ಅಥಣಿ: ''ಕಾಂಗ್ರೆಸ್ ಹೈಕಮಾಂಡ್ ನನಗೆ ಟಿಕೆಟ್ ನೀಡುವುದಾಗಿ ಭರವಸೆ ನೀಡಿ ಕೊನೆ ಗಳಿಗೆಯಲ್ಲಿನಿರಾಸೆ ಉಂಟು ಮಾಡಿದೆ. ಆದ್ದರಿಂದ ನನ್ನ ಕಾರ್ಯಕರ್ತರ ಒತ್ತಾಸೆಯಿಂದ ನಾವೆಲ್ಲಸಹೋದರರು ಒಂದಾಗಿ ಚುನಾವಣೆ ಎದುರಿಸುತ್ತೇವೆ. ಯಾವ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ'' ಎಂದು ಹಿರಿಯ ಕಾಂಗ್ರೆಸ್ ಮುಖಂಡ ಸದಾಶಿವ ಬುಟಾಳೆ ಹೇಳಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಈ ಹಿಂದೆ ಜೆಡಿಎಸ್ನಿಂದ ಮೂರು ಬಾರಿ ಸ್ಪರ್ಧಿಸಿದ್ದೇನೆ. ಜನರೊಂದಿಗೆ ಸಂಪರ್ಕ ಹೊಂದಿದ್ದು ಗೆಲುವು ನನ್ನದೇ ಎಂಬ ಆತ್ಮವಿಶ್ವಾಸವಿದೆ'' ಎಂದರು. ಬಸವರಾಜ ಬುಟಾಳೆ, ಸುಭಾಷ ಪಾಟಣಕರ, ರೇವಣಸಿದ್ದಪ್ಪ ಖ್ಯಾಡಿ, ಮಲ್ಲಿಕಾರ್ಜುನ ಬುಟಾಳೆ, ಭರತ ಲೋನಾರಿ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ಸ್ಪರ್ಧೆಯಿಂದ ಹಿಂದೆ ಸರಿಯಲಾರೆ ಎಂದ ಬುಟಾಳಿ
ಅಥಣಿ: ''ಕಾಂಗ್ರೆಸ್ ಹೈಕಮಾಂಡ್ ನನಗೆ ಟಿಕೆಟ್ ನೀಡುವುದಾಗಿ ಭರವಸೆ ನೀಡಿ ಕೊನೆ ಗಳಿಗೆಯಲ್ಲಿನಿರಾಸೆ ಉಂಟು ಮಾಡಿದೆ...
Vijaya Karnataka Web 19 Nov 2019, 5:00 am