ಆ್ಯಪ್ನಗರ

ಲಾಡ್ಜ್‌ನಲ್ಲಿ ವ್ಯಕ್ತಿ ಕೊಲೆ; ಆರೋಪಿ ಬಂಧನ

ಬೆಳಗಾವಿ: ನಗರದ ಸಂಗೊಳ್ಳಿ ರಾಯಣ್ಣ ವೃತ್ತ ಬಳಿಯ ಲಾಡ್ಜ್‌ವೊಂದರಲ್ಲಿ ಮದ್ಯದ ...

Vijaya Karnataka 14 Oct 2019, 5:00 am
ಬೆಳಗಾವಿ: ನಗರದ ಸಂಗೊಳ್ಳಿ ರಾಯಣ್ಣ ವೃತ್ತ ಬಳಿಯ ಲಾಡ್ಜ್‌ವೊಂದರಲ್ಲಿಮದ್ಯದ ಅಮಲಿನಲ್ಲಿಸ್ನೇಹಿತನನ್ನೇ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಆರೋಪಿಯನ್ನು ಮಾರ್ಕೆಟ್‌ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
Vijaya Karnataka Web murder of a man at a lodge the arrest of the accused
ಲಾಡ್ಜ್‌ನಲ್ಲಿ ವ್ಯಕ್ತಿ ಕೊಲೆ; ಆರೋಪಿ ಬಂಧನ


ಹಿಡಕಲ್‌ ಡ್ಯಾಂನ ಶಶಿಕುಮಾರ ಉದ್ದಪ್ಪಗೋಳ (21) ಬಂಧಿತ ಆರೋಪಿ. ಈತನನ್ನು ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ. ಸೆ.30 ರಂದು ಲಾಡ್ಜ್‌ನಲ್ಲಿಘಟಪ್ರಭಾದ ವಿನಾಯಕ ರಾಯಬಾಗಕರ ಕೊಲೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಬಾಲಕ ಸೇರಿ ಇಬ್ಬರು ಆರೋಪಿಗಳನ್ನು ಮಾರ್ಕೆಟ್‌ ಠಾಣೆ ಪೊಲೀಸರು ಕೊಲೆ ನಡೆದ ದಿನವೇ ಬಂಧಿಸಿದ್ದರು.

ಕೊಲೆಯಾದ ಯುವಕ ಮತ್ತು ಆರೋಪಿಗಳೆಲ್ಲರೂ ಒಂದೇ ಲಾಡ್ಜ್‌ನಲ್ಲಿಕೆಲಸ ಮಾಡುತ್ತಿದ್ದರು. ಸೆ. 30ರಂದು ಶಶಿಕುಮಾರ ಜನ್ಮದಿನದ ಹಿನ್ನೆಲೆಯಲ್ಲಿನಾಲ್ವರು ಸೇರಿ ಪಾರ್ಟಿ ಮಾಡುತ್ತಿದ್ದರು. ಗದ್ದಲ ಮಾಡದಂತೆ ತಕರಾರು ಮಾಡಿದ್ದ ವಿನಾಯಕ ಮೇಲೆ ಆರೋಪಿಗಳು ಬಿಯರ್‌ ಬಾಟಲಿಯಿಂದ ಹಲ್ಲೆಮಾಡಿದ್ದರು. ಬಳಿಕ ಮೃತದೇಹವನ್ನು ಶೌಚಾಲಯದಲ್ಲಿಬಿಸಾಕಿದ್ದರು. ಬೆಳಗ್ಗೆ ಲಾಡ್ಜ್‌ ಮಾಲೀಕ ವಿನಾಯಕನ ಬಗ್ಗೆ ವಿಚಾರಿಸಿ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ