ಆ್ಯಪ್ನಗರ

ಮುಗಿಲ ಅಂಗಳದವರೆಗೆ ಮಾರ್ದನಿಸಿದ ಭಕ್ತಿಯ ಪರಾಕಾಷ್ಠೆ

ಮುರಗುಂಡಿ: ಎಲ್ಲೆಲ್ಲಿಯೂ ಭಂಡಾರ, ಅಪಾರ ಭಕ್ತಾದಿಗಳು, ನೆಲದ ಹಾಸು, ಪಲ್ಲಕ್ಕಿ, ದೇವಸ್ಥಾನದ ...

Vijaya Karnataka 14 Apr 2019, 5:00 am
ಮುರಗುಂಡಿ : ಎಲ್ಲೆಲ್ಲಿಯೂ ಭಂಡಾರ, ಅಪಾರ ಭಕ್ತಾದಿಗಳು, ನೆಲದ ಹಾಸು, ಪಲ್ಲಕ್ಕಿ, ದೇವಸ್ಥಾನದ ಅವರಣ, ಎಲ್ಲವೂ ಭಂಡಾರಮಯ.. ಈ ದೃಶ್ಯ ಕಂಡಿದ್ದು ಮುರಗುಂಡಿಯಲ್ಲಿ ನಡೆದ ಮುರಸಿದ್ದೇಶ್ವರ ದೇವರ ಜಾತ್ರೆಯಲ್ಲಿ.
Vijaya Karnataka Web BLG-1304-2-52-13MURAGUNDI1


ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಸುತ್ತಮುತ್ತಲಿನ ಚಿಕ್ಕಟ್ಟಿ, ಕೆರೂರ, ಜಂಬಗಿ, ಶಂಬರಗಿ, ತಂಗಡಿ, ಶಿನಾಳ, ಚಿಕ್ಕೋಡಿ, ಅಥಣಿಯಷ್ಟೇ ಅಲ್ಲದೆ ವಿಜಯಪುರ, ಬೆಳಗಾವಿ, ಮಹಾರಾಷ್ಟ್ರದ ಉಮರಾಣಿ, ಪಂಢÜರಪುರ ಸೇರಿದಂತೆ ಇನ್ನೂ ಅನೇಕ ಗ್ರಾಮಗಳಿಂದ ಅಸಂಖ್ಯಾತ ಭಕ್ತರು ಪಾಲ್ಗೊಂಡಿದ್ದರು

ರಾತ್ರಿ ಮುರಸಿದ್ದೇಶ್ವರ ದೇವರ ಪ್ರತಿಮೆಯನ್ನು ದೇವರ ಕುದುರೆಯೊಂದಿಗೆ ಹಸಿ ಬಟ್ಟೆಯ ಮೇಲೆ ಮೆರವಣಿಗೆಯ ಮೂಲಕ ಡೊಳ್ಳು ಬಾರಿಸುವುದರೊಂದಿಗೆ ಕರೆದುಕೊಂಡು ಬಂದ ನಂತರ ಅಭಿಷೇಕ, ನೈವೇದ್ಯ ನಡೆಯಿತು. ನಂತರ ಜಾತ್ರೆಯ ಮಹತ್ವದ ಘಟ್ಟವಾದ ಸಮೀನ ತಿರುಗುವುದು, ಅಂದರೆ ಪಲ್ಲಕ್ಕಿಯೊಂದಿಗೆ ಪ್ರದಕ್ಷಿಣೆ ಹಾಕುವ ಪದ್ಧತಿ, ಆ ಸಮಯದಲ್ಲಿ ಭಕ್ತಾದಿಗಳು ಭಂಡಾರ ಹಾರಿಸಿ, ಡೊಳ್ಳು, ದಟ್ಟಿ ಕುಣಿತದೊಂದಿಗೆ ಪಲ್ಲಕ್ಕಿಯನ್ನು ಹೊತ್ತುಕೊಂಡು ವಿಶಾಲ ಪ್ರಾಂಗಣದ ಐದು ಸುತ್ತು ಪ್ರದಕ್ಷಿಣೆ ಹಾಕುವ ಸಂಪ್ರದಾಯ ನಡೆಯಿತು.

ವಿಜಯಪುರದಿಂದ ಪಾದಯಾತ್ರೆ ಮೂಲಕ ಹೂವಿನ ಹೆಡಗೆ ತಂದು ಅದನ್ನು ಮುರಸಿದ್ದೇಶ್ವರನಿಗೆ ಅರ್ಪಣೆ ಮಾಡಿ ಅದರಲ್ಲಿರುವ ಹೂವುಗಳನ್ನು ಏರಿಸಿ, ಸಿಂಗರಿಸಿದ ನಂತರ , ವಿಶೇಷ ಪೂಜೆಯೊಂದಿಗೆ ಜಾತ್ರೆಯ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭವಾದವು.

ಜಾತ್ರೆಯ ವಿಶೇಷವಾದ ದೇವರನುಡಿ ಹೇಳುವುದು 'ಕವಲು ಹಚ್ಚುವುದು' ನಡೆಯಿತು. ಈ ಬಾರಿ ಮಳೆ, ಬೆಳೆ, ಪ್ರಕೃತಿ ವಿಕೋಪ ಮುಂತಾದವುಗಳ ಕುರಿತಾಗಿ ದೇವರ ನುಡಿ ಹೇಳಲಾಯಿತು.

ವಸತಿ ಮಾಡುವ ಜಾತ್ರಾರ್ಥಿಗಳು ತಾವು ಕಟ್ಟಿಕೊಂಡು ಬಂದ ಚಕ್ಕಡಿ ಬಂಡಿಗಳನ್ನು ನಿಲ್ಲಿಸಿ ಟೆಂಟ್‌ ಗಳನ್ನು ಹಾಕಿಕೊಂಡು ವಸತಿ ವ್ಯವಸ್ಥೆ ಮಾಡಿಕೊಂಡಿದ್ದರು. ಜಾತ್ರಾ ಕಮಿಟಿಯಿಂದ ನೀರು ಹಾಗೂ ಬೆಳಕಿನ ವ್ಯವಸ್ಥೆ ಮಾಡಲಾಗಿತ್ತು. ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.

ಜಾತ್ರಾಕಮಿಟಿಯಿಂದ ಸ್ವಚ್ಛತೆಯ ವ್ಯವಸ್ಥೆ ಹಾಗೂ ಭದ್ರತೆಯ ವ್ಯವಸ್ಥೆ ಕಲ್ಪಿಸಿದ್ದರಿಂದ ಸಹಸ್ರಾರು ಜಾತ್ರಾರ್ಥಿಗಳು ಬಂದು ಹೋಗುವಾಗಲೂ ಸಹ ಯಾವುದೇ ಅಹಿತಕರ ಘಟನೆ ನಡೆಯದೇ ಜಾತ್ರೆ ನಡೆಯಿತು. ದೇವಸ್ಥಾನಕ್ಕೆ ವಿಶೇಷ ರೀತಿಯ ವಿದ್ಯುದ್ದೀಪದ ಅಲಂಕಾರ ನೋಡುಗರನ್ನು ಆಕರ್ಷಿಸಿತು.

ಮುರಸಿದ್ದೇಶ್ವರ ದೇವರು ಮತ್ತೆ ಪುರಪ್ರವೇಶ ಮಾಡಿಸಿದ ನಂತರ ಜಾತ್ರೆ ಸಂಪನ್ನಗೊಂಡಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ