ಆ್ಯಪ್ನಗರ

ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಚುನಾವಣೆಗೆ ನಾಮಪತ್ರ ಸಲ್ಲಿಕೆ

ರಾಯಬಾಗ : ಇಲ್ಲಿನ ವಸಂತರಾವ್‌ ಪಾಟೀಲ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಸದಸ್ಯರ ಆಯ್ಕೆಗಾಗಿ ಮೇ 19 ರಂದು 15 ಸ್ಥಾನಗಳಿಗೆ ಜರುಗಲಿರುವ ಚುನಾವಣೆಗೆ ...

Vijaya Karnataka 8 May 2019, 5:00 am
ರಾಯಬಾಗ : ಇಲ್ಲಿನ ವಸಂತರಾವ್‌ ಪಾಟೀಲ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಸದಸ್ಯರ ಆಯ್ಕೆಗಾಗಿ ಮೇ 19 ರಂದು 15 ಸ್ಥಾನಗಳಿಗೆ ಜರುಗಲಿರುವ ಚುನಾವಣೆಗೆ ಮಂಗಳವಾರ 15 ಸದಸ್ಯರು ತಮ್ಮ ನಾಮಪತ್ರಗಳನ್ನು ಕಾರ್ಖಾನೆ ರಿಟರ್ನಿಂಗ್‌ ಅಧಿಕಾರಿ ಹಾಗೂ ಚಿಕ್ಕೋಡಿ ಸಹಕಾರಿ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ ಸಹಾಯಕ ನಿರ್ದೇಶಕ ಎಸ್‌.ಕೆ. ಲಾಟ್ಕರ್‌ ಅವರಿಗೆ ಸಲ್ಲಿಸಿದರು.
Vijaya Karnataka Web BEL-7RAIBAG4PHOTO


'ಎ' ವರ್ಗದ ಕಬ್ಬು ಬೆಳೆಗಾರರ ಸದಸ್ಯರ ಕ್ಷೇತ್ರದಿಂದ ಸಾಮಾನ್ಯ ವರ್ಗದಿಂದ ಪ್ರತಾಪರಾವ ಅಲಗೌಡ ಪಾಟೀಲ, ವಿವೇಕ ವಸಂತರಾವ್‌ ಪಾಟೀಲ, ಭೀಮಗೌಡ ಅಲಗೌಡಾ ಮಾನೆ, ಭರತೇಶ ಕುಮಾರ ಬ್ಯಾಡಗಿ, ಅಪ್ಪಾಸಾಹೇಬ ಭೂಪಾಲ ಜಾಧವ, ವಸಂತ ನಿಂಗಪ್ಪಾ ಚೌಗುಲಾ, ಕರೆಪ್ಪಾ ಯಮನಪ್ಪಾ ಸೂರಣ್ಣವರ ನಾಮಪತ್ರ ಸಲ್ಲಿಸಿದರು.

ಪರಿಶಿಷ್ಟ ಜಾತಿ ವರ್ಗದಿಂದ ತಿಮ್ಮಣ್ಣ ಸಿದ್ದಪ್ಪ ವಡ್ಡರ, ಪರಿಶಿಷ್ಟ ಪಂಗಡ ವರ್ಗದಿಂದ ಶಾಂತವ್ವಾ ಹಾಲಪ್ಪಾ ಬೇರಡ, ಮಹಿಳಾ ವರ್ಗದಿಂದ ಗಂಗಾ ಸಂಗಪ್ಪ ಕೊಪ್ಪದ ಮತ್ತು ಸಾವಿತ್ರಿ ಚಿದಾನಂದ ಹಳಿಂಗಳಿ, ಹಿಂದುಳಿದ ವರ್ಗದಿಂದ ಸಿದ್ದಪ್ಪ ಹಾಲಪ್ಪ ಹುಕ್ಕೇರಿ ಮತ್ತು ತಿಪ್ಪಣ್ಣ ರಾಮಾ ಯಡ್ರಾವೆ ನಾಮಪತ್ರ ಸಲ್ಲಿಸಿದರು.

'ಬ' ವರ್ಗದ ಕಬ್ಬು ಬೆಳೆಗಾರರಲ್ಲದ ಸದಸ್ಯರ ಕ್ಷೇತ್ರದಿಂದ ಪರಿಜಾ ಸಿದ್ಧಗೌಡ ಪಾಟೀಲ ಮತ್ತು 'ಸಿ' ವರ್ಗದ ಸಹಕಾರ ಸಂಘಗಳ ಕ್ಷೇತ್ರದಿಂದ ಬಸಗೌಡ ಅಪ್ಪಣಗೌಡಾ ಪಾಟೀಲ ನಾಮಪತ್ರ ಸಲ್ಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ