ಆ್ಯಪ್ನಗರ

ಕಲ್ಲಿನಿಂದ ಹೊಡೆದು ಸಹೋದರನ ಕೊಲೆ

ಅರಣ್ಯ ಇಲಾಖೆಯ ಅತಿಕ್ರಮಿತ ಭೂಮಿ ವಿಷಯವಾಗಿ ಸಹೋದರನನ್ನೇ ಕೊಲೆ ಮಾಡಿದ ಘಟನೆ ತಾಲೂಕಿನ ಹಾಲಭಾವಿ ಗ್ರಾಮದಲ್ಲಿ ನಡೆದಿದೆ...

Vijaya Karnataka 28 May 2019, 5:00 am
ಬೆಳಗಾವಿ: ಅರಣ್ಯ ಇಲಾಖೆಯ ಅತಿಕ್ರಮಿತ ಭೂಮಿ ವಿಷಯವಾಗಿ ಸಹೋದರನನ್ನೇ ಕೊಲೆ ಮಾಡಿದ ಘಟನೆ ತಾಲೂಕಿನ ಹಾಲಭಾವಿ ಗ್ರಾಮದಲ್ಲಿ ನಡೆದಿದೆ. ಹಾಲಭಾವಿಯ ಲಗಮಪ್ಪ ಶೆಟ್ಟೆಪ್ಪ ನಾಯಿಕ್‌(50) ಕೊಲೆಯಾದ ವ್ಯಕ್ತಿ.
Vijaya Karnataka Web murder of a brother by assault with stone
ಕಲ್ಲಿನಿಂದ ಹೊಡೆದು ಸಹೋದರನ ಕೊಲೆ


ಕಾಕತಿ ಅರಣ್ಯ ವ್ಯಾಪ್ತಿಯ ಅತಿಕ್ರಮಿತ ಭೂಮಿಯಲ್ಲಿ ಒಡ್ಡು ನಿರ್ಮಿಸುವ ವಿಷಯವಾಗಿ ಲಗಮಪ್ಪ ನಾಯಿಕ್‌ ಸಹೋದರರ ನಡುವೆ ಜಗಳ ನಡೆದಿತ್ತು. ಇದೇ ಕಾರಣಕ್ಕೆ ಸೋಮವಾರ ಬೆಳಗ್ಗೆ ಈರಪ್ಪ ಶೆಟ್ಟೆಪ್ಪ ನಾಯಿಕ್‌, ಸಚಿನ್‌ ಲಗಮಪ್ಪ ನಾಯಿಕ್‌, ಪರಪ್ಪ ಮಲ್ಲಪ್ಪ ಕಟಬಾಳ ಎನ್ನುವವರು ಲಗಮಪ್ಪ ನಾಯಿಕ್‌ ಮತ್ತು ಆತನ ಸಹೋದರ ರಾಮಪ್ಪ ಶೆಟ್ಟೆಪ್ಪ ನಾಯಿಕ್‌ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ತಲೆ ಹಿಂಭಾಗಕ್ಕೆ ಕಲ್ಲಿನಿಂದ ಹೊಡೆದಿದ್ದರಿಂದ ತೀವ್ರ ರಕ್ತಸ್ರಾವಗೊಂಡ ಲಗಮಪ್ಪ ಮೃತಪಟ್ಟಿದ್ದಾರೆ.

ಈ ಕುರಿತು ರಾಮಪ್ಪ ನಾಯಿಕ್‌ ಕಾಕತಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಕಾಕತಿ ಠಾಣೆ ಪೊಲೀಸರು ಈರಪ್ಪ ನಾಯಿಕ್‌, ಸಚಿನ್‌ ನಾಯಿಕ್‌, ಪರಪ್ಪ ಕಟಬಾಳ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ