ಆ್ಯಪ್ನಗರ

ನೂತನ ಮೋಟಾರು ವಾಹನ ಕಾಯ್ದೆಗೆ ವಿರೋಧ

ಬೈಲಹೊಂಗಲ: ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ನೂತನ ಮೋಟಾರು ವಾಹನ ಕಾಯ್ದೆಯನ್ನು ...

Vijaya Karnataka 14 Aug 2018, 5:00 am
ಬೈಲಹೊಂಗಲ: ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ನೂತನ ಮೋಟಾರು ವಾಹನ ಕಾಯ್ದೆಯನ್ನು ವಿರೋಧಿಸಿ ಉತ್ತರ ಕರ್ನಾಟಕ ಹಸಿರು ಸೇನೆ, ರೈತ ಸಂಘದ ಸದಸ್ಯರು ಸೋಮವಾರ ಟ್ರ್ಯಾಕ್ಟರ್‌ಗಳ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿ, ಉಪವಿಭಾಗಾಧಿಕಾರಿ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು.
Vijaya Karnataka Web BEL-13HTP2


ಹಸಿರು ಸೇನೆ, ರೈತ ಸಂಘದ ತಾಲೂಕಾಧ್ಯಕ್ಷ ಪುಂಡಲೀಕ ಹೋಟಿ ಮಾತನಾಡಿ, ಸರಕಾರದ ನೂತನ ಮೋಟಾರು ವಾಹನ ಕಾಯ್ದೆ ರೈತ ವಿರೋಧಿಯಾಗಿದ್ದು, ಸತತ ಬರಗಾಲದ ಪರಿಸ್ಥಿತಿಯನ್ನು ಎದುರಿಸಿದ ರೈತರು ಉಳುಮೆಗೆ ಬಳಸುತ್ತಿದ್ದ ದನಕರುಗಳನ್ನು ಸಾಕಲು ಆಗದೆ ಅವುಗಳನ್ನು ಮಾರಾಟ ಮಾಡಿ ತಮ್ಮ ಕೃಷಿ ಕೆಲಸಗಳಿಗಾಗಿ ಮೋಟಾರು ವಾಹನಗಳನ್ನು ಅವಲಂಭಿಸಿದ್ದಾರೆ. ಈ ವಾಹನಗಳು ಪ್ರತಿಯೊಂದು ಹಂತದಲ್ಲಿ ರೈತರ ಜತೆಗಿದ್ದು ಕೃಷಿ ಚಟುವಟಿಕೆಗಳಿಗೆ ಸಾಥ್‌ ನೀಡುತ್ತಿವೆ. ನೂತನ ಮೋಟಾರು ವಾಹನ ಕಾಯ್ದೆಯಿಂದ ವಾಹನಗಳ ನಿರ್ವಹಣೆ ಕಷ್ಟಸಾಧ್ಯವಾಗುತ್ತಿದೆ ಎಂದರು.

ರೈತ ಮುಖಂಡ ಬಾಳಪ್ಪ ಚಳಕೊಪ್ಪ, ಗಂಗಾಧರ ಚಪಳಿ, ನ್ಯಾಯವಾದಿ ಮಹಾಂತೇಶ ಮತ್ತಿಕೊಪ್ಪ ಮಾತನಾಡಿ, ಪ್ರಸ್ತುತ ಜಾರಿಗೆ ತರಲು ಉದ್ದೇಶಿಸಿರುವ ನೂತನ ಕಾಯ್ದೆಯಲ್ಲಿ ಕೆಲವೊಂದು ಹೊಸ ನೀತಿಗಳನ್ನು ಅಳವಡಿಸಿಕೊಂಡಿರುವುದರಿಂದ ಹೊಸ ಕಾನೂನುಗಳಿಗೆ ರೈತರು ಹೊಂದಿಕೊಳ್ಳುವುದು ಅಸಾಧ್ಯವಾಗಿದೆ. ಕಾರಣ ಪುನರ್‌ ಪರಿಶೀಲಿಸಿ ವಿನಾಯತಿ ನೀಡಬೇಕೆಂದು ಆಗ್ರಹಿಸಿದರು.

ಇದಕ್ಕೂ ಮೊದಲು ಪಟ್ಟಣದ ಬೆಳಗಾವಿ ರಸ್ತೆಯಲ್ಲಿರುವ ವೀರರಾಣಿ ಕಿತ್ತೂರು ಚನ್ನಮ್ಮ ಅಶ್ವಾರೂಢ ಮೂರ್ತಿಯಿಂದ ಟ್ರ್ಯಾಕ್ಟರ್‌ ಹಾಗೂ ರೈತರ ಬೃಹತ ಪ್ರತಿಭಟನಾ ರಾರ‍ಯಲಿಯು ಬಸ್‌ ನಿಲ್ದಾಣ, ಸಂಗೊಳ್ಳಿ ರಾಯಣ್ಣ ಸರ್ಕಲ್‌ ಮೂಲಕ ಹಾಯ್ದು ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಮರ್ಪಿಸಿದರು. ಸಾಮಾಜಿಕ ಹೋರಾಟಗಾರ ರಫೀಕ ಬಡೇಘರ, ಖಾನಗೌಡ ಪಾಟೀಲ, ಉಮೇಶ ಸೊಪ್ಪಿಮಠ, ಎಸ್‌.ಸಿ. ಹಾವನ್ನರ, ಚಂದ್ರಕಾಂತ ಹೊಳಿ, ಮಡಿವಾಳಪ್ಪ ಹೋಟಿ, ರಾಜು ಹಿಟ್ಟಣಗಿ, ರಾಜು ನರಸನ್ನವರ, ಮೋಹನ ಕೋಟಗಿ, ರಾಜು ಕುಡಸೋಮಣ್ಣವರ, ಬಸಪ್ಪ ರೊಡಬಸನ್ನವರ, ಮಾಯಪ್ಪ ಹೆಗಡೆ, ಬಸವಂತಪ್ಪ ರೊಡಬಸನ್ನವರ, ಶಂಕರ ಭರಮನ್ನವರ, ಅನಿಲ ಬೋಳನ್ನವರ, ಬಸವರಾಜ ಅಸುಂಡಿ, ಸತೀಶ ತೋಟಗಿ, ಮಲ್ಲಿಕಾರ್ಜುನ ಹರಕುಣಿ, ಶಿವನಿಂಗ ದಿನ್ನಿಮನಿ, ರಮೇಶ ದಳವಾಯಿ, ಕುಮಾರ ಪಾಟೀಲ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ