ಆ್ಯಪ್ನಗರ

ತೆರಿಗೆನೂ ಕಟ್ಬೇಕು.. ಚರಂಡಿನೂ ತೊಳೀಬೇಕು..

ಮುಗಳಖೋಡ: ಪಟ್ಟಣದ 7ನೇ ವಾರ್ಡ್‌ನ ಚರಂಡಿಗಳು ಕಸ-ಕಡ್ಡಿ, ಹೊಲಸು ತುಂಬಿ ರಸ್ತೆ ಮೇಲೆ ನೀರು ...

Vijaya Karnataka 3 May 2019, 5:00 am
ಮುಗಳಖೋಡ : ಪಟ್ಟಣದ 7ನೇ ವಾರ್ಡ್‌ನ ಚರಂಡಿಗಳು ಕಸ-ಕಡ್ಡಿ, ಹೊಲಸು ತುಂಬಿ ರಸ್ತೆ ಮೇಲೆ ನೀರು ಹರಿಯುತ್ತಿರುವುದರಿಂದ ನರಕ ಸದೃಶ ವಾತಾವರಣ ಉಂಟಾಗಿದೆ.
Vijaya Karnataka Web BLG-0205-2-52-02MGKD 01


ಪಟ್ಟಣದ 2, 3, 4 ಹಾಗೂ 7ನೇ ವಾರ್ಡ್‌ಗಳ ಚರಂಡಿಗಳನ್ನು ಸ್ವಚ್ಛಗೊಳಿಸಲು ಪುರಸಭೆ ಸಿಬ್ಬಂದಿ ಪ್ರತಿ ನಿತ್ಯ ಬರುತ್ತಿಲ್ಲ. 5ರಿಂದ 6 ತಿಂಗಳಿಂದ ಚರಂಡಿಗಳನ್ನು ಸ್ವಚ್ಛ ಮಾಡುವ ಗೋಜಿಗೆ ಹೋಗಿಲ್ಲ. ಇದರಿಂದಾಗಿ ಎಲ್ಲ ಓಣಿಗಳಲ್ಲಿ ಆಯಾ ಭಾಗದ ಸಾರ್ವಜನಿಕರೇ ತಮ್ಮ ಮನೆಗಳ ಮುಂದೆ ಚರಂಡಿ ಸ್ವಚ್ಛಗೊಳಿಸಿಕೊಳ್ಳುತ್ತಿದ್ದಾರೆ.

ಚರಂಡಿ ಒಳಗಿರುವ ತ್ಯಾಜ್ಯವನ್ನು ಮೇಲೆ ತೆಗೆದು ಹಾಕಿದ ನಂತರ ಅಲ್ಲಿಂದ ಒಯ್ಯಲು ಪುರಸಭೆ ವಾಹನಗಳು ಬರುತ್ತಿಲ್ಲ. ಮನೆಗಳ ಅಕ್ಕ ಪಕ್ಕದಲ್ಲಿ ನೀರು ನಿಲ್ಲುವುದರಿಂದ ಪ್ರತಿ ನಿತ್ಯ ಜಗಳ, ಬೀದಿ ರಂಪ, ಹೊಡೆದಾಟ ಸಾಮಾನ್ಯವಾಗಿವೆ.

ಚರಂಡಿಯಲ್ಲಿ ನಿಂತ ನೀರು ಹಲವು ರೋಗಗಳಿಗೆ ಆಹ್ವಾನ ನೀಡುತ್ತಿವೆ. ಸೊಳ್ಳೆ, ಬಿಡಾದಿ ಹಂದಿಗಳು ಹೆಚ್ಚಾಗಿರುವುದರಿಂದ ಮಲೇರಿಯಾ, ಡೆಂಗೆ, ಚಿಕೂನ್‌ ಗುನ್ಯಾ, ಕಾಲರಾದಂಥ ರೋಗಗಳ ಹರಡುವಿಕೆ ಆತಂಕ ಹೆಚ್ಚಾಗಿದೆ.

ಪುರಸಭೆ ಮುಖ್ಯಾಧಿಕಾರಿಗಳಿಗೆ ಹಲವಾರು ಬಾರಿ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಸದ್ಯ ನಾಗರಿಕರಾದ ನಾವು ತೆರಿಗೆ ಕಟ್ಟುವುದಲ್ಲದೆ ಚರಂಡಿಯನ್ನೂ ನಾವೇ ತೊಳೆಯಬೇಕಾಗಿ ಬಂದಿದೆ. ಪ್ರತಿ ನಿತ್ಯ ಪೌರಕಾರ್ಮಿಕರು ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಇಲ್ಲದಿದ್ದರೆ ಪುರಸಭೆಗೆ ಬೀಗ ಜಡಿದು ಪ್ರತಿಭಟಿಸಲಾಗುವುದು ಎಂದು ಇಲ್ಲಿನ ನಿವಾಸಿಗಳಾದ ಲಕ್ಷ ್ಮಣ ಚೌಗಲಾ, ತಮ್ಮಣ್ಣ ಗೌಲೆತ್ತಿನವರ, ಪ್ರಭು ಗೌಲೆತ್ತಿನವರ, ಹನಮಂತ ಚೌಗಲಾ, ಬಾಬು ಗೌಲೆತ್ತಿನವರ, ಸುರೇಶ ಗೌಲೆತ್ತಿನವರ, ಪರುಶರಾಮ ರಾವುತ್‌ ಮುಂತಾದವರು ಎಚ್ಚರಿಸಿದ್ದಾರೆ.

ಚುನಾವಣೆ ನೀತಿ ಸಂಹಿತಿಯಿಂದ ಕೆಲಸದಲ್ಲಿ ಸ್ವಲ್ಪ ವಿಳಂಬವಾಗಿದೆ. ಮೂರೇ ಜನ ಪೌರಕಾರ್ಮಿಕರು ಇರುವುದರಿಂದ ಕೆಲಸಕ್ಕೆ ಹಿನ್ನಡೆಯಾಗಿದೆ. ಒಂದು ತಿಂಗಳೊಳಗೆ ಕೆಲಸ ಪೂರ್ಣ ಮಾಡಿಕೊಡುತ್ತೇವೆ
- ಈರಣ್ಣ ಎಸ್‌. ದಡ್ಡಿ, ಪುರಸಭೆ ಮುಖ್ಯಾಧಿಕಾರಿ.

ಈಗಾಗಲೇ ಮುಖ್ಯಾಧಿಕಾರಿಗಳ ಜತೆ ಮಾತನಾಡಿ, ಇನ್ನು ಹದಿನೈದು ದಿನಗಳಲ್ಲಿ 7ನೇ ವಾರ್ಡ್‌ನಲ್ಲಿರುವ ಚರಂಡಿಗಳನ್ನು ಸ್ವಚ್ಛಗೊಳಿಸುತ್ತೇವೆ.
- ಚಂದ್ರಕಾಂತ ಗೌಲೆತ್ತಿನ್ನವರ ಪುರಸಭೆ ಸದಸ್ಯರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ