ಆ್ಯಪ್ನಗರ

ಗೋಕಾಕ ತಾಲೂಕಿನ ಮಮದಾಪುರ ರಸಗೊಬ್ಬರ ಮಳಿಗೆ ಮೇಲೆ ಅಧಿಕಾರಿಗಳ ದಾಳಿ

ಗೋಕಾಕ: ರೈತರ ದೂರಿನ ಹಿನ್ನೆಲೆಯಲ್ಲಿ ತಾಲೂಕಿನ ...

Vijaya Karnataka 5 Jul 2020, 5:00 am
ಗೋಕಾಕ: ರೈತರ ದೂರಿನ ಹಿನ್ನೆಲೆಯಲ್ಲಿತಾಲೂಕಿನ ಮಮದಾಪುರ ಗ್ರಾಮದ ರಸಗೊಬ್ಬರ ಮಳಿಗೆಯೊಂದರ ಮೇಲೆ ಕೃಷಿ ಇಲಾಖೆಯ ಚಿಕ್ಕೋಡಿ ವಿಭಾಗದ ಉಪನಿರ್ದೇಶಕರ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿತು.
Vijaya Karnataka Web 4GOK3_53
ಮಮದಾಪುರ ಗ್ರಾಮದಲ್ಲಿರಸಗೊಬ್ಬರ ಮಳಿಗೆಯೊಂದನ್ನು ಕೃಷಿ ಇಲಾಖೆ ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿರುವುದು.


ಜಿಲ್ಲಾಧಿಕಾರಿಗಳಿಗೆ ರೈತರು ನೀಡಿದ್ದ ದೂರನ್ನು ಆಧರಿಸಿ ದಾಳಿ ನಡೆಸಿದ ಅಧಿಕಾರಿಗಳು, ಅಂಗಡಿಯ ದಾಸ್ತಾನು ಮತ್ತು ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಯೂರಿಯಾ ಹಾಗೂ ರಸಗೊಬ್ಬರಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು, ಪರವಾನಗಿ ಇಲ್ಲದ ರಸಗೊಬ್ಬರಗಳನ್ನು ಮಾರಾಟ ಮಾಡುವುದು. ರಸಗೊಬ್ಬರಗಳನ್ನು ಪರವಾನಗಿಯಲ್ಲಿಘೋಷಿಸದೇ ಇರುವ ಸ್ಥಳಗಳಲ್ಲಿಸಂಗ್ರಹಿಸಿಟ್ಟು ಮಾರಾಟ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅಲ್ಲದೇ ರೈತರಿಗೆ ರಶೀದಿಗಳನ್ನು ನೀಡದೇ ಇರುವುದು ಕಂಡುಬಂದಿದ್ದರಿಂದ ಮಳಿಗೆ ಮಾಲೀಕರಿಗೆ ಶೋಕಾಸ್‌ ನೋಟಿಸ್‌ ನೀಡಲಾಗಿದೆ. ಅದಕ್ಕೆ ಉತ್ತರ ನೀಡುವವರೆಗೆ ಕೃಷಿ ಪರಿಕರಗಳ ಮಾರಾಟ ಮಾಡಬಾರದೆಂದು ಸೂಚಿಸಲಾಗಿದೆ ಎಂದು ಉಪನಿರ್ದೇಶಕ ಎಲ್‌.ಆಯ್‌. ರೂಡಗಿ ತಿಳಿಸಿದ್ದಾರೆ.

ಸಹಾಯಕ ಕೃಷಿ ನಿರ್ದೇಶಕರಾದ ಎಮ್‌.ಎಮ್‌.ನದಾಫ, ಆರ್‌.ಬಿ.ಪಾಟೀಲ, ಸಿ.ಐ. ಹೂಗಾರ, ಕೃಷಿ ಅಧಿಕಾರಿ ಎಸ್‌.ಬಿ.ಕರಗಣ್ಣಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ