ಆ್ಯಪ್ನಗರ

ಚಿಕ್ಕೋಡಿ ಬದಲು ಘಟಪ್ರಭಾದಲ್ಲಿ ಮೋದಿ ಸಮಾವೇಶ?

ಏ.18ಕ್ಕೆ ಚಿಕ್ಕೋಡಿಯಲ್ಲಿ ನಿಗದಿಯಾಗಿರುವ ಪ್ರಧಾನಿ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರ ಸಮಾವೇಶವನ್ನು ಘಟಪ್ರಭಾದಲ್ಲಿ ನಡೆಸಲು ಬಿಜೆಪಿ ಮುಖಂಡರು ಪ್ರಯತ್ನಿಸುತ್ತಿದ್ದಾರೆ.

Vijaya Karnataka 6 Apr 2019, 5:00 am
ಘಟಪ್ರಭಾ: ಏ.18ಕ್ಕೆ ಚಿಕ್ಕೋಡಿಯಲ್ಲಿ ನಿಗದಿಯಾಗಿರುವ ಪ್ರಧಾನಿ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರ ಸಮಾವೇಶವನ್ನು ಘಟಪ್ರಭಾದಲ್ಲಿ ನಡೆಸಲು ಬಿಜೆಪಿ ಮುಖಂಡರು ಪ್ರಯತ್ನಿಸುತ್ತಿದ್ದಾರೆ.
Vijaya Karnataka Web BEL-IMG-20190405-WA0102


ಈ ಹಿನ್ನೆಲೆಯಲ್ಲಿ, ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ಸಂಸದ ಸುರೇಶ್‌ ಅಂಗಡಿ, ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಮುಖಂಡ ಈರಣ್ಣ ಕಡಾಡಿ ಮೊದಲಾದವರು ಶುಕ್ರವಾರ ಸಂಜೆ ಇಲ್ಲಿನ ಕರ್ನಾಟಕ ಆರೋಗ್ಯ ಧಾಮ (ಕೆಎಚ್‌ಐ)ದಲ್ಲಿ ಸ್ಥಳ ಪರಿಶೀಲಿಸಿ, ಆಡಳಿತ ಮಂಡಳಿಯೊಂದಿಗೆ ಚರ್ಚಿಸಿದರು.

ಈ ವೇಳೆ, ಟ್ರಸ್ಟಿ ಹಾಗೂ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಘನಶ್ಯಾಮ ವೈದ್ಯ ರಾಜಕೀಯ ಚಟುವಟಿಕೆಗಳಿಂದ ಹೊರತಾಗಿರುವ ಆರೋಗ್ಯ ಧಾಮದಲ್ಲಿ ಸಮಾವೇಶಕ್ಕೆ ಸ್ಥಳಾವಕಾಶ ನೀಡುವ ಕುರಿತು ಆಡಳಿತ ಮಂಡಳಿಯ ಎಲ್ಲ ಸದಸ್ಯರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರೆಂದು ಬಿಜೆಪಿ ಮೂಲಗಳು ಹೇಳಿವೆ.

ಬಿಜೆಪಿ ಮುಖಂಡರಾದ ಸುರೇಶ ಪಾಟೀಲ, ಸುರೇಶ ಕಾಡದವರ, ವಿರೂಪಾಕ್ಷಿ ಯಲಿಗಾರ ಸೇರಿ ಹಲವರು ಹಾಜರಿದ್ದರು.

ಚಿಕ್ಕೋಡಿ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರಗಳ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಘಟಪ್ರಭಾ ಹತ್ತಿರದಲ್ಲಿದೆ. ಅಲ್ಲದೆ, ಪ್ರಧಾನಿ ಮೋದಿ ಅವರು ಈವರೆಗೆ ಗೋಕಾಕ ತಾಲೂಕಿಗೆ ಬಾರದ ಕಾರಣ ಘಟಪ್ರಭಾದಲ್ಲಿ ಕಾರ‍್ಯಕ್ರಮ ಮಾಡಲು ಪ್ರಯತ್ನಿಸುತ್ತಿದ್ದೇವೆ.
- ಬಾಲಚಂದ್ರ ಜಾರಕಿಹೊಳಿ, ಶಾಸಕ.

ಪ್ರಧಾನಿ ಮೋದಿ ಅವರ ಕಾರ್ಯಕ್ರಮಕ್ಕಾಗಿ ಇನ್ನೂ ಕೆಲ ಸ್ಥಳಗಳನ್ನು ಪರಿಶೀಲಿಸುತ್ತಿದ್ದೇವೆ. ಕೆಎಚ್‌ಐ ಸೂಕ್ತ ಸ್ಥಳವಾಗಿದ್ದರಿಂದ ಅವಕಾಶ ನೀಡಲು ವಿನಂತಿಸಲಾಗಿದೆ. ಅವರು ಒಪ್ಪಿಗೆ ನೀಡಿದರೆ ಭದ್ರತಾ ತಂಡದ ಪರಿಶೀಲನೆ ನಂತರ ಏ.18ರ ಮೋದಿ ಸಮಾವೇಶವನ್ನು ಘಟಪ್ರಭಾದಲ್ಲಿ ನಡೆಸುತ್ತೇವೆ.
- ಸುರೇಶ್‌ ಅಂಗಡಿ, ಸಂಸದ ಹಾಗೂ ಅಭ್ಯರ್ಥಿ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ