ಆ್ಯಪ್ನಗರ

ಬಸ್‌ ಟಿಕೆಟ್‌ ದರ ಹೆಚ್ಚಳ ಪ್ರಸ್ತಾವ ಇಲ್ಲ

ಬೆಳಗಾವಿ: ಬಸ್‌ ಟಿಕೆಟ್‌ ದರ ಏರಿಕೆ ಮಾಡುವ ...

Vijaya Karnataka 20 Oct 2019, 5:00 am
ಬೆಳಗಾವಿ: ಬಸ್‌ ಟಿಕೆಟ್‌ ದರ ಏರಿಕೆ ಮಾಡುವ ಯಾವ ಪ್ರಸ್ತಾವವೂ ನಮ್ಮ ಮುಂದಿಲ್ಲ. ಬೆಲೆ ಏರಿಕೆ ಕುರಿತು ಸಾರ್ವಜನಿಕರು ಆತಂಕ ಪಡುವ ಅಗತ್ಯವೇ ಇಲ್ಲಎಂದು ಸಾರಿಗೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
Vijaya Karnataka Web 19ATHANI092113


ಶನಿವಾರ ಅಥಣಿ ಪಟ್ಟಣದಲ್ಲಿನಿರ್ಮಿಸಿರುವ ನೂತನ ಬಸ್‌ ನಿಲ್ದಾಣ ಉದ್ಘಾಟಿಸಿ ಮಾತನಾಡಿದ ಅವರು, ನಷ್ಟದಲ್ಲಿರುವ ಸಾರಿಗೆ ಇಲಾಖೆಗೆ ಚಿಕಿತ್ಸೆ ನೀಡಿ ಸದೃಢವನ್ನಾಗಿಸಲು ನನಗೆ ಈ ಖಾತೆ ನೀಡಿದ್ದಾರೆ. ನಾನು ಕೂಡ ಅಷ್ಟೇ ಆತ್ಮವಿಶ್ವಾಸದಿಂದ ಮಾದರಿ ಸಾರಿಗೆ ಸಂಸ್ಥೆಯನ್ನಾಗಿಸುವ ಗುರಿ ಹೊಂದಿದ್ದೇನೆ. ವಾಯವ್ಯ ಸಾರಿಗೆ ಇಲಾಖೆಯಲ್ಲಿನ 2 ಸಾವಿರ ಸಿಬ್ಬಂದಿ ಕೊರತೆ ಸರಿದೂಗಿಸುವ ಉದ್ದೇಶದಿಂದ ನೇಮಕಾತಿ ಪ್ರಕ್ರಿಯೆಗೆ ಈಗಾಗಲೇ ಸೂಚನೆ ನೀಡಲಾಗಿದೆ. 3 ಸಾವಿರ ಹೊಸ ಬಸ್‌ ಖರೀದಿಗೂ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದಾರೆ. ಅದೇರೀತಿ ಸಾರಿಗೆ ಇಲಾಖೆಯ 1.30 ಲಕ್ಷ ಸಿಬ್ಬಂದಿಗೆ ಸರಕಾರಿ ಸೌಲಭ್ಯ ದೊರೆಯುವಂತೆ ಮಾಡಲು ಇಲಾಖೆಯ ಉನ್ನತ ಅಧಿಕಾರಿಗಳ ಸಮಿತಿ ರಚಿಸಲಾಗಿದೆ ಎಂದರು.

ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ, ರಾಯಬಾಗ ಶಾಸಕ ದುಯೋರ್ಧನ ಐಹೊಳೆ ಮಾತನಾಡಿ, ಸಾರಿಗೆ ಇಲಾಖೆ ನಮ್ಮ ಬದುಕಿನ ಅವಿಭಾಗ್ಯ ಅಂಗ. ಪ್ರತಿಭಟನೆ, ಹೋರಾಟದ ಹೆಸರಿನಲ್ಲಿಬಸ್‌ಗಳಿಗೆ ಕಲ್ಲುತೂರಬೇಡಿ ಎಂದರು.

ಇದೇ ಸಂದರ್ಭದಲ್ಲಿಅಪಘಾತ ರಹಿತ ಚಾಲನೆ ಮಾಡಿದ 84 ಚಾಲಕರಿಗೆ ಬೆಳ್ಳಿಪದಕ ವಿತರಿಸಲಾಯಿತು. ಸಂಸದ ಅಣ್ಣಾಸಾಹೇಬ ಜೋಲ್ಲೆ, ಜಿಪಂ ಅಧ್ಯಕ್ಷೆ ಆಶಾ ಐಹೊಳೆ, ವಾಯವ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್‌. ಪಾಟೀಲ, ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್‌, ತಾಪಂ ಉಪಾಧ್ಯಕ್ಷೆ ಜ್ಯೋತಿ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

ಕೃಷಿ ಮಹಾವಿದ್ಯಾಲಯ ಸ್ಥಾಪನೆ:
ರಾಜ್ಯದಲ್ಲಿರುವ ಸಾರಿಗೆ ಇಲಾಖೆಯ ನಾಲ್ಕು ಭಾಗಗಳ ಹೆಸರು ಬದಲಾವಣೆ ಮಾಡುವ ಚಿಂತನೆ ಇದೆ. ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಬಳಿ 100 ಎಕರೆ ಜಾಗದಲ್ಲಿಕೃಷಿ ಮಹಾವಿದ್ಯಾಲಯ ಸ್ಥಾಪಿಸುವ ಯೋಜನೆ ಇದೆ. ಅಥಣಿ ಪಟ್ಟಣದಲ್ಲಿ10 ಕೋಟಿ ರೂ. ವೆಚ್ಚದಲ್ಲಿಆರ್‌ಟಿಒ ಕಚೇರಿ ನಿರ್ಮಿಸಲಾಗುವುದು ಎಂದ ಸವದಿ, ತಮ್ಮ ಭಾಷಣದ ಆರಂಭದಲ್ಲಿಅಥಣಿಯಲ್ಲಿನೂತನ ಬಸ್‌ ನಿರ್ಮಾಣಕ್ಕೆ ಈ ಹಿಂದಿನ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಂಪೂರ್ಣ ಸಹಕಾರ ನೀಡಿದ್ದರು ಎಂದು ಸ್ಮರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ