ಆ್ಯಪ್ನಗರ

ಬೆಳಗಾವಿಗೆ ಇಂದು ನೂತನ ಸಚಿವ ಸವದಿ

ನೂತನ ಸಚಿವ ಲಕ್ಷ ್ಮಣ ಸವದಿ ಅವರು ಬುಧವಾರ ಜಿಲ್ಲೆಗೆ ಆಗಮಿಸಲಿದ್ದಾರೆ ಸಾಂಬ್ರಾ ವಿಮಾನ ...

Vijaya Karnataka 21 Aug 2019, 5:00 am
ಬೆಳಗಾವಿ: ನೂತನ ಸಚಿವ ಲಕ್ಷ ್ಮಣ ಸವದಿ ಅವರು ಬುಧವಾರ ಜಿಲ್ಲೆಗೆ ಆಗಮಿಸಲಿದ್ದಾರೆ. ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 11.30ಕ್ಕೆ ಅವರು ಆಗಮಿಸಲಿದ್ದು, ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಪ್ರವಾಹಕ್ಕೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಲಿದ್ದಾರೆ. ಜಿಲ್ಲೆ ಪ್ರವಾಹ ಪೀಡಿತವಾಗಿರುವುದರಿಂದ ತಮ್ಮ ಸ್ವಾಗತಕ್ಕೆ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಹಾರ-ತುರಾಯಿ ತರಬಾರದು. ಸಾರ್ವಜನಿಕರು ತಮ್ಮ ಸಮಸ್ಯೆ ಅಥವಾ ಅಹವಾಲು ತಿಳಿಸಿದರೆ ಸಾಕು ಎಂದು ಅವರು ಮನವಿ ಮಾಡಿದ್ದಾರೆ. ''ಪ್ರವಾಹ ಪರಿಸ್ಥಿತಿ ಕುರಿತು ಅಧಿಕಾರಿಗಳ ಜತೆ ಚರ್ಚಿಸಿದ ಬಳಿಕ ಗುರುವಾರದಿಂದ ಗೋಕಾಕ, ಕಿತ್ತೂರು ಸೇರಿದಂತೆ ಪ್ರವಾಹ ಬಾಧಿತ ನಾನಾ ಪ್ರದೇಶಗಳಿಗೆ ಭೇಟಿ ನೀಡಿ, ಜನರ ಅಹವಾಲು ಆಲಿಸುತ್ತೇನೆ'', ಎಂದು ಸಚಿವ ಲಕ್ಷ ್ಮಣ ಸವದಿ ತಿಳಿಸಿದ್ದಾರೆ.
Vijaya Karnataka Web BEL-20 LBS 15

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ