ಆ್ಯಪ್ನಗರ

ಸ್ವಚ್ಛತೆ ಕೈಗೊಳ್ಳಲು ಅಂಗಡಿಗಳಿಗೆ ನೋಟಿಸ್‌

ಯಕ್ಸಂಬಾ: ಕೊರೊನಾ ವೈರಸ್‌ ಹರಡದಂತೆ ತಡೆಯಲು ಸರಕಾರದಿಂದ ...

Vijaya Karnataka 16 Mar 2020, 5:00 am
ಯಕ್ಸಂಬಾ: ಕೊರೊನಾ ವೈರಸ್‌ ಹರಡದಂತೆ ತಡೆಯಲು ಸರಕಾರದಿಂದ ಎಲ್ಲರೀತಿಯ ಕ್ರಮಗಳನ್ನು ಕೈಗೆತ್ತಿಕೊಂಡ ಹಿನ್ನಲೆಯಲ್ಲಿಕೊರೊನಾ ಜಾಗೃತಿಗಾಗಿ ಸ್ಥಳೀಯ ಪಟ್ಟಣ ಪಂಚಾಯಿತಿಯಿಂದ ಪಟ್ಟಣದ ಹೋಟೆಲ್‌, ಬಾರ್‌, ಬೀದಿ ಅಂಗಡಿ ಮಾಲೀಕರಿಗೆ ಸ್ವಚ್ಛತೆ ಕಾಪಾಡುವಂತೆ ನೋಟಿಸ್‌ ಜಾರಿ ಮಾಡಲಾಯಿತು.
Vijaya Karnataka Web notice to shops to maintain cleaning
ಸ್ವಚ್ಛತೆ ಕೈಗೊಳ್ಳಲು ಅಂಗಡಿಗಳಿಗೆ ನೋಟಿಸ್‌


ಹೋಟೆಲ್‌ ಮಾಲೀಕರು ತಮ್ಮ ತಮ್ಮ ಹೋಟೆಲ್‌ಗಳಲ್ಲಿಸ್ವಚ್ಛತೆಯ ಎಲ್ಲನಿಯಮಗಳನ್ನು ಪಾಲಿಸಬೇಕು. ಇಲ್ಲವಾದಲ್ಲಿಕಾನೂನು ಕ್ರಮ ಕೈಗೊಂಡು 10 ಸಾವಿರ ರೂ. ದಂಡು ವಿಧಿಸುವುದಾಗಿ ನೋಟಿಸ್‌ನಲ್ಲಿತಿಳಿಸಲಾಗಿದೆ. ಹೋಟೆಲ್‌ಗಳಲ್ಲಿಮಾಡುವ ಪದಾರ್ಥಗಳು ಹೊರಗಡೆ ಇಡಬಾರದು. ಮಾಡಿದ ಪದಾರ್ಥಗಳ ಮೇಲೆ ನೊಣಗಳು ಕೂರದಂತೆ ಜಾಳಿಗೆ ಅಥವಾ ಗ್ಲಾಸ್‌ನಂತಹ ವಸ್ತುಗಳ ಬಳಕೆ ಮಾಡಬೇಕು. ಹೋಟೆಲ್‌ ಒಳಗಡೆ ಹಾಗೂ ಹೊರ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಸಾರ್ವಜನಿಕರಿಗೆ ಬಿಸಿ ನೀರು ಒದಗಿಸಿಕೊಡಬೇಕು. ಕುಡಿಯುವ ನೀರು ಸ್ವಚ್ಛವಾಗಿಡಬೇಕು. ಅಡುಗೆ ಕೊಣೆ, ಪಾತ್ರೆಗಳನ್ನು ಸ್ವಚ್ಛವಾಗಿಡಬೇಕು ಎಂಬ ಅನೇಕ ಸೂತ್ರಗಳನ್ನು ಜಾರಿಮಾಡಿದೆ.

ಇದೇ ರೀತಿ ಸಮುದಾಯ ಆರೋಗ್ಯ ಕೇಂದ್ರದಿಂದಲೂ ಅನೇಕ ಜಾಗೃತಿ ಕ್ರಮ ಕೈಗೊಂಡು ಬೇರೆ ರಾಜ್ಯದಿಂದ ಬಂದು ಹೋಗುವವರ ಸರ್ವೇ ಕೂಡ ನಡೆಸಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ