ಆ್ಯಪ್ನಗರ

ಗ್ರಾಹಕನ ವೇಷದಲ್ಲಿ ಬಂದು 330 ಕಿಲೋ ಈರುಳ್ಳಿ ಕದ್ದ ಚೋರ! ವ್ಯಾಪಾರಿಗೆ 58 ಸಾವಿರ ನಷ್ಟ

ಈರುಳ್ಳಿ ಮಾರುಕಟ್ಟೆಯಲ್ಲಿ ವ್ಯಾಪಾರಿಯ ಕಣ್ತಪ್ಪಿಸಿ 58 ಸಾವಿರ ರೂ.ಮೌಲ್ಯದ ಈರುಳ್ಳಿ ಮತ್ತು ಬೆಳ್ಳುಳ್ಳಿ ಕಳವು ಮಾಡಿರುವ ಘಟನೆ ನಡೆದಿದೆ. ಮುಖಕ್ಕೆ ಮಾಸ್ಕ್‌ ಧರಿಸಿ ಬಂದ ಕಳ್ಳ ಅಂಗಡಿಯಲ್ಲಿದ್ದ ಕೆಲಸಗಾರರನ್ನು ಯಾಮಾರಿಸಿ ಕೃತ್ಯ ಎಸಗಿದ್ದಾನೆ.

Vijaya Karnataka Web 2 Jan 2020, 2:23 pm
ಬೆಳಗಾವಿ: ಬೆಳಗಾವಿ ನಗರದ ಈರುಳ್ಳಿ ಮಾರುಕಟ್ಟೆಯಲ್ಲಿ ವ್ಯಾಪಾರಿಯ ಕಣ್ತಪ್ಪಿಸಿ 58 ಸಾವಿರ ರೂ.ಮೌಲ್ಯದ ಈರುಳ್ಳಿ ಮತ್ತು ಬೆಳ್ಳುಳ್ಳಿ ಕಳವು ಮಾಡಲಾಗಿದೆ. ಮಹಾತ್ಮಾ ಫುಲೆ ರಸ್ತೆಯ ನಿವಾಸಿ ಖಾದರ್‌ ಬಾದಶಹಾ ಅತ್ತಾರ ಎನ್ನುವರ ಅಂಗಡಿಯಿಂದ ಈರುಳ್ಳಿ, ಬೆಳ್ಳುಳ್ಳಿ ಕಳವಾಗಿದೆ.
Vijaya Karnataka Web onion crisis thief came in the guise of a client and stole 330 kilos of onion seller lost rs 58 thousand in belagavi
ಗ್ರಾಹಕನ ವೇಷದಲ್ಲಿ ಬಂದು 330 ಕಿಲೋ ಈರುಳ್ಳಿ ಕದ್ದ ಚೋರ! ವ್ಯಾಪಾರಿಗೆ 58 ಸಾವಿರ ನಷ್ಟ


ಮಂಗಳವಾರ ರಾತ್ರಿ 9.30 ಗಂಟೆ ಸಮಯದಲ್ಲಿ ಮುಖಕ್ಕೆ ಮಾಸ್ಕ್‌ ಧರಿಸಿ ಆಗಮಿಸಿದ್ದ ವ್ಯಕ್ತಿ 330 ಕಿಲೋ ಈರುಳ್ಳಿ ಮತ್ತು 100 ಕಿಲೋ ಬೆಳ್ಳುಳ್ಳಿ ಖರೀದಿ ಕುರಿತು ಅಂಗಡಿಯಲ್ಲಿದ್ದ ಕೆಲಸಗಾರನೊಂದಿಗೆ ವ್ಯವಹಾರ ನಡೆಸಿದ್ದ. ಈರುಳ್ಳಿ ಮತ್ತು ಬೆಳ್ಳುಳ್ಳಿ ಚೀಲಗಳನ್ನು ತನ್ನ ವಾಹನದಲ್ಲಿ ಹಾಕುವಂತೆ ಸೂಚಿಸಿದ್ದ. ಅದರಂತೆ 58 ಸಾವಿರ ರೂ.ಮೌಲ್ಯದ 55 ಕಿಲೋ ತೂಕದ ಆರು ಈರುಳ್ಳಿ ಚೀಲ ಮತ್ತು 100 ಕಿಲೋ ತೂಕದ ಬೆಳ್ಳುಳ್ಳಿ ಚೀಲಗಳನ್ನು ವಾಹನಕ್ಕೆ ವ್ಯಾಪಾರಿ ಹಾಕಿದ್ದ.

ನಂತರ ಇನ್ನೂ 60 ಕಿಲೋ ತೂಕದ ಈರುಳ್ಳಿಗೆ ಬೇಡಿಕೆ ಇಟ್ಟ ವ್ಯಕ್ತಿ, ಅದೆಲ್ಲವನ್ನೂ 5 ಕಿಲೋ ತೂಕದಂತೆ ಪ್ರತ್ಯೇಕವಾಗಿ ಚೀಲ ಕಟ್ಟುವಂತೆ ಹೇಳಿದ್ದ. ಅದೇ ಪ್ರಕಾರ ಅಂಗಡಿಕಾರ ಈರುಳ್ಳಿ ಚೀಲ ಕಟ್ಟುವಾಗ ಟೊಮೆಟೋ ತರುತ್ತೇನೆ ಎಂದು ಇನ್ನೊಂದು ಅಂಗಡಿಗೆ ಹೋಗುವುದಾಗಿ ಹೇಳಿದ ಆತ ಈರುಳ್ಳಿ ಮತ್ತು ಬೆಳ್ಳುಳ್ಳಿ ಚೀಲ ತುಂಬಿದ್ದ ವಾಹನದೊಂದಿಗೆ ಪರಾರಿಯಾಗಿದ್ದಾನೆ.

ಮಾಸ್ಕ್‌ ಧರಿಸಿ ಈರುಳ್ಳಿ ಖರೀದಿಗೆ ಬಂದಿದ್ದ ವ್ಯಕ್ತಿಯ ಚಲನವಲನ ಮಾರುಕಟ್ಟೆಯ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದ್ದು ಕಳ್ಳತನ ಕುರಿತು ಅಂಗಡಿ ಮಾಲೀಕ ಖಾದರ್‌ ಅತ್ತಾರ ಮಾರ್ಕೆಟ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ