ಪ್ರಮೋದ ಹರಿಕಾಂತ ಬೆಳಗಾವಿ: ನೆರೆಯಿಂದ ತತ್ತರಿಸಿರುವ ರಾಜ್ಯದಲ್ಲಿ ದೊಡ್ಡ ಮೊತ್ತದ ಹಣ ಪರಿಹಾರ ರೂಪದಲ್ಲಿಚಲಾವಣೆ ಆಗುತ್ತಿರುವ ಹಿನ್ನೆಲೆಯಲ್ಲಿ ಸಂತ್ರಸ್ತರ ಬ್ಯಾಂಕ್ ಖಾತೆಗಳ ಮೇಲೆ ಆನ್ಲೈನ್ ಕಳ್ಳರ ಕಣ್ಣು ನೆಟ್ಟಿದೆ.
ಪ್ರವಾಹ ಸಂತ್ರಸ್ತ ಕುಟುಂಬಗಳಿಗೆ ತಾತ್ಕಾಲಿಕ 10 ಸಾವಿರ ರೂ. ಪಾವತಿಸಲಾಗಿದೆ. ಸೆ.18ರಿಂದ ಮನೆ ನಷ್ಟ ಪರಿಹಾರವೂ ವಿತರಣೆಯಾಗಲಿದೆ ಎಂದು ಹೇಳಲಾಗುತ್ತಿದೆ. ಆಗ ಬಡವರು, ಕಾರ್ಮಿಕ, ಅನಕ್ಷರಸ್ಥ ಸಂತ್ರಸ್ತರ ಬ್ಯಾಂಕ್ ಖಾತೆಗಳಿಗೆ ಲಕ್ಷಾಂತರ ರೂ. ಹಣ ಸೇರಲಿವೆ. ಅಂಥ ಖಾತೆಗಳಿಗೆ ಕನ್ನ ಹಾಕಲು ಆನ್ಲೈನ್ ಕಳ್ಳರು ಮೇಲಿಂದ ಮೇಲೆ ಸಂತ್ರಸ್ತರಿಗೆ ಕರೆ ಮಾಡಿ ಬ್ಯಾಂಕ್, ಎಟಿಎಂ ಮಾಹಿತಿ ಕೇಳುತ್ತಿದ್ದಾರೆ. ಇದು ಜನರನ್ನು ಗೊಂದಲದಲ್ಲಿಸಿಲುಕಿಸಿದೆ.
'ಆರ್ಬಿಐನಿಂದ ಕರೆ ಮಾಡಿದ್ದೇವೆ. ನಿಮ್ಮ ಎಟಿಎಂ ಕಾರ್ಡ್ ಹಾಳಾಗಿದೆ. ಅದರ ಸಿವಿಸಿ, ಒಟಿಪಿ ಮಾಹಿತಿ ನೀಡಿ, ಹೊಸ ಕಾರ್ಡ್ ಕೊಡುತ್ತೇವೆ' ಎಂದು ಕರೆ ಮಾಡಿ ದುಂಬಾಲು ಬೀಳುತ್ತಿದ್ದಾರೆ. ಪ್ರವಾಹದಲ್ಲಿಎಟಿಎಂ ಕಾರ್ಡ್ ಸೇರಿ ಬ್ಯಾಂಕ್ ದಾಖಲೆ ಹಾನಿಯಾಗಿರುವುದು ನಿಜ. ಹಾಗಾಗಿ ದೂರವಾಣಿ ಕರೆ ನಿಜವಾಗಿಯೂ ಬ್ಯಾಂಕ್ನವರದ್ದೇ ಎಂದು ಸಂತ್ರಸ್ತರನ್ನು ನಂಬಿಸುವ ಯತ್ನ ನಡೆಯುತ್ತಿದೆ.
ರಾಜ್ಯದಲ್ಲಿಪ್ರವಾಹದಿಂದ ಮನೆ ಹಾನಿಯೇ 10 ಸಾವಿರ ಕೋಟಿ ರೂ.ಗೂ ಹೆಚ್ಚಾಗಿದೆ. ಬೆಳಗಾವಿ ಜಿಲ್ಲೆಯೊಂದರಲ್ಲಿಯೇ ಮನೆ ಹಾನಿಯಿಂದ 3 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಊಹಿಸಲಾಗಿದೆ. ರಾಜ್ಯ ಸರಕಾರ ಶೇ. 100 ರಷ್ಟು ಹಾನಿಯಾದ ಮನೆಗೆ ತಲಾ 5 ಲಕ್ಷ ರೂ.ವರೆಗೆ ಪರಿಹಾರ ಕೊಡುವುದಾಗಿ ಹೇಳಿದೆ. ಅಷ್ಟೊಂದು ಹಣ ಸಂತ್ರಸ್ತರ ಬ್ಯಾಂಕ್ ಖಾತೆ ಸೇರಿದ ಮೇಲೆ ಕಳ್ಳರಿಂದ ರಕ್ಷಿಸುವುದು ದೊಡ್ಡ ಸವಾಲಾಗಲಿದೆ.
ಇಂಥ ಅಪಾಯ ತಪ್ಪಿಸುವ ಸಲುವಾಗಿ ಎಲ್ಲಬ್ಯಾಂಕ್ಗಳು ತಮ್ಮ ವ್ಯಾಪ್ತಿಯಲ್ಲಿಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಆರ್ಬಿಐ ಹೇಳಿದೆ. ಆದರೆ, ಬಹುತೇಕ ಬ್ಯಾಂಕ್ಗಳು ಶಾಲಾ, ಕಾಲೇಜುಗಳಲ್ಲೇ ಜಾಗೃತಿ ನಡೆಸಿ ಕೈ ತೊಳೆದುಕೊಳ್ಳುತ್ತಿವೆ. ರೈತರಿಗೆ, ಕಾರ್ಮಿಕರಿಗೆ ಇನ್ನೂ ಎಟಿಎಂ ಬಳಕೆಯ ಅರಿವು ಇಲ್ಲ. ಆದರೂ ಬ್ಯಾಂಕ್ಗಳು ಎಟಿಎಂ ಕಾರ್ಡ್ ಮೂಲಕವೇ ಹಣ ಹಿಂಪಡೆಯುವಂತೆ ಒತ್ತಾಯ ಮಾಡುತ್ತಿರುವುದು ಬಡವರ ಹಣ ಕಳ್ಳರ ಪಾಲಾಗಲು ದಾರಿ ಮಾಡಿಕೊಡುತ್ತಿದೆ.
ನೊಯ್ಡಾ, ಹೈದರಾಬಾದ್ ಕರೆ
ತಮಿಳುನಾಡು, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳದಿಂದಲೇ ಈ ದಂಧೆ ನಿರ್ವಹಣೆಯಾಗುತ್ತಿದೆ. ಇತ್ತೀಚೆಗೆ ನೊಯ್ಡಾ, ಹೈದರಾಬಾದ್, ದೆಹಲಿಯಿಂದ ಗ್ರಾಹಕರಿಗೆ ಹೆಚ್ಚಾಗಿ ಕರೆಗಳು ಬರುತ್ತಿವೆ. ಅದೇ ನಂಬರ್ಗೆ ಮರಳಿ ಕರೆ ಮಾಡಿದರೆ ಸಂಪರ್ಕವಾಗುತ್ತಿಲ್ಲ. ಈ ಕಳ್ಳರು ಎಷ್ಟು ಖತರ್ನಾಕ್ ಎಂದರೆ ನೆಟ್ವರ್ಕ್ ಕಂಪನಿಗಳಿಂದಲೇ ಜನರ ಮೊಬೈಲ್ ಸಂಖ್ಯೆ ಸಂಗ್ರಹಿಸುತ್ತಾರೆ. ಮೊಬೈಲ್ನಲ್ಲಿಇನ್ಸ್ಟಾಲ್ ಆಗುವ ಆ್ಯಪ್ಗಳ ಮೂಲಕವೂ ಮೊಬೈಲ್ ಸಂಖ್ಯೆ ಸೋರಿಕೆಯಾಗುತ್ತಿದೆ. ಆ ನಂಬರ್ ಮೂಲಕ ಬ್ಯಾಂಕ್ ಗ್ರಾಹಕರಿಂದ ಎಟಿಎಂ ಕಾರ್ಡ್, ಒಪಿಟಿ ನಂಬರ್ ಪಡೆದ ಮರು ಕ್ಷಣದಲ್ಲಿಯೇ ಖಾತೆಯಲ್ಲಿದ್ದ ಎಲ್ಲಹಣವನ್ನು ಲಪಟಾಯಿಸಿ ಬಿಡುತ್ತಾರೆ. ನಕಲಿ ಹೆಸರಿನ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗುತ್ತದೆ. ಹಾಗಾಗಿ ತನಿಖೆಯಲ್ಲಿಹಣ ವರ್ಗಾವಣೆಯಾದ ಸ್ಥಳ, ಬ್ಯಾಂಕ್ ಮಾಹಿತಿ ಪತ್ತೆಯಾಗುತ್ತದೆ ಹೊರತು, ಕಳ್ಳರು ಸಿಗುವುದು ಕಷ್ಟ ಎನ್ನುತ್ತಾರೆ ಬೆಳಗಾವಿ ನಗರ ಡಿಸಿಪಿ ಸೀಮಾ ಲಾಟ್ಕರ್.
ಬ್ಯಾಂಕ್ ಖಾತೆ ಸುರಕ್ಷತೆಗೆ ಏನು ದಾರಿ?
* ಎಟಿಎಂ ಕಾರ್ಡ್ ಸಿವಿಸಿ, ಒಟಿಪಿ ಸಂಖ್ಯೆ ಯಾರಿಗೂ ಕೊಡಬಾರದು.
* ಎಟಿಎಂ ಕಾರ್ಡ್ ಮಾಹಿತಿ ಕೇಳಿ ಬ್ಯಾಂಕ್ಗಳು ಕರೆ ಮಾಡುವುದಿಲ್ಲ.
* ಖಾತೆಯ ಮೊಬೈಲ್ ನಂಬರ್ ಬದಲಾಯಿಸಿದರೆ ಬ್ಯಾಂಕ್ಗೆ ತಿಳಿಸಿ.
* ಮೊಬೈಲ್ ಎಸ್ಎಂಎಸ್ ಸೇವೆ ಪಡೆಯುವುದು ಒಳ್ಳೆಯದು.
* ಹಣದ ನಕಲಿ ವರ್ಗಾವಣೆ ನಡೆದರೆ ತಕ್ಷಣ ಎಟಿಎಂ ಕಾರ್ಡ್ ಬ್ಲಾಕ್ ಮಾಡಿಸಿ.
* ಎಟಿಎಂ ಕಾರ್ಡ್ ಮತ್ತು ಕವರ್ ಮೇಲೆ ಪಾಸ್ವರ್ಡ್ ಬರೆಯಬಾರದು.
* ಮೊಬೈಲ್ ಬದಲಾಯಿಸಿದರೆ, ಹಳೆಯ ಮೊಬೈಲ್ ದತ್ತಾಂಶ ಅಳಿಸಿ.
* ಖಾತೆಗೆ ಜೋಡಿಸಿರುವ ಮೊಬೈಲ್ನ ನಂಬರ್ ಇತರ ಆ್ಯಪ್ಗಳಿಗೆ ದಾಖಲಿಸಬೇಡಿ.
ಪ್ರವಾಹ ಸಂತ್ರಸ್ತ ಕುಟುಂಬಗಳಿಗೆ ತಾತ್ಕಾಲಿಕ 10 ಸಾವಿರ ರೂ. ಪಾವತಿಸಲಾಗಿದೆ. ಸೆ.18ರಿಂದ ಮನೆ ನಷ್ಟ ಪರಿಹಾರವೂ ವಿತರಣೆಯಾಗಲಿದೆ ಎಂದು ಹೇಳಲಾಗುತ್ತಿದೆ. ಆಗ ಬಡವರು, ಕಾರ್ಮಿಕ, ಅನಕ್ಷರಸ್ಥ ಸಂತ್ರಸ್ತರ ಬ್ಯಾಂಕ್ ಖಾತೆಗಳಿಗೆ ಲಕ್ಷಾಂತರ ರೂ. ಹಣ ಸೇರಲಿವೆ. ಅಂಥ ಖಾತೆಗಳಿಗೆ ಕನ್ನ ಹಾಕಲು ಆನ್ಲೈನ್ ಕಳ್ಳರು ಮೇಲಿಂದ ಮೇಲೆ ಸಂತ್ರಸ್ತರಿಗೆ ಕರೆ ಮಾಡಿ ಬ್ಯಾಂಕ್, ಎಟಿಎಂ ಮಾಹಿತಿ ಕೇಳುತ್ತಿದ್ದಾರೆ. ಇದು ಜನರನ್ನು ಗೊಂದಲದಲ್ಲಿಸಿಲುಕಿಸಿದೆ.
'ಆರ್ಬಿಐನಿಂದ ಕರೆ ಮಾಡಿದ್ದೇವೆ. ನಿಮ್ಮ ಎಟಿಎಂ ಕಾರ್ಡ್ ಹಾಳಾಗಿದೆ. ಅದರ ಸಿವಿಸಿ, ಒಟಿಪಿ ಮಾಹಿತಿ ನೀಡಿ, ಹೊಸ ಕಾರ್ಡ್ ಕೊಡುತ್ತೇವೆ' ಎಂದು ಕರೆ ಮಾಡಿ ದುಂಬಾಲು ಬೀಳುತ್ತಿದ್ದಾರೆ. ಪ್ರವಾಹದಲ್ಲಿಎಟಿಎಂ ಕಾರ್ಡ್ ಸೇರಿ ಬ್ಯಾಂಕ್ ದಾಖಲೆ ಹಾನಿಯಾಗಿರುವುದು ನಿಜ. ಹಾಗಾಗಿ ದೂರವಾಣಿ ಕರೆ ನಿಜವಾಗಿಯೂ ಬ್ಯಾಂಕ್ನವರದ್ದೇ ಎಂದು ಸಂತ್ರಸ್ತರನ್ನು ನಂಬಿಸುವ ಯತ್ನ ನಡೆಯುತ್ತಿದೆ.
ರಾಜ್ಯದಲ್ಲಿಪ್ರವಾಹದಿಂದ ಮನೆ ಹಾನಿಯೇ 10 ಸಾವಿರ ಕೋಟಿ ರೂ.ಗೂ ಹೆಚ್ಚಾಗಿದೆ. ಬೆಳಗಾವಿ ಜಿಲ್ಲೆಯೊಂದರಲ್ಲಿಯೇ ಮನೆ ಹಾನಿಯಿಂದ 3 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಊಹಿಸಲಾಗಿದೆ. ರಾಜ್ಯ ಸರಕಾರ ಶೇ. 100 ರಷ್ಟು ಹಾನಿಯಾದ ಮನೆಗೆ ತಲಾ 5 ಲಕ್ಷ ರೂ.ವರೆಗೆ ಪರಿಹಾರ ಕೊಡುವುದಾಗಿ ಹೇಳಿದೆ. ಅಷ್ಟೊಂದು ಹಣ ಸಂತ್ರಸ್ತರ ಬ್ಯಾಂಕ್ ಖಾತೆ ಸೇರಿದ ಮೇಲೆ ಕಳ್ಳರಿಂದ ರಕ್ಷಿಸುವುದು ದೊಡ್ಡ ಸವಾಲಾಗಲಿದೆ.
ಇಂಥ ಅಪಾಯ ತಪ್ಪಿಸುವ ಸಲುವಾಗಿ ಎಲ್ಲಬ್ಯಾಂಕ್ಗಳು ತಮ್ಮ ವ್ಯಾಪ್ತಿಯಲ್ಲಿಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಆರ್ಬಿಐ ಹೇಳಿದೆ. ಆದರೆ, ಬಹುತೇಕ ಬ್ಯಾಂಕ್ಗಳು ಶಾಲಾ, ಕಾಲೇಜುಗಳಲ್ಲೇ ಜಾಗೃತಿ ನಡೆಸಿ ಕೈ ತೊಳೆದುಕೊಳ್ಳುತ್ತಿವೆ. ರೈತರಿಗೆ, ಕಾರ್ಮಿಕರಿಗೆ ಇನ್ನೂ ಎಟಿಎಂ ಬಳಕೆಯ ಅರಿವು ಇಲ್ಲ. ಆದರೂ ಬ್ಯಾಂಕ್ಗಳು ಎಟಿಎಂ ಕಾರ್ಡ್ ಮೂಲಕವೇ ಹಣ ಹಿಂಪಡೆಯುವಂತೆ ಒತ್ತಾಯ ಮಾಡುತ್ತಿರುವುದು ಬಡವರ ಹಣ ಕಳ್ಳರ ಪಾಲಾಗಲು ದಾರಿ ಮಾಡಿಕೊಡುತ್ತಿದೆ.
ನೊಯ್ಡಾ, ಹೈದರಾಬಾದ್ ಕರೆ
ತಮಿಳುನಾಡು, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳದಿಂದಲೇ ಈ ದಂಧೆ ನಿರ್ವಹಣೆಯಾಗುತ್ತಿದೆ. ಇತ್ತೀಚೆಗೆ ನೊಯ್ಡಾ, ಹೈದರಾಬಾದ್, ದೆಹಲಿಯಿಂದ ಗ್ರಾಹಕರಿಗೆ ಹೆಚ್ಚಾಗಿ ಕರೆಗಳು ಬರುತ್ತಿವೆ. ಅದೇ ನಂಬರ್ಗೆ ಮರಳಿ ಕರೆ ಮಾಡಿದರೆ ಸಂಪರ್ಕವಾಗುತ್ತಿಲ್ಲ. ಈ ಕಳ್ಳರು ಎಷ್ಟು ಖತರ್ನಾಕ್ ಎಂದರೆ ನೆಟ್ವರ್ಕ್ ಕಂಪನಿಗಳಿಂದಲೇ ಜನರ ಮೊಬೈಲ್ ಸಂಖ್ಯೆ ಸಂಗ್ರಹಿಸುತ್ತಾರೆ. ಮೊಬೈಲ್ನಲ್ಲಿಇನ್ಸ್ಟಾಲ್ ಆಗುವ ಆ್ಯಪ್ಗಳ ಮೂಲಕವೂ ಮೊಬೈಲ್ ಸಂಖ್ಯೆ ಸೋರಿಕೆಯಾಗುತ್ತಿದೆ. ಆ ನಂಬರ್ ಮೂಲಕ ಬ್ಯಾಂಕ್ ಗ್ರಾಹಕರಿಂದ ಎಟಿಎಂ ಕಾರ್ಡ್, ಒಪಿಟಿ ನಂಬರ್ ಪಡೆದ ಮರು ಕ್ಷಣದಲ್ಲಿಯೇ ಖಾತೆಯಲ್ಲಿದ್ದ ಎಲ್ಲಹಣವನ್ನು ಲಪಟಾಯಿಸಿ ಬಿಡುತ್ತಾರೆ. ನಕಲಿ ಹೆಸರಿನ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗುತ್ತದೆ. ಹಾಗಾಗಿ ತನಿಖೆಯಲ್ಲಿಹಣ ವರ್ಗಾವಣೆಯಾದ ಸ್ಥಳ, ಬ್ಯಾಂಕ್ ಮಾಹಿತಿ ಪತ್ತೆಯಾಗುತ್ತದೆ ಹೊರತು, ಕಳ್ಳರು ಸಿಗುವುದು ಕಷ್ಟ ಎನ್ನುತ್ತಾರೆ ಬೆಳಗಾವಿ ನಗರ ಡಿಸಿಪಿ ಸೀಮಾ ಲಾಟ್ಕರ್.
ಎಟಿಎಂ ಕಾರ್ಡ್ ಮಾಹಿತಿ ಕೇಳಿ ನೊಯ್ಡಾ, ಹೈದರಾಬಾದ್ನಿಂದ ಬ್ಯಾಂಕ್ ಗ್ರಾಹಕರಿಗೆ ಕರೆಗಳು ಬರುತ್ತಿರುವುದು ನಿಜ. ಯಾವುದೇ ಬ್ಯಾಂಕ್ ಎಟಿಎಂ ಕಾರ್ಡ್ ಪಿನ್ ನಂಬರ್ ಕೇಳಿ ಕರೆ ಮಾಡುವುದಿಲ್ಲ. ಗ್ರಾಹಕರು ಫೋನ್ನಲ್ಲಿಯಾವುದೇ ಮಾಹಿತಿ ಹಂಚಿಕೊಳ್ಳಬಾರದು.
ಬ್ಯಾಂಕ್ ಖಾತೆ ಸುರಕ್ಷತೆಗೆ ಏನು ದಾರಿ?
* ಎಟಿಎಂ ಕಾರ್ಡ್ ಸಿವಿಸಿ, ಒಟಿಪಿ ಸಂಖ್ಯೆ ಯಾರಿಗೂ ಕೊಡಬಾರದು.
* ಎಟಿಎಂ ಕಾರ್ಡ್ ಮಾಹಿತಿ ಕೇಳಿ ಬ್ಯಾಂಕ್ಗಳು ಕರೆ ಮಾಡುವುದಿಲ್ಲ.
* ಖಾತೆಯ ಮೊಬೈಲ್ ನಂಬರ್ ಬದಲಾಯಿಸಿದರೆ ಬ್ಯಾಂಕ್ಗೆ ತಿಳಿಸಿ.
* ಮೊಬೈಲ್ ಎಸ್ಎಂಎಸ್ ಸೇವೆ ಪಡೆಯುವುದು ಒಳ್ಳೆಯದು.
* ಹಣದ ನಕಲಿ ವರ್ಗಾವಣೆ ನಡೆದರೆ ತಕ್ಷಣ ಎಟಿಎಂ ಕಾರ್ಡ್ ಬ್ಲಾಕ್ ಮಾಡಿಸಿ.
* ಎಟಿಎಂ ಕಾರ್ಡ್ ಮತ್ತು ಕವರ್ ಮೇಲೆ ಪಾಸ್ವರ್ಡ್ ಬರೆಯಬಾರದು.
* ಮೊಬೈಲ್ ಬದಲಾಯಿಸಿದರೆ, ಹಳೆಯ ಮೊಬೈಲ್ ದತ್ತಾಂಶ ಅಳಿಸಿ.
* ಖಾತೆಗೆ ಜೋಡಿಸಿರುವ ಮೊಬೈಲ್ನ ನಂಬರ್ ಇತರ ಆ್ಯಪ್ಗಳಿಗೆ ದಾಖಲಿಸಬೇಡಿ.