ಆ್ಯಪ್ನಗರ

ನೇಸರಗಿ ವ್ಯಕ್ತಿ ಕೊಲೆ ಪ್ರಕರಣ; ಐವರು ಆರೋಪಿಗಳ ಬಂಧನ

ಘಟಪ್ರಭಾ: ನೇಸರಗಿ ವ್ಯಕ್ತಿ ಕೊಲೆ ಪ್ರಕರಣದ ಐವರು ಆರೋಪಿಗಳನ್ನು ಘಟಪ್ರಭಾ ಠಾಣೆ ಪೊಲೀಸರು ...

Vijaya Karnataka 18 Jun 2019, 5:00 am
ಘಟಪ್ರಭಾ : ನೇಸರಗಿ ವ್ಯಕ್ತಿ ಕೊಲೆ ಪ್ರಕರಣದ ಐವರು ಆರೋಪಿಗಳನ್ನು ಘಟಪ್ರಭಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web BEL-17GPB-1


ಗೋಕಾಕದ ನಿವಾಸಿಗಳಾದ ಮನೋಜಕುಮಾರ ವಾಲಿಕಾರ, ಜ್ಯೋತಿಬಾ ರವಳೋಜಿ, ರಾಹುಲ್‌ ಎಂಟಗೌಡರ, ಮಂಜುನಾಥ ಕಲ್ಲೋಳಿ, ಸಾಗರ ತಾನಾಜಿ ಬಂಧಿತ ಆರೋಪಿಗಳು.

ಬೈಲಹೊಂಗಲ ತಾಲೂಕಿನ ನೇಸರಗಿಯ ನಿವಾಸಿ ಜಗದೀಶ ತಿಪ್ಪಣ್ಣ ಕರಾಳಿ (35) ಅವರ ಶವ ಏ.16ರಂದು ಘಟಪ್ರಭಾ ಎಡದಂಡೆ ಕಾಲುವೆಯಲ್ಲಿ ಪತ್ತೆಯಾಗಿತ್ತು. ಈ ಕುರಿತು ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಘಟನೆಯ ಹಿನ್ನೆಲೆ: ಜಗದೀಶ ತಿಪ್ಪಣ್ಣ ಕರಾಳಿ ಬಳಿ ಇರುವ ಹಣ ದೋಚುವ ಸಲುವಾಗಿ ಅವರನ್ನು ಆರೋಪಿಗಳು ಗೋಕಾಕದ ಸಂಗೊಳ್ಳಿ ರಾಯಣ್ಣನ ಸರ್ಕಲ್‌ನಿಂದ ರಿಕ್ಷಾದಲ್ಲಿ ಅಪಹರಿಸಿದ್ದರು. ಬಳಿಕ ಶಿಂಗ್ಳಾಪುರ ಹತ್ತಿರ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಣ ಕಸಿದುಕೊಂಡು ಕೊಲೆ ಮಾಡಿದ್ದರು. ಪುರಾವೆ ನಾಶ ಮಾಡುವ ಉದ್ದೇಶದಿಂದ ತುಂಬಿ ಹರಿಯುತ್ತಿರುವ ಘಟಪ್ರಭಾ ಎಡದಂಡೆ ಕಾಲುವೆಗೆ ಶವ ಎಸೆದು ಪರಾರಿಯಾಗಿದ್ದರು. ವಿಚಾರಣೆ ವೇಳೆ ಇದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಿಂದ ರಿಕ್ಷಾ, ಮೋಟಾರ್‌ ಸೈಕಲ್‌ ಮತ್ತು ಮೊಬೈಲ್‌ ಪೋನ್‌ ವಶಪಡಿಸಿಕೊಳ್ಳಲಾಗಿದೆ. ಮೂಡಲಗಿ ಸಿಪಿಐ ವೆಂಕಟೇಶ ಮುರನಾಳ, ಘಟಪ್ರಭಾ ಪಿಎಸ್‌ಐ ವೈ.ಆರ್‌.ಬಿಳಿಗಿ ಹಾಗೂ ಸಿಬ್ಬಂದಿ ತನಿಖೆ ಕೈಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ