ಆ್ಯಪ್ನಗರ

ಕಸಾಯಿಖಾನೆ ಸ್ಥಳಾಂತರಕ್ಕೆ ವಿರೋಧ

ಬೆಳಗಾವಿ: ಇಲ್ಲಿನ ಕಂಟೋನ್ಮೆಂಟ್‌ ಮಂಡಳಿಯ ಸಾಮಾನ್ಯ ಸಭೆ ಶನಿವಾರ ಜರುಗಿದ್ದು ...

Vijaya Karnataka 1 Sep 2019, 5:00 am
ಬೆಳಗಾವಿ: ಇಲ್ಲಿನ ಕಂಟೋನ್ಮೆಂಟ್‌ ಮಂಡಳಿಯ ಸಾಮಾನ್ಯ ಸಭೆ ಶನಿವಾರ ಜರುಗಿದ್ದು, ವ್ಯಾಪ್ತಿ ಪ್ರದೇಶದಲ್ಲಿಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ.
Vijaya Karnataka Web 31RAJU-6090912


ಮಂಡಳಿಯ ಅಧ್ಯಕ್ಷರೂ ಆಗಿರುವ ಎಂಎಲ್‌ಐಆರ್‌ಸಿ ಬ್ರಿಗೇಡಿಯರ್‌ ಗೋವಿಂದ ಕಲವಾಡ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಆರ್ಬಿಯಾ ಧಾರವಾಡಕರ್‌ ಸ್ವ-ಇಚ್ಛೆಯಿಂದ ತಮ್ಮ ಸ್ಥಾನಕ್ಕೆ ಆ. 16ರಂದು ನೀಡಿದ್ದ ರಾಜೀನಾಮೆ ಅಂಗೀಕಾರವಾಯಿತು.

ಮಂಡಳಿಯ ಸಾರ್ವಜನಿಕ ಶೌಚಾಲಯಗಳನ್ನು ಸ್ವಚ್ಛವಾಗಿಡುವುದು, ತರಕಾರಿ ಮಾರುಕಟ್ಟೆ, ಚಿಕನ್‌, ಮಟನ್‌, ಹಂದಿ ಮಾಂಸ ಮಾರುಕಟ್ಟೆಗಳ ಮಳಿಗೆಗಳ ಬಾಡಿಗೆ ಹೆಚ್ಚಿಸುವ ಸಂಗತಿಗಳು ಚರ್ಚೆಗೆ ಬಂದವು. ಕಸಾಯಿಖಾನೆ ಸ್ಥಳಾಂತರ ಕುರಿತು ಹೆಚ್ಚು ಚರ್ಚೆ ನಡೆಯಿತು. ಅಧ್ಯಕ್ಷರು ಕಸಾಯಿಖಾನೆಯನ್ನು ಬೇರೆಡೆಗೆ ಸ್ಥಳಾಂತರಿಸಬೇಕೆಂದು ಸೂಚಿಸಿದರೆ ಸದಸ್ಯರು ಅದು ಬ್ರಿಟಿಷ್‌ ಕಾಲದಿಂದ ಅಲ್ಲಿಯೇ ಇದೆ. ಈಗ ಅದರ ಸಮೀಪ ಪ್ರದೇಶದಲ್ಲಿಸೇನಾಧಿಕಾರಿಗಳ ಮನೆಗಳು ಬಂದಿವೆಯಂದು ಸ್ಥಳಾಂತರಿಸುವುದು ಸರಿಯಲ್ಲ. ಇದಕ್ಕೆ ತಮ್ಮ ವಿರೋಧವಿದೆ ಎಂದು ಹೇಳಿದರು.

ಸದಸ್ಯರಾದ ಆರ್ಬಿಯಾ ಧಾರವಾಡಕರ್‌, ಸಾಜೀದ್‌ ಶೇಖ್‌, ವಿಕ್ರಮ ಪುರೋಹಿತ, ನಿರಂಜನ ಅಷ್ಟೇಕರ್‌, ಡಾ. ಮದನ್‌ ಡೊಂಗರೆ, ಅಲೆದ್ದೀನ್‌ ಕಿಲ್ಲೇದಾರ, ರಿಜ್ವಾನ್‌ ಬೇಪಾರಿ, ಸಿಇಒ ಬರ್ಚೆಸ್ವಾ, ನಾಮನಿರ್ದೇಶಿತ ಸದಸ್ಯರು ಮತ್ತು ಅಧಿಕಾರಿಗಳಾದ ಲೇ. ಕರ್ನಲ್‌ ನಿತಿನ್‌ಕುಮಾರ, ಲೇ. ಕರ್ನಲ್‌ ಸಿ.ಬಿ. ಥಾಮಸ್‌, ಕರ್ನಲ್‌ ಪದ್ಮಿನಿ ಎಚ್‌. ಶ್ರೀನಿವಾಸ್‌ ಹಾಗೂ ಇತರರು ಸಭೆಯಲ್ಲಿಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ