ಬೈಲಹೊಂಗಲ: ಸಮಯಕ್ಕೆ ಸರಿಯಾಗಿ ಕಚೇರಿಗೆ ಬಾರದ ಪುರಸಭೆಯ ನಾಲ್ಕು ಸಿಬ್ಬಂದಿಗೆ ನೋಟಿಸ್ ಜಾರಿ ಮಾಡುವಂತೆ ಉಪ ವಿಭಾಗಾಧಿಕಾರಿ ಹಾಗೂ ಪುರಸಭೆ ಆಡಳಿತಾಧಿಕಾರಿ ಶಿವಾನಂದ ಭಜಂತ್ರಿ ಸೂಚಿಸಿದ್ದಾರೆ.
ಬುಧವಾರ ಪಟ್ಟಣದ ಪುರಸಭೆ ಕಚೇರಿಗೆ ಭೇಟಿ ನೀಡಿದ ಅವರು, ಹಾಜರಾತಿ ಪುಸ್ತಕಗಳನ್ನು ಪರಿಶೀಲಿಸಿದರು. ಕಚೇರಿ ಪ್ರಾರಂಭದ ವೇಳೆ ಮೀರಿದ್ದರೂ ಕೆಲ ಸಿಬ್ಬಂದಿ ಹಾಜರಾತಿ ಪುಸ್ತಕದಲ್ಲಿಸಹಿ ಮಾಡಿರಲಿಲ್ಲ. ಈ ಕುರಿತು ಮುಖ್ಯಾಧಿಕಾರಿ ಶಿವಪ್ಪ ಅಂಬಿಗೇರ ಅವರನ್ನು ಪ್ರಶ್ನಿಸಿದರು.
''ಕೆಲವರು ಡೆಪ್ಯುಟೇಶನ್ ಮೇಲೆ ಹೋಗಿದ್ದಾರೆ. ಇನ್ನೂ ಕೆಲವರು ಬಂದಿಲ್ಲ'' ಎಂದು ಮುಖ್ಯಾಧಿಕಾರಿ ಹೇಳಿದರು.
ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಶಿವಾನಂದ ಭಜಂತ್ರಿ, ''ಯಾರಿಗೂ ಸಮಯ ಪ್ರಜ್ಞೆ ಇಲ್ಲವೇ?'' ಎಂದು ಪ್ರಶ್ನಿಸಿದರು. ಸಮಯಕ್ಕೆ ಸರಿಯಾಗಿ ಕಚೇರಿಗೆ ಬಾರದ ಎಂಜಿನಿಯರ್ ಎಸ್.ಬಿ. ಪಾಟೀಲ, ಕರ ವಸೂಲಿಗ ಪಿ.ಜಿ. ಅರಕಸಾಲಿ, ಕಿರಿಯ ಆರೋಗ್ಯ ನಿರೀಕ್ಷಕ ಎಸ್.ಎನ್.ಪಾಟೀಲ ಹಾಗೂ ಅಪ್ಪಾಸಾಹೇಬ ಹೆಗಡೆ ಇವರಿಗೆ ಕಾರಣ ಕೇಳಿ ನೊಟೀಸ್ ನೀಡುವಂತೆ ಸೂಚಿಸಿದರು.
ಬುಧವಾರ ಪಟ್ಟಣದ ಪುರಸಭೆ ಕಚೇರಿಗೆ ಭೇಟಿ ನೀಡಿದ ಅವರು, ಹಾಜರಾತಿ ಪುಸ್ತಕಗಳನ್ನು ಪರಿಶೀಲಿಸಿದರು. ಕಚೇರಿ ಪ್ರಾರಂಭದ ವೇಳೆ ಮೀರಿದ್ದರೂ ಕೆಲ ಸಿಬ್ಬಂದಿ ಹಾಜರಾತಿ ಪುಸ್ತಕದಲ್ಲಿಸಹಿ ಮಾಡಿರಲಿಲ್ಲ. ಈ ಕುರಿತು ಮುಖ್ಯಾಧಿಕಾರಿ ಶಿವಪ್ಪ ಅಂಬಿಗೇರ ಅವರನ್ನು ಪ್ರಶ್ನಿಸಿದರು.
''ಕೆಲವರು ಡೆಪ್ಯುಟೇಶನ್ ಮೇಲೆ ಹೋಗಿದ್ದಾರೆ. ಇನ್ನೂ ಕೆಲವರು ಬಂದಿಲ್ಲ'' ಎಂದು ಮುಖ್ಯಾಧಿಕಾರಿ ಹೇಳಿದರು.
ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಶಿವಾನಂದ ಭಜಂತ್ರಿ, ''ಯಾರಿಗೂ ಸಮಯ ಪ್ರಜ್ಞೆ ಇಲ್ಲವೇ?'' ಎಂದು ಪ್ರಶ್ನಿಸಿದರು. ಸಮಯಕ್ಕೆ ಸರಿಯಾಗಿ ಕಚೇರಿಗೆ ಬಾರದ ಎಂಜಿನಿಯರ್ ಎಸ್.ಬಿ. ಪಾಟೀಲ, ಕರ ವಸೂಲಿಗ ಪಿ.ಜಿ. ಅರಕಸಾಲಿ, ಕಿರಿಯ ಆರೋಗ್ಯ ನಿರೀಕ್ಷಕ ಎಸ್.ಎನ್.ಪಾಟೀಲ ಹಾಗೂ ಅಪ್ಪಾಸಾಹೇಬ ಹೆಗಡೆ ಇವರಿಗೆ ಕಾರಣ ಕೇಳಿ ನೊಟೀಸ್ ನೀಡುವಂತೆ ಸೂಚಿಸಿದರು.