ನಾಳೆ ಮುಕ್ತ ಪಗಡಿ ಪಂದ್ಯಾವಳಿ
ಶಿರಸಂಗಿ: ಸಮೀಪದ ಕಲ್ಲಾಪುರದ ಶ್ರೀ ಕಲ್ಮೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಶ್ರೀ ಕಲ್ಮೇಶ್ವರ ಜೀರ್ಣೋದ್ಧಾರ ಕಮಿಟಿ ಮತ್ತು ಶ್ರೀ ಕಲ್ಮೇಶ್ವರ ಪಗಡಿ ...
Vijaya Karnataka 23 Jan 2019, 5:00 am
ಶಿರಸಂಗಿ : ಸಮೀಪದ ಕಲ್ಲಾಪುರದ ಶ್ರೀ ಕಲ್ಮೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಶ್ರೀ ಕಲ್ಮೇಶ್ವರ ಜೀರ್ಣೋದ್ಧಾರ ಕಮಿಟಿ ಮತ್ತು ಶ್ರೀ ಕಲ್ಮೇಶ್ವರ ಪಗಡಿ ತಂಡದ ಆಶ್ರಯದಲ್ಲಿ ಗಣರಾಜ್ಯೋತ್ಸವ ಅಂಗವಾಗಿ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ಪಗಡಿ ಪಂದ್ಯಾವಳಿಗಳನ್ನು ಜ. 24ರ ರಾತ್ರಿ 9.30ಕ್ಕೆ ಏರ್ಪಡಿಸಲಾಗಿದೆ.
ಗುರುಪಾದಯ್ಯ ಹಿರೇಮಠ ಸಾನ್ನಿಧ್ಯ ವಹಿಸುವರು, ಶಾಸಕ ಆನಂದ ಮಾಮನಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷ ತೆ ಫಕೀರಪ್ಪ ಓಗಳಾಪೂರ ವಹಿಸಲಿದ್ದಾರೆ. ಜಗದೀಶ ಹನಸಿ, ಕಲ್ಲಪ್ಪ (ಮಹಾರಾಜ) ಕಣವಿ, ಮಲ್ಲಿಕಾರ್ಜುನ ಬೇವೂರ ಹಾಗೂ ಬಿ.ಎಚ್. ಪೂಜಾರ ಜ್ಯೋತಿ ಬೆಳಗಿಸಲಿದ್ದಾರೆ. ಸಂಗೀತ ಕಾರ್ಯಕ್ರಮವನ್ನು ಕುಮಾರಿ ಪೂರ್ವಿ, ಕಲ್ಲೂರ ನಡೆಸಿಕೊಡಲಿದ್ದಾರೆ. ಪ್ರಥಮ ಬಹುಮಾನ ಒಂದು ಜತೆ ಹೋರಿ ಮತ್ತು ಒಂದು ಶೀಲ್ಡು, ಎರಡನೆಯ ಬಹುಮಾನ 21,000 ರೂ, ಮೂರನೆಯ ಬಹುಮಾನ 15,100 ರೂ. ಹಾಗೂ ನಾಲ್ಕನೆಯ ಬಹುಮಾನವಾಗಿ 10,100 ರೂ. ನೀಡಲಾಗುವುದು. ನಾಲ್ಕು ಸಮಾಧಾನಕರ ಬಹುಮಾನಗಳಿವೆ ಎಂದು ಹನುಮಂತ ಗುರ್ಲಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಹಿತಿಗೆ ದೂ: 9731228023, 9743675814 ಸಂಪರ್ಕಿಸಬಹುದು.
ಗುರುಪಾದಯ್ಯ ಹಿರೇಮಠ ಸಾನ್ನಿಧ್ಯ ವಹಿಸುವರು, ಶಾಸಕ ಆನಂದ ಮಾಮನಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷ ತೆ ಫಕೀರಪ್ಪ ಓಗಳಾಪೂರ ವಹಿಸಲಿದ್ದಾರೆ. ಜಗದೀಶ ಹನಸಿ, ಕಲ್ಲಪ್ಪ (ಮಹಾರಾಜ) ಕಣವಿ, ಮಲ್ಲಿಕಾರ್ಜುನ ಬೇವೂರ ಹಾಗೂ ಬಿ.ಎಚ್. ಪೂಜಾರ ಜ್ಯೋತಿ ಬೆಳಗಿಸಲಿದ್ದಾರೆ. ಸಂಗೀತ ಕಾರ್ಯಕ್ರಮವನ್ನು ಕುಮಾರಿ ಪೂರ್ವಿ, ಕಲ್ಲೂರ ನಡೆಸಿಕೊಡಲಿದ್ದಾರೆ. ಪ್ರಥಮ ಬಹುಮಾನ ಒಂದು ಜತೆ ಹೋರಿ ಮತ್ತು ಒಂದು ಶೀಲ್ಡು, ಎರಡನೆಯ ಬಹುಮಾನ 21,000 ರೂ, ಮೂರನೆಯ ಬಹುಮಾನ 15,100 ರೂ. ಹಾಗೂ ನಾಲ್ಕನೆಯ ಬಹುಮಾನವಾಗಿ 10,100 ರೂ. ನೀಡಲಾಗುವುದು. ನಾಲ್ಕು ಸಮಾಧಾನಕರ ಬಹುಮಾನಗಳಿವೆ ಎಂದು ಹನುಮಂತ ಗುರ್ಲಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಹಿತಿಗೆ ದೂ: 9731228023, 9743675814 ಸಂಪರ್ಕಿಸಬಹುದು.