ಆ್ಯಪ್ನಗರ

ಬೆಳಗಾವಿಯಲ್ಲಿ ಇಪಿಎಫ್‌ ಕೇಂದ್ರ ಆರಂಭಿಸಿ

ಬೆಳಗಾವಿ: ಬೆಳಗಾವಿಯಲ್ಲಿ ಕಾರ್ಮಿಕರ ಸಂಚಿತ ನಿಧಿ(ಇಪಿಎಫ್‌) ಕೇಂದ್ರ ಆರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೆಳಗಾವಿ ...

Vijaya Karnataka 8 Feb 2019, 5:00 am
ಬೆಳಗಾವಿ : ಬೆಳಗಾವಿಯಲ್ಲಿ ಕಾರ್ಮಿಕರ ಸಂಚಿತ ನಿಧಿ(ಇಪಿಎಫ್‌) ಕೇಂದ್ರ ಆರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೆಳಗಾವಿ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಪದಾಧಿಕಾರಿಗಳು ಗುರುವಾರ ಹುಬ್ಬಳ್ಳಿ ಪ್ರಾದೇಶಿಕ ಕಚೇರಿಯ ಇಪಿಎಫ್‌ ಸಹಾಯಕ ಆಯುಕ್ತ ದೀಪಕ ಆರ್ಯಾ ಹಾಗೂ ಸುಧೀರ್‌ ರಂಜನ್‌ ಅವರಿಗೆ ಮನವಿ ಸಲ್ಲಿಸಿದರು.
Vijaya Karnataka Web BLG-0702-2-52-`7PRAMOD2


ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ರೋಹನ್‌ ಜುವಳಿ ಕಾರ್ಮಿಕರ ಪಿಎಫ್‌ ವ್ಯವಸ್ಥೆಯಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿದರು. ಸಂಘದ ಸಹಯೋಗದೊಂದಿಗೆ ಬೆಳಗಾವಿಯಲ್ಲಿ ಪಿಎಫ್‌ ಕುರಿತು ಜಾಗೃತಿ ಮೂಡಿಸಬೇಕು ಎಂದು ವಿನಂತಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ದೀಪಕ್‌ ಆರ್ಯಾ ಅವರು, ಇನ್ನೊಂದು ವಾರದಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಭರವಸೆ ನೀಡಿದರು.

ಪಿಎಫ್‌ ವೆಬ್‌ಸೈಟ್‌ನಲ್ಲಿ ಆಧಾರ್‌ ಮತ್ತು ಪಾನ್‌ ಸಂಖ್ಯೆ ಹೊಂದಾಣಿಕೆಯಾಗುತ್ತಿಲ್ಲ. ಕಾರ್ಮಿಕರ ಹೆಸರುಗಳು ಬೇರೆ ಬೇರೆ ತೋರಿಸುತ್ತಿವೆ. ದೃಢಪಡಿಸುವ ಸಂಖ್ಯೆ ಮಾನ್ಯತೆ ಇಲ್ಲ ಎಂದು ತೋರಿಸುತ್ತಿದೆ. ಕಾರ್ಮಿಕರ ಆಧಾರ್‌ ಸಂಖ್ಯೆಯೊಂದಿಗೆ ಯಾವ ದಾಖಲೆಗಳ ಮಾಹಿತಿ ಹೊಂದಾಣಿಕೆಯಾಗುತ್ತಿಲ್ಲ ಎನ್ನುವುದು ಸೇರಿದಂತೆ ಸುಮಾರು 11 ಸಮಸ್ಯೆಗಳ ಪಟ್ಟಿಯನ್ನು ಮನವಿಯೊಂದಿಗೆ ಸಲ್ಲಿಸಿದರು.

ಪ್ರಕಾಶ ಪಂಡಿತ್‌, ಪವನ್‌ ಕದಂ, ರಮೇಶ ಚೌಗುಲೆ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ