ಆ್ಯಪ್ನಗರ

ರಾಡ್‌ನಿಂದ ತಲೆಗೆ ಹೊಡೆದು ಪ್ರೇಯಸಿಯ ಬರ್ಬರ ಹತ್ಯೆ

ಬೋರಗಾಂವವಾಡಿ-ಕಸನಾಳ ರಸ್ತೆ ಬದಿಯ ಹೊಲದಲ್ಲಿ ಯುವತಿಯೊಬ್ಬಳ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ತಾನೇ ಹತ್ಯೆ ಮಾಡಿರುವುದಾಗಿ ಆಕೆಯ ಪ್ರಿಯರನ ಪೊಲೀಸರ ಎದುರು ಒಪ್ಪಿಕೊಂಡಿದ್ದಾನೆ.

Vijaya Karnataka Web 1 Aug 2019, 5:00 am
ಬೋರಗಾಂವ (ಬೆಳಗಾವಿ) : ಸಮೀಪದ ಬೋರಗಾಂವವಾಡಿ-ಕಸನಾಳ ರಸ್ತೆ ಬದಿಯ ಹೊಲದಲ್ಲಿ ಯುವತಿಯೊಬ್ಬಳ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ತಾನೇ ಹತ್ಯೆ ಮಾಡಿರುವುದಾಗಿ ಆಕೆಯ ಪ್ರಿಯರನ ಪೊಲೀಸರ ಎದುರು ಒಪ್ಪಿಕೊಂಡಿದ್ದಾನೆ.
Vijaya Karnataka Web BEL-31CKD9


ಮಹಾರಾಷ್ಟ್ರದ ಶಿರೋಳ ತಾಲೂಕಿನ ಜಾಂಬಳಿ ಗ್ರಾಮದ ಅಮೃತಾ ಅನಿಲ್‌ ಕುಂಬಾರ (24) ಮೃತ ಯುವತಿ. ಘಟನೆ ಸಂಬಂಧ ಬಾರವಾಡ ಗ್ರಾಮದ ಪ್ರಿಯಕರ ಯೋಗೇಶ್‌ ವಿಲಾಸ್‌ ಚೌಗುಲೆ (25) ಎಂಬಾತನನ್ನು ಸದಲಗಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನೆ ವಿವರ: ಯೋಗೇಶ್‌ ಮತ್ತು ಅಮೃತಾ ಮಧ್ಯೆ ಪ್ರೇಮ ಸಂಬಂಧವಿತ್ತು. ಆದರೆ ಅಮೃತಾಳ ಮನೆಯವರು ಮಹಾರಾಷ್ಟ್ರದ ಇಸ್ಲಾಂಪುರದ ಯುವಕನೊಂದಿಗೆ ಆಕೆಯ ನಿಶ್ಚಿತಾರ್ಥ ನೆರವೇರಿಸಿದ್ದರು. ಇದರಿಂದ ಬೇಸರ ಹಾಗೂ ಆಕ್ರೋಶಗೊಂಡ ಯೋಗೇಶ್‌ ''ಕೊನೆಯ ಭೇಟಿಯಾಗೋಣ'' ಎಂದು ಹೇಳಿ ಅಮೃತಾಳನ್ನು ಜು.27ರಂದು ಕರೆಸಿಕೊಂಡು, ಕೊಲೆ ಮಾಡಿದ್ದಾನೆ. ನಂತರ ಜು.30ರಂದು ಸ್ವತಃ ನಿಪ್ಪಾಣಿ ನಗರ ಪೊಲೀಸ್‌ ಠಾಣೆಗೆ ಹಾಜರಾಗಿ ಶರಣಾಗಿದ್ದಾನೆ.

ಘಟನೆ ನಡೆದ ಸ್ಥಳ ಸದಲಗಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿರುವುದರಿಂದ ನಿಪ್ಪಾಣಿ ಪೊಲೀಸರು ಸದಲಗಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್‌ ಅಧೀಕ್ಷಕ ಮಿಥುನ್‌ಕುಮಾರ್‌, ಸಿಪಿಐ ಬಸವರಾಜ ಮುಕರ್ತಿಹಾಳ, ಪಿಎಸ್‌ಐ ಸಂಗಮೇಶ ದಿಡಿಗಿನಹಾಳ ಮೊದಲಾದವರು ಸ್ಥಳ ಪರಿಶೀಲನೆ ನಡೆಸಿ ಮೃತದೇಹದ ಪಂಚನಾಮೆ ನಡೆಸಿದರು. ಯುವತಿಯ ಮೃತದೇಹದ ಕೆಲಭಾಗವನ್ನು ಪ್ರಾಣಿಗಳು ತಿಂದಿದ್ದರಿಂದ ಆಕೆಯ ಮುಖ ಗುರುತು ಸಿಗದಂತಾಗಿತ್ತು.

ಘಟನೆ ಕುರಿತು ಸದಲಗಾ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ