ಆ್ಯಪ್ನಗರ

ಮೂಡಲಗಿ: ವೈದ್ಯರ ನಿರ್ಲಕ್ಷ್ಯದ ಆರೋಪ; ಜಿಲ್ಲಾಧಿಕಾರಿಗೆ ಮನವಿ

ಮೂಡಲಗಿ: ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆಯೊಬ್ಬಳು ...

Vijaya Karnataka 9 Jun 2020, 5:00 am
ಮೂಡಲಗಿ : ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆಯೊಬ್ಬಳು ಸಾವಿಗೀಡಾಗಿದ್ದಾಳೆ ಎಂದು ಆರೋಪಿಸಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿಯು, ವೈದ್ಯಕೀಯ ನಿರ್ಲಕ್ಷ್ಯ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಇಲ್ಲಿನ ಕಲ್ಮೇಶ್ವರ ವೃತ್ತದಲ್ಲಿಪ್ರತಿಭಟನೆ ನಡೆಸಿ ತಹಸೀಲ್ದಾರ ಮೂಲಕ ಜಿಲ್ಲಾಧಿಕಾರಿಗೆ ಮನವಿ ನೀಡಿತು.
Vijaya Karnataka Web 8MDL1_53
ಮಹಿಳೆ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಹಸೀಲ್ದಾರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.


ಸಮಿತಿಯ (ಸಂಯೋಜಕ) ಜಿಲ್ಲಾಸಂಘಟನಾ ಸಂಚಾಲಕ ಯಶವಂತ ಮಂಟೂರ ನೇತೃತ್ವದಲ್ಲಿ ಸೋಮವಾರ ಈ ಮನವಿ ಸಲ್ಲಿಸಲಾಯಿತು. 'ಇಲ್ಲಿನ ಖಾಸಗಿ ಸ್ಕಾತ್ರ್ಯನಿಂಗ್‌ ಮತ್ತು ಹೆರಿಗೆ ಆಸ್ಪತ್ರೆಯಲ್ಲಿಇತ್ತೀಚೆಗೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಹೆರಿಗೆ ಆದ ಮಹಿಳೆಯನ್ನು 5 ದಿನಗಳ ಕಾಲ ಆಸ್ಪತ್ರೆಯಲ್ಲಿಇರಿಸಿಕೊಳ್ಳಲಾಗಿತ್ತು. ನಂತರ ಅನವಶ್ಯಕವಾಗಿ ಶಸ್ತ್ರ ಚಿಕಿತ್ಸೆಗೆ ಒಳಪಡಿಸಿ ಮಹಿಳೆಯ ಸಾವಿಗೆ ಕಾರಣರಾಗಿದ್ದಾರೆ. ಈ ಹಿಂದೆಯು ಸಹ ಸದರಿ ಆಸ್ಪತ್ರೆಯ ವರದಿಗಳು ಸರಿಯಾಗಿ ಬಂದಿರುವುದಿಲ್ಲ. ವಿನಾಕಾರಣ ಹೆದರಿಸಿ ಬೆದರಿಸಿ ಅವಧಿಗೆ ಮುಂಚೆ ಶಸ್ತ್ರ ಚಿಕಿತ್ಸೆಯ ಮೂಲಕ ಹೆರಿಗೆ ಮಾಡಿಸಿ ದುಡ್ಡು ಮಾಡಿಕೊಳ್ಳುತ್ತಿದ್ದಾರೆ' ಎಂದು ಮನವಿಯಲ್ಲಿಆರೋಪಿಸಲಾಗಿದೆ.

ತಹಸೀಲ್ದಾರ ಪರವಾಗಿ ಶಿರಸ್ತೇದಾರ ರಾಜು ಕಡಕೋಳ ಮನವಿ ಸ್ವೀಕರಿಸಿದರು. ಶಿವಾಜಿ ಜುಟ್ಟನ್ನವರ, ಸುನಂದಾ ಭಜಂತ್ರಿ, ಅಶೋಕ ಜಗನಾಥ, ರಮೇಶ ಹರಿಜನ, ಉತ್ತಮ ಮಾಂಗ್‌, ಬಸವರಾಜ ಹರಿಜನ, ಮಾನಿಂಗ ಮಾದರ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ