ಆ್ಯಪ್ನಗರ

​ಹೊಸ ಸಾಂಬ್ರಾ ವಿಮಾನ ನಿಲ್ದಾಣ ಲೋಕಾರ್ಪಣೆಗೊಳಿಸಿದ ಸಿಎಂ

ಮೇಲ್ದರ್ಜೆಗೆ ಏರಿಸಲಾದ ಹೊಸ ಸಾಂಬ್ರಾ ವಿಮಾನ ನಿಲ್ದಾಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾಪರ್ಣೆಗೊಳಿಸಿದರು.

Vijaya Karnataka Web 14 Sep 2017, 2:49 pm
ಬೆಳಗಾವಿ: ಮೇಲ್ದರ್ಜೆಗೆ ಏರಿಸಲಾದ ಹೊಸ ಸಾಂಬ್ರಾ ವಿಮಾನ ನಿಲ್ದಾಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾಪರ್ಣೆಗೊಳಿಸಿದರು.
Vijaya Karnataka Web new sambra airport inauguration
​ಹೊಸ ಸಾಂಬ್ರಾ ವಿಮಾನ ನಿಲ್ದಾಣ ಲೋಕಾರ್ಪಣೆಗೊಳಿಸಿದ ಸಿಎಂ


ಬೆಳಗಾವಿ ಕೈಗಾರಿಕಾ ಕ್ಷೇತ್ರವಾಗಿ,ವಾಣಿಜ್ಯ ನಗರವಾಗಿ ಬೆಳೆಯುತ್ತಿದೆ. ಹೀಗಾಗಿ ಬೆಳಗಾವಿಯಲ್ಲಿ ಮೇಲ್ದರ್ಜೆಗೆ ಏರಿಸಿದ ವಿಮಾನದ ನಿಲ್ದಾಣ ಬೇಕಾಗಿತ್ತು. ಕೇಂದ್ರ ಹಾಗೂ ರಾಜ್ಯ ಸರಕಾರದ ಒಡಂಬಡಿಕೆಯಯಲ್ಲಿ ಈ ವಿಮಾನ ನಿಲ್ದಾಣವನ್ನುಮೇಲ್ದರ್ಜೆಗೆ ಏರಿಸಲಾಗಿದೆ. ರಾಜ್ಯ ಸರಕಾರದಿಂದ 370 ಎಕರೆ ಜಮೀನನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಏರ್‌ಬಸ್ ಬೋವಿಂಗ್ ಕಾರ್ಗೊ ಮತ್ತು ಚಿಕ್ಕ ವಿಮಾನ ಸೇರಿದಂತೆ ಎಲ್ಲ ಬಗೆಯ ವಿಮಾನ ಹಾರಾಟ ಇಲ್ಲಿಂದ ನಡೆಯಲಿದೆ ಎಂದ ಸಿಎಂ, ಜಮೀನು ನೀಡಿದ ಎಲ್ಲ ರೈತರಿಗೆ ಧನ್ಯವಾದ ಸಲ್ಲಿಸಿದರು.

ಬೆಂಗಳೂರು ಮತ್ತು ಮೈಸೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿವೆ. ದೇಶದ ಅಭಿವೃದ್ಧಿ ಆಗಬೇಕಾದರೆ ರಾಜ್ಯದ ಅಭಿವೃದ್ಧಿ ಆಗಬೇಕು. ಕೇಂದ್ರ ರೈಲ್ವೆ ಇಲಾಖೆಯಿಂದ ರಾಜ್ಯದಲ್ಲಿ ಯಾವುದೇ ಯೋಜನೆ ಪ್ರಾರಂಭಿಸಿದರೆ ರಾಜ್ಯ ಸರಕಾರ ಆರ್ಥಿಕ ನೆರವು ಮತ್ತು ನೀಡುವುದು ಎಂದು ಹೇಳಿದರು.

ಇದಕ್ಕೆ ಸಂಬಂಧಿಸಿದಂತೆ ನೀವು ಏನೂ ಹೇಳಿಲ್ಲ. ಮೋದಿ ನಗ್ಗೆ ಮಾತ್ರ ಮಾತನಾಡಿದ್ದೀರಿ ಎಂದು ಸಿಎಂ ಅವರು ಸಚಿವ ಅನಂತ್‌ ಕುಮಾರ್‌ ಮತ್ತು ಸಂಸದ ಸುರೇಶ್‌ ಅಂಗಡಿ ಅವರಿಗೆ ಟಾಂಗ್‌ ನೀಡಿದರು. ಕೇಂದ್ರ ವಿಮಾನಯಾನ ಸಚಿವ ಪಿ.ಅಶೋಕ ಗಜಪತಿರಾಜು ಮತ್ತು ಇತರ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ