ಆ್ಯಪ್ನಗರ

ಸಂತ್ರಸ್ತರನ್ನು ಭೇಟಿ ಮಾಡಿದ ನಿಖಿಲ್‌ ಕುಮಾರಸ್ವಾಮಿ

ಗೋಕಾಕ: ಉತ್ತರ ಕರ್ನಾಟಕದ ಜನತೆಯ ರಕ್ಷ ಣೆಗೆ ದಕ್ಷಿಣ ಕರ್ನಾಟಕದ ಜನತೆ ಸದಾ ...

Vijaya Karnataka 13 Aug 2019, 5:00 am
ಗೋಕಾಕ : ಉತ್ತರ ಕರ್ನಾಟಕದ ಜನತೆಯ ರಕ್ಷ ಣೆಗೆ ದಕ್ಷಿಣ ಕರ್ನಾಟಕದ ಜನತೆ ಸದಾ ಸಿದ್ಧರಿದ್ದು, ನಿರಾಶ್ರಿತರಿಗೆ ಪರಿಹಾರ ಒದಗಿಸಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದರು.
Vijaya Karnataka Web BEL-12GOK9


ಸೋಮವಾರ ಅವರು ನಗರದ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿನ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.

ನಂತರ ನಿರಾಶ್ರಿತರಿಗೆ ಅಗತ್ಯ ವಸ್ತುಗಳನ್ನು ವಿತರಿಸಿ ಪತ್ರಕರ್ತರೊಂದಿಗೆ ಮಾತನಾಡಿ, ''ಉತ್ತರ ಕರ್ನಾಟಕಕ್ಕೂ ಹಾಗೂ ಕುಮಾರಸ್ವಾಮಿಯವರಿಗೂ ಅವಿನಾಭಾವ ನಂಟು ಇದೆ. ಕುಮಾರಸ್ವಾಮಿಯವರು ನಿರಾಶ್ರಿತರ ಬೆಂಬಲಕ್ಕಿದ್ದು, ಅವರು ಯಾವುದೇ ಭಯ ಪಡಬೇಕಿಲ್ಲ'' ಎಂದರು.

ಮಾಜಿ ಶಾಸಕ ಮೋಹನ ರೆಡ್ಡಿ, ಜೆಡಿಎಸ್‌ ಮುಖಂಡರಾದ ಎಲ್‌.ಬಿ. ಹುಳ್ಳೇರ, ಚನ್ನಪ್ಪ ವಗ್ಗನ್ನವರ, ಪ್ರಕಾಶ ಸೋನ್ವಾಲಕರ ಸೇರಿದಂತೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ