ಮೂಡಲಗಿ : ಪಟ್ಟಣದ ತೇರದಾಳ ತೋಟದಲ್ಲಿ ಗುರುವಾರ ಸಂಜೆ ಜೆಡಿಎಸ್ ಕಾರ್ಯಕರ್ತರ ಮತ್ತು ಗಡಾದ ಅಭಿಮಾನಿ ಬಳಗದ ಸಭೆ ಜರುಗಿತು.
ಈ ವೇಳೆ ಮಾತನಾಡಿದ ಜೆಡಿಎಸ್ ಮುಖಂಡ ಭೀಮಪ್ಪ ಗಡಾದ, ''ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ. ವಿ.ಎಸ್. ಸಾಧುನವರ ಅವರಿಗೆ ಬೆಂಬಲ ಸೂಚಿಸೋಣ. ನಾವೂ ಕ್ಷೇತ್ರದ ಅಭಿವೃದ್ಧಿಗಾಗಿ ಹೋರಾಟ ನಡೆಸುತ್ತ ಬಂದಿದ್ದೇವೆ. ಈ ಚುನಾವಣೆಯೂ ನಮಗೆ ಹೋರಾಟವಾಗಿ ಪರಿಣಮಿಸಿದೆ. ಇದಕ್ಕೆ ಕಾರಣ ಜಾರಕಿಹೊಳಿಯವರ ಕುಟುಂಬ ರಾಜಕಾರಣ. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸಾಕಷ್ಟು ತೊಂದರೆ ನೀಡಿದ್ದನ್ನು ನಾವು ಮರೆತಿಲ್ಲ'', ಎಂದರು.
''ಮೂರು ಬಾರಿ ಸಂಸದರಾಗಿರುವ ಸುರೇಶ ಅಂಗಡಿ, ಈ ಭಾಗಕ್ಕೆ ಯಾವುದೇ ಕೊಡುಗೆ ನೀಡಿಲ್ಲ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಶಾಸಕರು ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳಕರರನ್ನು ಗೆಲ್ಲಿಸಲು ಪ್ರಯತ್ನಿಸಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ'', ಎಂದು ಹೇಳಿದರು.
ಮುಖಂಡರಾದ ಪ್ರಕಾಶ ಭಾಗೋಜಿ, ಚೆನ್ನಪ್ಪ ವಗ್ಗನ್ನವರ ಮಾತನಾಡಿ, ವೈಮನಸ್ಸುಗಳನ್ನು ಬಿಟ್ಟು ಈ ಬಾರಿ ಕ್ಷೇತ್ರದ ಅಭಿವೃದ್ಧಿಗಾಗಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಿ ಹೊಸ ಸಂಸದರನ್ನು ಆಯ್ಕೆ ಮಾಡುವ ಸಂಕಲ್ಪ ಕೈಗೊಳ್ಳೋಣ ಎಂದರು.
ಪುರಸಭೆ ಸದಸ್ಯ ಈರಣ್ಣ ಕೊಣ್ಣೂರ, ಲಿಂಗರಾಜ ಅಂಗಡಿ, ಎಂ.ಟಿ. ಪಾಟೀಲ, ಶ್ರೀಕಾಂತ ಪರುಶೆಟ್ಟಿ, ಸಂಗಣ್ಣ ಕಳ್ಳಿಗುದ್ದಿ, ಶಿವಾನಂದ ಕಪರಟ್ಟಿ, ಸತೀಶ ಒಂಟಗೂಡಿ ಮಾತನಾಡಿದರು. ಹಂದಿಗುಂದ ಶ್ರೀಗಳು ಆಶೀರ್ವಚನ ನೀಡಿದರು. ಪರಪ್ಪ ಮುನ್ಯಾಳ, ಶಿವಾನಂದ ಸಣ್ಣಕ್ಕಿ, ಪಾರ್ವತೆವ್ವಾ ಅಥಣಿ, ಸತ್ತೆವ್ವಾ ಅರಮನಿ, ಆದಂ ತಾಂಬೋಳಿ, ರೇಣುಕಾ ಹಾದಿಮನಿ, ಶಾಂತವ್ವಾ, ಚೆನ್ನಪ್ಪಾ ಅಥಣಿ, ಮಲ್ಲಪ್ಪ ಮದುಗುಣಕಿ, ಗುರುನಾಥ ಗಂಗನ್ನವರ, ಮಲ್ಲಪ್ಪ ತೇರದಾಳ, ಶಂಕರ ಕರಿಹೊಳಿ, ಇರ್ಷಾದ ಇನಾಮದಾರ, ಶ್ರೀಶೈಲ ಗಾಣಿಗೇರ ಮತ್ತಿತರರು ಇದ್ದರು. ಮಲ್ಲಪ್ಪ ಮದುಗುಣಕಿ ನಿರೂಪಿಸಿ, ವಂದಿಸಿದರು.
ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಕಾಲುವೆಗಳಿಗೆ ನೀರು ಹರಿಸುವ ಕುರಿತು ಹೇಳಿಕೆ ನೀಡುತ್ತಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗುವುದಿಲ್ಲವೆ? ಚುನಾವಣಾ ಅಧಿಕಾರಿಗಳು ಈ ಹೇಳಿಕೆಯನ್ನು ಗಮನಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
- ಭೀಮಪ್ಪ ಗಡಾದ, ಜೆಡಿಎಸ್ ಮುಖಂಡ
ಈ ವೇಳೆ ಮಾತನಾಡಿದ ಜೆಡಿಎಸ್ ಮುಖಂಡ ಭೀಮಪ್ಪ ಗಡಾದ, ''ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ. ವಿ.ಎಸ್. ಸಾಧುನವರ ಅವರಿಗೆ ಬೆಂಬಲ ಸೂಚಿಸೋಣ. ನಾವೂ ಕ್ಷೇತ್ರದ ಅಭಿವೃದ್ಧಿಗಾಗಿ ಹೋರಾಟ ನಡೆಸುತ್ತ ಬಂದಿದ್ದೇವೆ. ಈ ಚುನಾವಣೆಯೂ ನಮಗೆ ಹೋರಾಟವಾಗಿ ಪರಿಣಮಿಸಿದೆ. ಇದಕ್ಕೆ ಕಾರಣ ಜಾರಕಿಹೊಳಿಯವರ ಕುಟುಂಬ ರಾಜಕಾರಣ. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸಾಕಷ್ಟು ತೊಂದರೆ ನೀಡಿದ್ದನ್ನು ನಾವು ಮರೆತಿಲ್ಲ'', ಎಂದರು.
''ಮೂರು ಬಾರಿ ಸಂಸದರಾಗಿರುವ ಸುರೇಶ ಅಂಗಡಿ, ಈ ಭಾಗಕ್ಕೆ ಯಾವುದೇ ಕೊಡುಗೆ ನೀಡಿಲ್ಲ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಶಾಸಕರು ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳಕರರನ್ನು ಗೆಲ್ಲಿಸಲು ಪ್ರಯತ್ನಿಸಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ'', ಎಂದು ಹೇಳಿದರು.
ಮುಖಂಡರಾದ ಪ್ರಕಾಶ ಭಾಗೋಜಿ, ಚೆನ್ನಪ್ಪ ವಗ್ಗನ್ನವರ ಮಾತನಾಡಿ, ವೈಮನಸ್ಸುಗಳನ್ನು ಬಿಟ್ಟು ಈ ಬಾರಿ ಕ್ಷೇತ್ರದ ಅಭಿವೃದ್ಧಿಗಾಗಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಿ ಹೊಸ ಸಂಸದರನ್ನು ಆಯ್ಕೆ ಮಾಡುವ ಸಂಕಲ್ಪ ಕೈಗೊಳ್ಳೋಣ ಎಂದರು.
ಪುರಸಭೆ ಸದಸ್ಯ ಈರಣ್ಣ ಕೊಣ್ಣೂರ, ಲಿಂಗರಾಜ ಅಂಗಡಿ, ಎಂ.ಟಿ. ಪಾಟೀಲ, ಶ್ರೀಕಾಂತ ಪರುಶೆಟ್ಟಿ, ಸಂಗಣ್ಣ ಕಳ್ಳಿಗುದ್ದಿ, ಶಿವಾನಂದ ಕಪರಟ್ಟಿ, ಸತೀಶ ಒಂಟಗೂಡಿ ಮಾತನಾಡಿದರು. ಹಂದಿಗುಂದ ಶ್ರೀಗಳು ಆಶೀರ್ವಚನ ನೀಡಿದರು. ಪರಪ್ಪ ಮುನ್ಯಾಳ, ಶಿವಾನಂದ ಸಣ್ಣಕ್ಕಿ, ಪಾರ್ವತೆವ್ವಾ ಅಥಣಿ, ಸತ್ತೆವ್ವಾ ಅರಮನಿ, ಆದಂ ತಾಂಬೋಳಿ, ರೇಣುಕಾ ಹಾದಿಮನಿ, ಶಾಂತವ್ವಾ, ಚೆನ್ನಪ್ಪಾ ಅಥಣಿ, ಮಲ್ಲಪ್ಪ ಮದುಗುಣಕಿ, ಗುರುನಾಥ ಗಂಗನ್ನವರ, ಮಲ್ಲಪ್ಪ ತೇರದಾಳ, ಶಂಕರ ಕರಿಹೊಳಿ, ಇರ್ಷಾದ ಇನಾಮದಾರ, ಶ್ರೀಶೈಲ ಗಾಣಿಗೇರ ಮತ್ತಿತರರು ಇದ್ದರು. ಮಲ್ಲಪ್ಪ ಮದುಗುಣಕಿ ನಿರೂಪಿಸಿ, ವಂದಿಸಿದರು.
ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಕಾಲುವೆಗಳಿಗೆ ನೀರು ಹರಿಸುವ ಕುರಿತು ಹೇಳಿಕೆ ನೀಡುತ್ತಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗುವುದಿಲ್ಲವೆ? ಚುನಾವಣಾ ಅಧಿಕಾರಿಗಳು ಈ ಹೇಳಿಕೆಯನ್ನು ಗಮನಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
- ಭೀಮಪ್ಪ ಗಡಾದ, ಜೆಡಿಎಸ್ ಮುಖಂಡ