ವ್ಯಕ್ತಿ ದಿಂಗಾಲೇಶ್ವರ ಶ್ರೀಗಳು ಯಾರು?

ದಿಂಗಾಲೇಶ್ವರ ಶ್ರೀಗಳು ನಮ್ಮನ್ನು ಮೂರು ಸಾವಿರ ಮಠಕ್ಕೆ ಆಹ್ವಾನ ಮಾಡಲು ಅವರು ಯಾರು? ಅವರಿಗೆ ಯಾವ ಅಧಿಕಾರವಿದೆ? ಎಂದು ಪ್ರಶ್ನಿಸಿದ ಘಟಪ್ರಭಾದ ಗುಬ್ಬಲಗುಡ್ಡದ ಮಠದ ಭಕ್ತರು.

Vijaya Karnataka Web 18 Feb 2020, 12:13 pm
ಘಟಪ್ರಭಾ (ಬೆಳಗಾವಿ): ಮಲ್ಲಿಕಾರ್ಜುನ ಮಹಾಸ್ವಾಮಿಗಳ ಬೆಂಬಲಕ್ಕೆ ಹಾಗೂ ಅವರ ಪರವಾಗಿ ಮಾತನಾಡಲು ಮೂರು ಸಾವಿರ ಮಠದ ಜಗದ್ಗುರುಗಳಾದ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ಅಥವಾ ಶ್ರೀಮಠದ ಆಡಳಿತ ಮಂಡಳಿಯವರು ಕರೆದರೆ ಎಷ್ಟು ಜನ ಬೇಕಾದರೂ ಘಟಪ್ರಭಾದಿಂದ ಮೂರುಸಾವಿರ ಮಠಕ್ಕೆ ಬರಲು ಸಿದ್ಧ ಎಂದು ಮೂರುಸಾವಿರ ಮಠದ ಉತ್ತರಾಧಿಕಾರಿ ವಿಷಯವಾಗಿ ಘಟಪ್ರಭಾದ ಗುಬ್ಬಲಗುಡ್ಡ ಮಠದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಭಕ್ತರು ಹೇಳಿದರು.
Vijaya Karnataka Web balehosur dingaleshwar swamiji


ಭಕ್ತರು ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸುತ್ತ, ''ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳ ಬದಲಾಗಿ ಮೂರನೇ ವ್ಯಕ್ತಿಯಾದ ದಿಂಗಾಲೇಶ್ವರ ಶ್ರೀಗಳು ನಮ್ಮನ್ನು ಮೂರು ಸಾವಿರ ಮಠಕ್ಕೆ ಆಹ್ವಾನ ಮಾಡಲು ಅವರು ಯಾರು? ಅವರಿಗೆ ಯಾವ ಅಧಿಕಾರವಿದೆ?'' ಎಂದು ಪ್ರಶ್ನಿಸಿದರು.

ಸುಭಾಸ ಹುಕ್ಕೇರಿ ಮಾತನಾಡಿ, ‘‘ಮೂರು ಸಾವಿರ ಮಠದ ಉನ್ನತ ಸಮಿತಿಯವರು ಮತ್ತು ಆಡಳಿತ ಮಂಡಳಿಯವರು ಎಲ್ಲರೂ ತಿಳಿದವರಾಗಿದ್ದಾರೆ. ಹೀಗಾಗಿ ಅವರಿಗೆ ಕಾನೂನಿನ ಬಗ್ಗೆ ತಿಳಿಸುವ ಅಗತ್ಯವಿಲ್ಲ. ಮಲ್ಲಿಕಾರ್ಜುನ ಮಹಾಸ್ವಾಮಿಗಳ ಪರವಾಗಿ ಮೂರು ಸಾವಿರ ಮಠಕ್ಕೆ ಬರಲು ಸಾವಿರಾರು ಭಕ್ತರು ಸಿದ್ಧರಾಗಿದ್ದೇವೆ. ಆದರೆ ಮಠದ ಗೌರವ, ಘನತೆಗೆ ಕುಂದು ಬರಬಾರದು ಎನ್ನುವ ಕಾರಣಕ್ಕೆ ಸಮ್ಮುನಿದ್ದೇವೆ,’’ ಎಂದು ಹೇಳಿದರು. ಗ್ರಾಮದ ಮುಖಂಡರು ಹಾಜರಿದ್ದರು.

ಮೂರುಸಾವಿರ ಮಠಕ್ಕೆ ನಾನೇ ಉತ್ತರಾಧಿಕಾರಿ: ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ

ಗದಗ ತಾಲೂಕಿನ ಬಾಲೆಹೊಸೂರು ಗ್ರಾಮದಿಂದ ಫೆಬ್ರವರಿ 23ರಂದು ಹುಬ್ಬಳ್ಳಿಯ ಮೂರು ಸಾವಿರ ಮಠಕ್ಕೆ ಕಾಲ್ನಡಿಗೆಯಲ್ಲಿ ತೆರಳಿ ದಿಂಗಾಲೇಶ್ವರ ಶ್ರೀಗಳಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಒತ್ತಾಯಿಸಲು ಭಕ್ತರು ನಿರ್ಧರಿಸಿದ್ದಾರೆ.

ದಿಂಗಾಲೇಶ್ವರ ಶ್ರೀಗೆ ನ್ಯಾಯ ದೊರಕಿಸಿ ಕೊಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ