ಆ್ಯಪ್ನಗರ

ಮಾಯಕ್ಕಾದೇವಿ ವಸತಿ ನಿಲಯದಲ್ಲಿ ಕ್ವಾರಂಟೈನ್‌ಗೆ ವಿರೋಧ

ರಾಯಬಾಗ: ತಾಲೂಕಿನ ಕುಡಚಿಯ ಕೊರೊನಾ ಶಂಕಿತರನ್ನು ...

Vijaya Karnataka 18 Apr 2020, 5:00 am
ರಾಯಬಾಗ: ತಾಲೂಕಿನ ಕುಡಚಿಯ ಕೊರೊನಾ ಶಂಕಿತರನ್ನು ಚಿಂಚಲಿ ಪಟ್ಟಣದ ಮಾಯಕ್ಕಾದೇವಿ ಧರ್ಮಶಾಲೆ ವಸತಿ ನಿಲಯದಲ್ಲಿ ಕ್ವಾರಂಟೈನ್‌ ಮಾಡುವುದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
Vijaya Karnataka Web oppose for quarantine in mayakka devi guest house
ಮಾಯಕ್ಕಾದೇವಿ ವಸತಿ ನಿಲಯದಲ್ಲಿ ಕ್ವಾರಂಟೈನ್‌ಗೆ ವಿರೋಧ


ಪಟ್ಟಣದ ಮಧ್ಯದಲ್ಲಿರುವ ಮಾಯಕ್ಕಾದೇವಿ ಧರ್ಮಶಾಲೆ ವಸತಿ ನಿಲಯಕ್ಕೆ ಶುಕ್ರವಾರ ಕೊರೊನಾ ಶಂಕಿತ ಕುಟುಂಬಗಳನ್ನು ಕ್ವಾರಂಟೈನ್‌ಗಾಗಿ ಕರೆ ತರುವ ಸುದ್ದಿ ತಿಳಿದು ವಸತಿ ನಿಲಯದ ಮುಂದೆ ನೂರಾರು ಸಾರ್ವಜನಿಕರು, ಮಹಿಳೆಯರು, ಮುಖಂಡರು ಸೇರಿ ಪ್ರತಿಭಟಿಸಿದರು. ಯಾವುದೇ ಕಾರಣಕ್ಕೂ ಕೊರೋನಾ ಶಂಕಿತ ವ್ಯಕ್ತಿ ಹಾಗೂ ಕುಟುಂಬದವರನ್ನು ಇಲ್ಲಿಗೆ ಕರೆತರಬಾರದು ಎಂದು ಪಟ್ಟುಹಿಡಿದರು.

ದೇವಸ್ಥಾನದ ಟ್ರಸ್ಟ್‌ ಕಮಿಟಿ ಅಧ್ಯಕ್ಷ ಜಿತೇಂದ್ರ ಜಾಧವ, ''ಚಿಂಚಲಿ ಪಟ್ಟಣದಲ್ಲಿಒಂದೂ ಕೊರೊನಾ ಪ್ರಕರಣವಿಲ್ಲ. ಕೊರೊನಾ ಶಂಕಿತ ವ್ಯಕ್ತಿಗಳನ್ನು ಇಲ್ಲಿಗೆ ಕರೆತರುವುದರಿಂದ ಪಟ್ಟಣ ಸೇರಿದಂತೆ ಸುತ್ತಲಿನ ಪ್ರದೇಶ ರೆಡ್‌ಝೋನ್‌ ಆಗಿ ಮಾರ್ಪಾಡಾಗಲಿದೆ. ಕ್ವಾರೆಂಟೈನ್‌ಗಾಗಿ ಕರೆ ತಂದವರನ್ನು ವಾಪಸ್‌ ಕಳುಹಿಸಿ. ತಾಲೂಕಿನಲ್ಲಿ ಸೋಂಕಿತ ಪ್ರದೇಶಗಳಲ್ಲಿಯೇ ಕ್ವಾರಂಟೈನ್‌ಗಾಗಿ ವ್ಯವಸ್ಥೆ ಕಲ್ಪಿಸಿ'' ಎಂದರು.

ಸಿಪಿಐ ಕೆ.ಎಸ್‌. ಹಟ್ಟಿ, ಪಪಂ ಮುಖ್ಯಾಧಿಕಾರಿ ಎಸ್‌.ಜಿ. ಪೂಜೇರಿ, ಗ್ರಾಮ ಲೆಕ್ಕಾಧಿಕಾರಿ ಜಗದೀಶ ಕಿತ್ತೂರ, ವೈದ್ಯಾಧಿಕಾರಿ ಜೀವನ ಹೊಸಟ್ಟಿ ಹಾಗೂ ಮುಖಂಡರು ಇದ್ದರು.

ಚರ್ಚಿಸಿ ಕ್ರಮ: ತಹಸೀಲ್ದಾರ

ಸ್ಥಳಕ್ಕೆ ತಹಸೀಲ್ದಾರ ಚಂದ್ರಕಾಂತ ಭಜಂತ್ರಿ ಆಗಮಿಸಿ, ''ರಾಯಬಾಗ ಹಾಗೂ ಕುಡಚಿಯಲ್ಲಿಜೀವಕ್ಕೆ ಹಾನಿಯಾಗುವಂಥ ಯಾವುದೇ ರೋಗಿಗಳಿಲ್ಲ. ಆರೋಗ್ಯವಂತರ ಸುರಕ್ಷತೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಪಾಸಿಟಿವ್‌ ಬಂದವರನ್ನು ನೇರವಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ಸಹಕರಿಸಬೇಕು'' ಎಂದರು. ಗಂಟೆಗೂ ಹೆಚ್ಚು ಕಾಲ ಜನರ ಮನವೊಲಿಸಲು ಪ್ರಯತ್ನಿಸಿದರೂ ಪ್ರಯೋಜನವಾಗದ್ದರಿಂದ ತಹಸೀಲ್ದಾರ, ಈ ಕುರಿತು ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ