ಆ್ಯಪ್ನಗರ

ಬೇಪಾರಿ ಸಮುದಾಯದ ಬಯಲು ರಂಗ ಮಂದಿರ ಉದ್ಘಾಟನೆ

ಯಮಕನಮರಡಿ: ಗ್ರಾಮದ ಬೇಪಾರಿ ಹಾಗೂ ಎಸ್‌ಟಿ ಸಮುದಾಯದ ಜನರಿಗೆ ತಾಪಂ ಅನುದಾನದಲ್ಲಿ ಮಂಜೂರಾದ 9ಲಕ್ಷ ರೂ...

Vijaya Karnataka 19 Jun 2019, 5:00 am
ಯಮಕನಮರಡಿ : ಗ್ರಾಮದ ಬೇಪಾರಿ ಹಾಗೂ ಎಸ್‌ಟಿ ಸಮುದಾಯದ ಜನರಿಗೆ ತಾಪಂ ಅನುದಾನದಲ್ಲಿ ಮಂಜೂರಾದ 9ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಬಯಲು ರಂಗ ಮಂದಿರದ ಉದ್ಘಾಟನೆಯನ್ನು ಅರಣ್ಯ ಮತ್ತು ಪರಿಸರ ಖಾತೆ ಸಚಿವ ಸತೀಶ ಜಾರಕಿಹೊಳಿ ಸೋಮವಾರ ನೇರವೇರಿಸಿದರು.
Vijaya Karnataka Web BEL-18YMD2


ಆವರು ಮಾತನಾಡಿ, ಗ್ರಾಮದಲ್ಲಿ ನೆನೆಗುದಿಗೆ ಬಿದ್ದಿರುವ ಮುಸ್ಲಿಂ ಹಾಗೂ ಬೇಪಾರಿ ಸಮಾಜದ ಎರಡು ಶಾಹದಿ ಮಹಲ್‌ ಸಮುದಾಯ ಭವನಗಳಿಗೆ ಅನುದಾನ ನೀಡಿ ಪೂರ್ಣಗೊಳಿಸಲಾಗುವುದು. ಈ ಬಾರಿ ಮಕ್ಕಳಿಗೆ ಶಾಲಾ ಕಟ್ಟಡ, ನೀರು ಹಾಗೂ ನೀರಾವರಿ ಸೌಲಭ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.

ಈ ಕಾರ್ಯಕ್ರಮದಲ್ಲಿ ಬೇಪಾರಿ ಸಮಾಜದ ಮುಖಂಡ ಹನೀಪ್‌ ಬೇಪಾರಿ, ಯಮಕನಮರಡಿ ತಾಪಂ ಸದಸ್ಯೆ ಸುನೀತಾ ಬಿಸಿರೊಟ್ಟಿ, ಯಮಕನಮರಡಿ ಗ್ರಾಪಂ ಅಧ್ಯಕ್ಷೆ ಅವ್ವಕ್ಕಾ ಮಾದರ, ಹುಕ್ಕೇರಿ ತಾಪಂ ಅಧ್ಯಕ್ಷ ದಸ್ತಗೀರ ಬಸ್ಸಾಪೂರಿ, ಹತ್ತರಗಿ ಗ್ರಾಪಂ ಅಧ್ಯಕ್ಷ ಮಹಾದೇವ ಪಟೋಳಿ, ಮುಸ್ಲಿಂ ಸಮಾಜ ಗುರುಗಳಾದ ಮೌಲಾನಾ ಹರೂನ್‌, ರವೀಂದ್ರ ಜಿಂಡ್ರಾಳಿ, ಅಸ್ಲಾಂ ಪಕ್ಕಾಲಿ, ಸುಲ್ತಾನ್‌ ಬೇಪಾರಿ, ಬಶೀರ್‌ ಬೇಪಾರಿ, ಶರೀಫ್‌ ಬೇಪಾರಿ, ಹಸನ್‌ ಬೇಪಾರಿ, ದೇವಪ್ಪ ಹುನ್ನೂರಿ, ಸಿದ್ದಪ್ಪ ಬರಗಾಲಿ, ಕಹಿಮ್‌ ಖಾಜಿ, ಬಶೀರ್‌ಸಾಹೇಬ್‌ ಶಾಹಪುರಿ, ಕಿರಣ ರಜಪೂತ, ಹಣಮಂತ ಬರಗಾಲಿ, ಸಂಜು ಹಟ್ಟಿ, ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ