ಆ್ಯಪ್ನಗರ

ಧರಣಿ ಹಿಂತೆಗೆದುಕೊಂಡ ಪೌರ ಕಾರ್ಮಿಕರು

ಘಟಪ್ರಭಾ: ಸರಕಾರ ವೇತನ ನೀಡಲು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಮೂರು ದಿನಗಳಿಂದ ನಡೆಸುತ್ತಿದ್ದ ಧರಣಿಯನ್ನು ಶನಿವಾರ ಮಲ್ಲಾಪುರ ಪಿಜಿ ಪೌರ ಕಾರ್ಮಿಕರು ...

Vijaya Karnataka 23 Dec 2018, 5:00 am
ಘಟಪ್ರಭಾ : ಸರಕಾರ ವೇತನ ನೀಡಲು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಮೂರು ದಿನಗಳಿಂದ ನಡೆಸುತ್ತಿದ್ದ ಧರಣಿಯನ್ನು ಶನಿವಾರ ಮಲ್ಲಾಪುರ ಪಿಜಿ ಪೌರ ಕಾರ್ಮಿಕರು ಹಿಂತೆಗೆದುಕೊಂಡಿದ್ದಾರೆ.
Vijaya Karnataka Web BEL-22 GPB-3


ಪೌರಾಡಳಿತ ನಿರ್ದೇಶನಾಲಯದಿಂದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಮೇಲ್‌ ರವಾನಿಸಲಾಗಿದೆ. ಪೌರ ಕಾರ್ಮಿಕರಿಗೆ ಮಾತ್ರ ಸರಕಾರ ವೇತನ ನೀಡಲು ಒಪ್ಪಿದೆ. ಆದರೆ ಇನ್ನುಳಿದ ಕ್ಲರ್ಕ್‌ಗಳು, ಪಂಪ್‌ ಅಪ್‌ರೇಟರ್‌, ಡ್ರೈವರ್‌, ವಾಟರ್‌ ಮ್ಯಾನ್‌, ಲೈನ್‌ ಮ್ಯಾನ್‌ಗಳಿಗೆ ವೇತನ ನೀಡುವ ಬಗ್ಗೆ ಯಾವುದೇ ಆದೇಶ ಬಂದಿಲ್ಲ. ಇದರಿಂದ ಮಲ್ಲಾಪೂರ ಪಿ.ಜಿ.ಯ 30 ಜನ ಸಿಬ್ಬಂದಿಯಲ್ಲಿ 23 ಜನರಿಗೆ ವೇತನ ದೊರತರೆ ಇನ್ನು ಉಳಿದ 7ಜನ ವೇತನದಿಂದ ವಂಚಿತರಾಗಲಿದ್ದಾರೆ.

''ಸರಕಾರದ ಆದೇಶದಲ್ಲಿ ಹಿಂದಿನ 14 ತಿಂಗಳ ಸಂಬಳ ನೀಡುವ ಬಗ್ಗೆ ಹಾಗೂ ಮುಂದೆ ಯಾವಾಗಿನಿಂದ ವೇತನ ನೀಡಬೇಕೆಂಬ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಇದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಮೇಲಾಧಿಕಾರಿಗಳಿಂದ ಪಡೆದು ವೇತನ ನೀಡುತ್ತೇವೆ'', ಎಂದು ಪಪಂ ಮುಖ್ಯಾಧಿಕಾರಿ ಕೆ.ಬಿ.ಪಾಟೀಲ ತಿಳಿಸಿದರು. ಪಪಂ ಸದಸ್ಯರಾದ ಸಲೀಮ ಕಬ್ಬೂರ, ಇಮ್ರಾನ ಬಟಕುರ್ಕಿ, ಪ್ರವೀಣ ಮಟಗಾರ, ಸುರೇಶ ಪೂಜಾರಿ, ಜಿ.ಎಸ್‌.ರಜಪೂತ, ವೀರಭದ್ರ ಗಂಡವ್ವಗೋಳ, ಪರಶುರಾಮ ಗೋಕಾಕ, ಅಪ್ಪಾಸಾಬ ಮುಲ್ಲಾ ಸೇರಿದಂತೆ ಅನೇಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ