ಆ್ಯಪ್ನಗರ

ಸಲ್ಲೇಖನ ನಿರ್ಧಾರ ಸದ್ಯ ಕೈಗೊಂಡಿಲ್ಲ

ಕಾಗವಾಡ: ವರ್ಷಾಯೋಗ ಚಾತುರ್ಮಾಸವನ್ನು ತವರೂರು ಜುಗೂಳ ಗ್ರಾಮದಲ್ಲಿ ...

Vijaya Karnataka 23 Aug 2019, 5:00 am
ಕಾಗವಾಡ: ವರ್ಷಾಯೋಗ ಚಾತುರ್ಮಾಸವನ್ನು ತವರೂರು ಜುಗೂಳ ಗ್ರಾಮದಲ್ಲಿ ಪ್ರಾರಂಭಿಸಲಾಗಿತ್ತಾದರೂ ಕಾರಣಾಂತರಗಳಿಂದ ಈಗ ಶೇಡಬಾಳದ ಶಾಂತಿಸಾಗರ ಜೈನ ಆಶ್ರಮದಲ್ಲಿ ಚಾತುರ್ಮಾಸ ಮುಂದುವರಿಸಿರುವುದಾಗಿ ರಾಷ್ಟ್ರಸಂತ ಚಿನ್ಮಯಸಾಗರ(ಜಂಗಲ್‌ವಾಲೆ ಬಾಬಾ) ಮುನಿ ಮಹಾರಾಜರು ಹೇಳಿದರು.
Vijaya Karnataka Web BEL-22 KAGWAD 1 NEWS PHOTO


ಬುಧವಾರ ಪ್ರವಚನದ ವೇಳೆ ಶ್ರಾವಕರಿಗೆ ತಮ್ಮ ಅನಾರೋಗ್ಯದ ಬಗ್ಗೆ ಮಾಹಿತಿ ನೀಡಿದ ಅವರು, ಸದ್ಯಕ್ಕೆ ಸಲ್ಲೇಖನ ವೃತ ತೆಗೆದುಕೊಳ್ಳುವ ನಿರ್ಧಾರ ತೆಗೆದುಕೊಂಡಿಲ್ಲ. ಸೂಕ್ತ ಸಮಯ ಬಂದಾಗ ಆ ಬಗ್ಗೆ ಹೇಳಲಾಗುವುದು. ಸದ್ಯ ಶ್ರಾವಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಪುನರುಚ್ಚರಿಸಿದರು.

ಮುನಿಗಳ ಕೊನೆ ಆಸೆ ಸಮಾಧಿ ಸಾಧಿಸಿಕೊಳ್ಳಬೇಕೆಂಬುದು. ಅನಾರೋಗ್ಯದಿಂದ ಇಂತಹ ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ. ಆದರೆ, ಸಲ್ಲೇಖನ ಬಗ್ಗೆ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ ಎಂದರು.

ಈ ವೇಳೆ, 20 ವರ್ಷಗಳಿಂದ ಚಿನ್ಮಯಸಾಗರ ಮುನಿ ಮಹಾರಾಜರ ನಿರಂತರ ಸೇವೆ ಸಲ್ಲಿಸುತ್ತಿರುವ ಛತ್ತೀಸಗಡದ ಸುಮನಲತಾ ಪ್ರಕಾಶ ಮೋದಿ ಅವರನ್ನು ಬೆಂಗಳೂರು ಜೈನ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ