ಆ್ಯಪ್ನಗರ

‘ಸಫರ್‌ ಆಗಿದ್ದು ಸಾಕು. ಇನ್ನು ಯಾರೊಂದಿಗೂ ಮೈತ್ರಿ ಇಲ್ಲ’ - ದೇವೇಗೌಡ

"ಬಿಜೆಪಿ, ಕಾಂಗ್ರೆಸ್‌ ಯಾವುದಕ್ಕೂ ನಾವು ಬೆಂಬಲ ನೀಡುವುದಿಲ್ಲ. ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳುತ್ತೇವೆ. ಈಗಾಗಲೇ ಬೆಂಬಲ ನೀಡಿದ್ದಕ್ಕೆ ಸಾಕಾಗಿ ಹೋಗಿದೆ," - ಎಚ್‌ಡಿ ದೇವೇಗೌಡ.

Vijaya Karnataka 2 Dec 2019, 7:06 pm

ಬೆಳಗಾವಿ: ರಾಜ್ಯದಲ್ಲಿ ಜೆಡಿಎಸ್‌ ಬೆಂಬಲದೊಂದಿಗೆ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ಕಾಂಗ್ರೆಸ್‌ ನಾಯಕರ ಹೇಳಿಕೆ ನಡುವೆ, ‘‘ಡಿಸೆಂಬರ್‌ 9ರ ನಂತರ ಯಾವುದೇ ಪಕ್ಷದ ಜತೆ ಮೈತ್ರಿ ಇಲ್ಲ’’ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ.
Vijaya Karnataka Web HD Deve Gowda


ಗೋಕಾಕ್‌ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಅಶೋಕ್‌ ಪೂಜಾರಿ ಪರ ಪ್ರಚಾರ ನಡೆಸಲು ಸೋಮವಾರ ಬೆಳಗಾವಿಗೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘‘ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್‌ ಜತೆಗೆ ಮೈತ್ರಿ ಮಾಡಿಕೊಂಡು ಸಫರ್‌ ಆಗಿದ್ದೇವೆ. ಸಮ್ಮಿಶ್ರ ಸರಕಾರ ಹೇಗೆ ಬಿತ್ತು ಎಂಬುದು ನನಗೆ ಗೊತ್ತು. ನಾವು ಯಾರ ಜತೆಗೂ ಸೇರುವುದಿಲ್ಲ. ಪಕ್ಷ ಕಟ್ಟಿಕೊಳ್ಳುತ್ತೇವೆ,” ಎಂದರು.

ಬಿಜೆಪಿ ಸರಕಾರ ಬೀಳುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘‘ಸಿದ್ದರಾಮಯ್ಯ, ಕಾಂಗ್ರೆಸ್‌, ನಾವು ಒಟ್ಟಾಗದಿದ್ದರೆ ಸರಕಾರ ಹೇಗೆ ಬೀಳುತ್ತದೆ? ಬಿಜೆಪಿಯವರ ಬಳಿ 105 ಸೀಟ್‌ ಇವೆ. ನಾವು ಯಾರ ಜತೆಗೆ ಸೇರುವುದಿಲ್ಲಎಂದರೆ, ಸರಕಾರ ಹೋಗುತ್ತದೆಯಾ,” ಎಂದು ಮರು ಪ್ರಶ್ನಿಸಿದರು.

ಸಿದ್ದರಾಮಯ್ಯ ಜತೆ ಯಾರ್ರೀ ಹೋಗ್ತಾರೆ? ಮೈತ್ರಿ ಬಗ್ಗೆ ದೇವೇಗೌಡರ ಪ್ರಶ್ನೆ!

‘‘ಬಿಜೆಪಿ, ಕಾಂಗ್ರೆಸ್‌ ಯಾವುದಕ್ಕೂ ನಾವು ಬೆಂಬಲ ನೀಡುವುದಿಲ್ಲ. ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳುತ್ತೇವೆ. ಈಗಾಗಲೇ ಬೆಂಬಲ ನೀಡಿದ್ದಕ್ಕೆ ಸಾಕಾಗಿ ಹೋಗಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಮೈತ್ರಿಯಾಗಿ ಸರಕಾರ ಮಾಡಿದ್ದು ಹೊಸ ಪ್ರಯೋಗ. ಐದು ವರ್ಷ ಸರಕಾರ ಸುಭದ್ರವಾಗಿ ನಡೆಯುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ,’’ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ