ಆ್ಯಪ್ನಗರ

ಮುಗಳಖೋಡ: ಅಂಗಡಿ, ಮುಂಗಟ್ಟು ಮುಚ್ಚಿ ಮಳೆಗಾಗಿ ಪ್ರಾರ್ಥನೆ

ಮುಗಳಖೋಡ: ಪಟ್ಟಣದಲ್ಲಿ ಮಳೆಗಾಗಿ ಎರಡು ದಿನಗಳ ಕಾಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಮಳೆಗಾಗಿ ಪ್ರಾರ್ಥಿಸಲಾಯಿತು...

Vijaya Karnataka 26 Jun 2019, 5:00 am
ಮುಗಳಖೋಡ : ಪಟ್ಟಣದಲ್ಲಿ ಮಳೆಗಾಗಿ ಎರಡು ದಿನಗಳ ಕಾಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಮಳೆಗಾಗಿ ಪ್ರಾರ್ಥಿಸಲಾಯಿತು.
Vijaya Karnataka Web BLG-2506-2-52-25MGKD1


ಇಂಥ ಪದ್ಧತಿ ಪೂರ್ವಜರಿಂದ ನಡೆದು ಬಂದ ಧಾರ್ಮಿಕ ಆಚರಣೆಯಾಗಿದ್ದು, ಮಳೆ ಬಾರದ ಸಂದರ್ಭದಲ್ಲಿ, ದನಕರುಗಳಿಗೆ ರೋಗ ರುಜಿನಗಳು ಬಂದಾಗ ಇದನ್ನು ಆಚರಿಸಲಾಗುತ್ತಿದೆ. ಈ ಧಾರ್ಮಿಕ ಆಚರಣೆಯ ನಿಮಿತ್ತ ಪಟ್ಟಣದ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ, ಭಜನೆ, ಕಾರ್ಯಕ್ರಮಗಳು ನಡೆಸಲಾಯಿತು.

ಮಂಗಳವಾರ ಕೊನೆಯ ವಾರದ ಮುಕ್ತಾಯ ಇರುವುದರಿಂದ ಪಟ್ಟಣದ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಊರಿನ ಎಲ್ಲ ದೇವಾನು ದೇವತೆಗಳಿಗೆ ಪಟ್ಟಣದ ಭಕ್ತರಿಂದ ನೈವೇದ್ಯ ಸಮರ್ಪಿಸಲಾಯಿತು. ಸಂಜೆ ಊರಿನ ಪ್ರಮುಖ ಬೀದಿಗಳಲ್ಲಿ ಎಲ್ಲ ದೇವರ ಚಿತ್ರದ ಮೆರವಣಿಗೆ ಸಕಲ ವಾದ್ಯಮೇಳಗಳೊಂದಿಗೆ ನಡೆಯಿತು.

ಬಸ್‌ ನಿಲ್ದಾಣದ ಬಳಿಯ ಶ್ರೀ ಗಣೇಶ ಮಂದಿರದ ಮೂಲಕ ಸಾಗಿ, ಶ್ರೀ ಯಲ್ಲಾಲಿಂಗೇಶ್ವರ ಮಠ ತಲುಪಿ ಈ ಮೆರವಣಿಗೆ ಮಂಗಲಗೊಳಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ