ಆ್ಯಪ್ನಗರ

ರಸ್ತೆ ಬಂದ್‌ಗೆ ಸಾರ್ವಜನಿಕರು, ರೈತರ ಆಕ್ಷೇಪ

ಯಮಕನಮರಡಿ: ಹುಕ್ಕೇರಿ ತಾಲೂಕಿನ ಪಾಶ್ಚಾಪುರದಿಂದ ‌ ...

Vijaya Karnataka 24 Apr 2020, 5:00 am
ಯಮಕನಮರಡಿ: ಹುಕ್ಕೇರಿ ತಾಲೂಕಿನ ಪಾಶ್ಚಾಪುರದಿಂದ ಅಂಕಲಗಿ-ಬೆಳಗಾವಿ ಹೋಗುವ ಮುಖ್ಯ ರಸ್ತೆಗೆ ಗೋಕಾಕ ತಾಲೂಕಿನ ಕುಂದರಗಿ ಕೆಲವರು ಮಣ್ಣು ಹಾಕಿ ಬಂದ್‌ ಮಾಡಿರುವುದರಿಂದ ವಾಹನಗಳು ಪರದಾಡುವಂತಾಗಿದೆ.
Vijaya Karnataka Web 23YMD1_53
ಪಾಶ್ಚಾಪುರ-ಕುಂದರಗಿ ಮುಖ್ಯ ರಸ್ತೆಯನ್ನು ಬಂದ್‌ ಮಾಡಿರುವುದು.


ಪಾಶ್ಚಾಪುರ ಗ್ರಾಮದ ಬಹಳಷ್ಟು ರೈತರ ಹೊಲಗದ್ದೆಗಳು ಕುಂದರಗಿ ಪ್ರದೇಶದಲ್ಲಿಬರುತ್ತಿದ್ದು ಅಲ್ಲಿಹೋಗಲು ಅನಾನುಕೂಲವಾಗುತ್ತಿದೆ. ಜತೆಗೆ ಆಹಾರ ಸಾಮಗ್ರಿ ಸಾಗಾಟ, ಅಂಬ್ಯುಲೆನ್ಸ್‌, ಅಗ್ನಿಶಾಮಕ ವಾಹನಗಳಿಗೆ ತುರ್ತು ಸ್ಥಿತಿಯಲ್ಲಿಓಡಾಟ ತೊಂದರೆಯಾಗಲಿದೆ ಎಂದು ರೈತರು, ಸಾರ್ವಜನಿಕರು ದೂರಿದ್ದಾರೆ. ಈಗಾಗಲೇ ಜಿಲ್ಲಾಧಿಕಾರಿ ಡಾ. ಎಸ್‌.ಬಿ. ಬೊಮ್ಮನಹಳ್ಳಿಯವರು ಜಿಲ್ಲೆಯ ಮುಖ್ಯ ರಸ್ತೆಗಳನ್ನು ಬಂದ್‌ ಮಾಡದಂತೆ ಆದೇಶಿಸಿದ್ದಾರೆ. ಶಾಸಕ ಸತೀಶ ಜಾರಕಿಹೊಳಿ ಅವರು ಸಹ ಕುಂದರಗಿ ಗ್ರಾಪಂನವರಿಗೆ ರಸ್ತೆ ತಡೆ ತೆರವುಗೊಳಿಸಲು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ