ಆ್ಯಪ್ನಗರ

ಈರುಳ್ಳಿ ಬೆಳೆಗಾರರ ಪ್ರತಿಭಟನೆ

ಬೆಳಗಾವಿ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿರುವ ದಲ್ಲಾಳಿಗಳ ಕುತಂತ್ರದಿಂದ ಈರುಳ್ಳಿ ದರ ಕುಸಿತ ಕಂಡಿದೆ ಎಂದು ಆರೋಪಿಸಿದ ...

Vijaya Karnataka 18 Nov 2018, 5:00 am
ಬೆಳಗಾವಿ : ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿರುವ ದಲ್ಲಾಳಿಗಳ ಕುತಂತ್ರದಿಂದ ಈರುಳ್ಳಿ ದರ ಕುಸಿತ ಕಂಡಿದೆ ಎಂದು ಆರೋಪಿಸಿದ ರೈತರು ಎಪಿಎಂಸಿ ಎದುರಿನ ಬೆಳಗಾವಿ-ಕಂಗ್ರಾಳಿ ರಸ್ತೆ ತಡೆದು ಶನಿವಾರ ಪ್ರತಿಭಟನೆ ನಡೆಸಿದರು.
Vijaya Karnataka Web BLG-1711-2-52-17MAHESH7


''800 ರೂ.ನಿಂದ 1600 ರೂ.ವರೆಗೆ ಇದ್ದ ಈರುಳ್ಳಿ ದರ ಏಕಾಏಕಿ 150ರಿಂದ 500 ರೂ.ವರೆಗೆ ಕುಸಿತ ಕಂಡಿದೆ. ಬೆವರು ಸುರಿಸಿ ಬೆಳೆದ ಬೆಳೆ ಕೈಗೆ ಬಂದಿರುವಾಗ ದರ ಕುಸಿತ ರೈತರ ಆತ್ಮಸ್ಥೈರ್ಯ ಕುಸಿಯುವಂತೆ ಮಾಡುತ್ತಿದೆ. ಇಂತಹ ಬೆಳವಣಿಗೆಗಳಿಗೆ ದಲ್ಲಾಳಿಗಳ ಕುತಂತ್ರ ಕಾರಣ. ದರ ಕುಸಿತ ತಡೆಯುವಲ್ಲಿ ರಾಜ್ಯ ಸರಕಾರವೂ ವಿಫಲವಾಗುತ್ತಿದೆ. ತಕ್ಷಣ ದರ ಕುಸಿತ ತಡೆದು ರೈತರ ಹಿತ ರಕ್ಷಣೆ ಮಾಡಬೇಕು'', ಎಂದು ಆಗ್ರಹಿಸಿದ ರೈತರು ಕೆಲ ಹೊತ್ತು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ರೈತರ ಪ್ರತಿಭಟನೆಯಂದ ಎಪಿಎಂಸಿ ಮಾರುಕಟ್ಟೆಯಲ್ಲಿ ಕೆಲ ಗಂಟೆಗಳ ಕಾಲ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು. ಸ್ಥಳಕ್ಕಾಗಮಿಸಿದ ಎಪಿಎಂಸಿ ಠಾಣೆ ಪೊಲೀಸರು ರೈತರ ಮನವೊಲಿಸಿ ಪ್ರತಿಭಟನೆ ಹಿಂಪಡೆಯುವಂತೆ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ