ಆ್ಯಪ್ನಗರ

ರೈಲ್ವೆ ಮೇಲ್ಸೇತುವೆ ಬಿರುಕು ಪರಿಶೀಲಿಸಿದ ಅಧಿಕಾರಿಗಳು

ಬೆಳಗಾವಿ: ಇಲ್ಲಿನ ಗೋಗಟೆ ವೃತ್ತದಲ್ಲಿ ...

Vijaya Karnataka 16 Jan 2019, 5:00 am
ಬೆಳಗಾವಿ : ಇಲ್ಲಿನ ಗೋಗಟೆ ವೃತ್ತದಲ್ಲಿ ಪುನರ್‌ ನಿರ್ಮಿಸಿರುವ ರೈಲ್ವೆ ಮೇಲ್ಸೇತುವೆಯಲ್ಲಿ ಬಿರುಕು ಕಾಣಿಸಿರುವ ಹಿನ್ನೆಲೆಯಲ್ಲಿ ಸಂಸದ ಸುರೇಶ ಅಂಗಡಿ ತಜ್ಞ ಎಂಜಿನಿಯರ್‌ಗಳಿಂದ ವರದಿ ಕೇಳಿದ್ದು ಈ ಕುರಿತು ಮಂಗಳವಾರ ಅವರು ಟ್ವೀಟ್‌ ಮಾಡಿದ್ದಾರೆ.
Vijaya Karnataka Web BLG-1501-2-52-15PRAMOD6


ಮೇಲ್ಸೇತುವೆಯಲ್ಲಿ ಕೆಲವು ಕಡೆ ಬಿರುಕು ಕಾಣಿಸಿಕೊಂಡಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗಿತ್ತು. ಅಧಿಕಾರಿಗಳು ಅದಕ್ಕೆ ತೇಪೆಯನ್ನೂ ಹಚ್ಚಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಂಸದ ಸುರೇಶ ಅಂಗಡಿ ಮೇಲ್ಸೇತುವೆಯಲ್ಲಿ ಬಿರುಕು ಬಿಟ್ಟಿದ್ದ ಬಗ್ಗೆ ಕೆಲ ಫೋಟೊಗಳೊಂದಿಗೆ ಟ್ವೀಟ್‌ ಮಾಡಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಶೀಘ್ರದಲ್ಲಿ ಬೆಳಗಾವಿಗೆ ಬಂದು ಮೇಲ್ಸೇತುವೆ ವೀಕ್ಷಣೆ ಮಾಡುತ್ತೇನೆ. ಅಲ್ಲಿ ವರೆಗೆ ತಜ್ಞ ಎಂಜಿನಿಯರ್‌ಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತಮಗೆ ವರದಿ ಕೊಡಬೇಕು. ಅಲ್ಲದೆ, ತಕ್ಷಣ ತುರ್ತು ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ¸ಟ್ವೀಟ್‌ ಮಾಡಿ ಅದನ್ನು ನೈರುತ್ಯ ರೈಲ್ವೆ ಹಿರಿಯ ಅಧಿಕಾರಿಗಳಿಗೆ ಟ್ಯಾಗ್‌ ಮಾಡಿದ್ದರು.

ತಕ್ಷಣ ಕ್ರಮಕ್ಕೆ ಮುಂದಾದ ಅಧಿಕಾರಿಗಳು ರೈಲ್ವೆ ಮೇಲ್ಸೇತುವೆ ಪರಿಶೀಲನೆ ನಡೆಸಿ ಅದರ ಫೋಟೊವನ್ನು ಸಂಸದರ ಟ್ವೀಟ್‌ಗೆ ಕಮೆಂಟ್‌ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ