ಆ್ಯಪ್ನಗರ

ತಡೆಹಿಡಿದ ಸಂಬಳ ಸಂದಾಯಕ್ಕೆ ಪುರಸಭೆ ಕಾರ್ಮಿಕರ ಒತ್ತಾಯ

ಕಾಗವಾಡ: 9 ತಿಂಗಳಿಂದ ಸಂಬಳ ಸಂದಾಯವಾಗದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಉಗಾರ ಖುರ್ದ ಪುರಸಭೆ ಎದುರು 17 ಸಫಾಯಿ ಕಾರ್ಮಿಕರು ನಡೆಸುತ್ತಿದ್ದ ಉಪವಾಸ ...

Vijaya Karnataka 19 Sep 2018, 5:00 am
ಕಾಗವಾಡ: 9 ತಿಂಗಳಿಂದ ಸಂಬಳ ಸಂದಾಯವಾಗದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಉಗಾರ ಖುರ್ದ ಪುರಸಭೆ ಎದುರು 17 ಸಫಾಯಿ ಕಾರ್ಮಿಕರು ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವು ಮುಖ್ಯಾಧಿಕಾರಿಗಳ ಭರವಸೆಯ ಮೇರೆಗೆ ಮಂಗಳವಾರ ಅಂತ್ಯಗೊಂಡಿತು.
Vijaya Karnataka Web BEL-18 KAGWAD 3 NEWS PHOTO


'ಪಟ್ಟಣದ ಸ್ವಚ್ಛತೆಗೆ ನಿತ್ಯ ದುಡಿಯುವ ನಾವು ಸಂಬಳ ಬಾರದ ಹಿನ್ನೆಲೆಯಲ್ಲಿ ಸಂಕಷ್ಟದ ಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಕೈಯಲ್ಲಿ ಹಣವಿಲ್ಲದೆ ಕುಟುಂಬ ನಿರ್ವಹಣೆಗೆ ಸಾಲ ಸೋಲ ಮಾಡುತ್ತಿದ್ದೇವೆ. ಈಗ ನಮಗೆ ಯಾರೂ ಹಣ ನೀಡದ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರು ಬೀದಿಗೆ ಬೀಳುವಂತಾಗಿದೆ. ನಮ್ಮ ಹಕ್ಕು ನಾವು ಕೇಳುತ್ತಿದ್ದೇವೆ. ತಾಳ್ಮೆ ಪರೀಕ್ಷೆ ಮಾಡದೆ ದುಡಿದ ಸಂಬಳ ಕೊಡಿ' ಎಂದು ಪ್ರತಿಭಟನಾಕಾರರು ಅಧಿಕಾರಿಗಳಲ್ಲಿ ಮನವಿ ಮಾಡಿದರು.

ಈ ವೇಳೆ ಮಾತನಾಡಿದ ಮುಖ್ಯಾಧಿಕಾರಿ ಕಮಲವ್ವಾ ಭಾಗೋಜಿ 'ಇದು ರಾಜ್ಯ ಮಟ್ಟದ ಸಮಸ್ಯೆಯಾಗಿದ್ದು, ಸರಕಾರ ಈ ಬಗ್ಗೆ ಶೀಘ್ರ ನಿರ್ಣಯ ಕೈಗೊಳ್ಳಲಿದೆ' ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಪುರಸಭೆ ಕಾರ್ಮಿಕರಾದ ಪ್ರಕಾಶ ಕಾಂಬಳೆ, ಮಾರ್ಶಲ್‌ ಕುರಾಡೆ, ಕರಿಯಪ್ಪಾ ಜಂಗಲಿ, ದಯಾನಂದ ಕಾಂಬಳೆ, ರವಿ ಹಳ್ಳೂರ, ಲಕ್ಕವ್ವಾ ಮಾಂಗ ಸೇರಿದಂತೆ ಇನ್ನಿತರ ಸಫಾಯಿ ಕಾರ್ಮಿಕರು ಪಾಲ್ಗೊಂಡಿದ್ದರು.

ಪ್ರತಿಭಟನೆ ಹಿಂದಕ್ಕೆ:
ಬೆಳಗಾವಿ ಜಿಲ್ಲೆಯ 16 ಪಪಂ, ಪುರಸಭೆ ಕಾರ್ಮಿಕರು ಈ ಸಮಸ್ಯೆ ಎದುರಿಸುತ್ತಿದ್ದಾರೆ. ಕಾರ್ಮಿಕರ ಸಮಸ್ಯೆಗಳ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ, ರಾಜ್ಯದ ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಪುರಸಭೆ ಸದಸ್ಯರು ಮನವಿ ಸಲ್ಲಿಸಲಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರ ಗಮನಕ್ಕೂ ತರಲಾಗಿದೆ. ಶೀಘ್ರ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ಮುಖ್ಯಾಧಿಕಾರಿಗಳು ಮನವರಿಕೆ ಮಾಡಿಕೊಟ್ಟ ಮೇಲೆ ಪ್ರತಿಭಟನಾಕಾರರು ತಮ್ಮ ಹೋರಾಟವನ್ನು ಹಿಂತೆಗೆದುಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ