ಆ್ಯಪ್ನಗರ

ಕೊಲೆ ಆರೋಪಿಗಳ ಬಂಧನ

ಯರಗಟ್ಟಿ: ಸಮೀಪದ ದಾಸನಾಳ ಗ್ರಾಮದ ಹತ್ತಿರ ಮಮದಾಪುರ ಗ್ರಾಮದ ಮಾಬುಸಾಬ ಸೈದುಸಾಬ ಬೇವಿನಗಿಡದ ಎಂಬುವರ ಕೊಲೆ ಮಾಡಿದ ಆರೋಪದ ಮೇಲೆ ಪೊಲೀಸರು ಇಬ್ಬರನ್ನು ...

Vijaya Karnataka 29 Nov 2018, 5:00 am
ಯರಗಟ್ಟಿ : ಸಮೀಪದ ದಾಸನಾಳ ಗ್ರಾಮದ ಹತ್ತಿರ ಮಮದಾಪುರ ಗ್ರಾಮದ ಮಾಬುಸಾಬ ಸೈದುಸಾಬ ಬೇವಿನಗಿಡದ ಎಂಬುವರ ಕೊಲೆ ಮಾಡಿದ ಆರೋಪದ ಮೇಲೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
Vijaya Karnataka Web murder accused attested
ಕೊಲೆ ಆರೋಪಿಗಳ ಬಂಧನ


ಮಮದಾಪುರ ಗ್ರಾಮದ ಸಿದ್ದಪ್ಪ ಲಕ್ಷ ್ಮಣ ಹೆಗಡೆ (36), ವಿಠಲ ಲಕ್ಷ ್ಮಣ ಹೆಗಡೆ (25) ಬಂಧಿತರು. ಆರೋಪಿಗಳು ಮಾಬುಸಾಬ ಹತ್ತಿರ 8 ಲಕ್ಷ ರೂ. ಸಾಲ ಪಡೆದಿದ್ದರು. ಸಾಲ ಮರಳಿಸುವಂತೆ ಪದೇ ಪದೆ ಕೇಳಿದ್ದಕ್ಕಾಗಿ ಆ.22ರಂದು ರಾತ್ರಿ ಆರೋಪಿಗಳು ಮಾಬುಸಾಬ ಅವರನ್ನು ಗೋಕಾಕ ತಾಲೂಕಿನ ಮಮದಾಪುರದಿಂದ ಬೈಕ್‌ ಮೇಲೆ ಕರೆದುಕೊಂಡು ಬಂದು ಸವದತ್ತಿ ತಾಲೂಕಿನ ದಾಸನಾಳ ಗ್ರಾಮದ ಕಾಲುವೆಯ ನಾಲ್ಕನೇ ಗೇಟ್‌ನಲ್ಲಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದರು. ಈ ಕುರಿತು ಮುರಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ರಾಮದುರ್ಗ ಡಿಎಸ್‌ಪಿ ಬಿ.ಎಸ್‌. ಪಾಟೀಲ, ಸಿಪಿಐ ಎಂ.ಪಿ. ಸರವ್ವಗೋಳ, ಪಿಎಸ್‌ಐ ಪ್ರಸಾದ ಪಣೇಕರ, ಸಿಬ್ಬಂದಿ ಸಂತೋಷ ದಯನ್ನವರ, ಜಿ.ಎಸ್‌. ಪತ್ತಾರ, ಎಸ್‌.ಎಸ್‌. ಜನಾಯಿ, ಆರ್‌.ಎಸ್‌. ಖೇಮಾಳಿ ತಂಡ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ