ಆ್ಯಪ್ನಗರ

ರಾಷ್ಟ್ರ ಮಟ್ಟದ ಕಬಡ್ಡಿಗೆ ಮುಗಳಖೋಡ ವಿದ್ಯಾರ್ಥಿನಿಯರ ಆಯ್ಕೆ

ಮುಗಳಖೋಡ: ಪಟ್ಟಣದ ಶ್ರೀ ಸಿದ್ಧಲಿಂಗೇಶ್ವರ ಶಿಕ್ಷ ಣ ಸಂಸ್ಥೆಯ ...

Vijaya Karnataka 15 Aug 2019, 5:00 am
ಮುಗಳಖೋಡ: ಪಟ್ಟಣದ ಶ್ರೀ ಸಿದ್ಧಲಿಂಗೇಶ್ವರ ಶಿಕ್ಷ ಣ ಸಂಸ್ಥೆಯ ಸಿದ್ಧರಾಮೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಸ್ಟುಡೆಂಟ್ಸ್‌ ಓಲಂಪಿಕ್ಸ್‌ ಆಫ್‌ ಇಂಡಿಯಾ 2019-20ನೇ ಸಾಲಿನ ರಾಷ್ಟ್ರಮಟ್ಟದ ಮಹಿಳಾ ಕಬಡ್ಡಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
Vijaya Karnataka Web BLG-1408-2-52-14 MGKD 01


ಉತ್ತರಾಖಂಡದ ಹರಿದ್ವಾರದಲ್ಲಿ ಆ.17ರಿಂದ 20 ರವರೆಗೆ ನಡೆಯುವ 19 ಹಾಗೂ 17 ವರ್ಷದೊಳಗಿನ ವಿದ್ಯಾರ್ಥಿನಿಯರ ಕಬಡ್ಡಿ ಟೂರ್ನಾಮೆಂಟ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.

ಈ ವಿದ್ಯಾರ್ಥಿನಿಯರ ಕಬಡ್ಡಿ ತಂಡ ಬುಧವಾರ ಮುಂಬಯಿ ಹಾಗೂ ಡೆಹರಾಡೂನ್‌ ಮಾರ್ಗವಾಗಿ ಪ್ರಯಾಣ ಬೆಳೆಸಿತು. ವಿದ್ಯಾರ್ಥಿನಿಯರನ್ನು ಸಂಸ್ಥೆಯ ಕಾರ್ಯದರ್ಶಿ ಅಶೋಕ ಕೊಪ್ಪದ, ಪಾಲಕರು, ಸಂಸ್ಥೆ ಆಡಳಿತ ಮಂಡಳಿಯವರು, ಪ್ರಾಚಾರ್ಯರು ಹಾಗೂ ಶಿಕ್ಷ ಕವೃಂದದವರು ಬೀಳ್ಕೊಟ್ಟರು.

ಕರ್ನಾಟಕ ತಂಡದ ಕ್ಯಾಪ್ಟನ್‌ ಪೂಜಾ ಅರಳಿಗಿಡದ, ಉಪ ನಾಯಕಿ ಕೀರ್ತಿ ಬಾಬಣ್ಣವರ, ಚೈತ್ರಾ ತುಗದಳ್ಳಿ, ಸವಿತಾ ಯಡವಣ್ಣವರ, ರೂಪಾ ಅಂಗಡಿ, ಕೀರ್ತಿ ಗಸ್ತಿ, ಮಾಹಾದೇವಿ ಹಿಪ್ಪರಗಿ, ಸವಿತಾ ಅಂಗಡಿ, ವರ್ಷಾ ಖೇತಗೌಡರ, ಕರ್ನಾಟಕ ತಂಡದ ಕೋಚ್‌ ಬಿ.ಬಿ. ಬಂಡಿಗಣಿ, ಪ್ರಜಾತ ಹನಮಾಪುರೆ ತಂಡದಲ್ಲಿದ್ದಾರೆ. ರಾಷ್ಟ್ರದ ನಾನಾ ರಾಜ್ಯಗಳಿಂದ 31 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ