ಆ್ಯಪ್ನಗರ

ಹಲಗಾ ಬೈಪಾಸ್‌ ರಸ್ತೆಗಾಗಿ ಕೃಷಿ ಭೂಮಿ ಸ್ವಾಧೀನಕ್ಕೆ ವಿರೋಧ

ಬೆಳಗಾವಿ: ಹಲಗಾ ಬೈಪಾಸ್‌ ರಸ್ತೆ ನಿರ್ಮಾಣಕ್ಕೆ ಕೃಷಿ ಭೂಮಿ ಬಳಸಬಾರದು...

Vijaya Karnataka 30 Jul 2019, 5:00 am
Vijaya Karnataka Web BLG-2907-2-52-29KODIHALLI
ಬೆಳಗಾವಿ: ಹಲಗಾ ಬೈಪಾಸ್‌ ರಸ್ತೆ ನಿರ್ಮಾಣಕ್ಕೆ ಕೃಷಿ ಭೂಮಿ ಬಳಸಬಾರದು. ಈ ನಿಟ್ಟಿನಲ್ಲಿ ನೂತನ ಬಿಜೆಪಿ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಒತ್ತಾಯಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫಲವತ್ತಾದ ಭೂಮಿ ಕ್ರಮ ಕಳೆದುಕೊಳ್ಳುತ್ತಿರುವುದು ಭವಿಷ್ಯದ ದೃಷ್ಟಿಯಿಂದ ಆತಂಕಕಾರಿ ಬೆಳವಣಿಗೆ. ಭೂಸ್ವಾಧೀನ ನಡೆಸಿದರೆ ಕೃಷಿ ಭೂಮಿಯನ್ನೇ ನಂಬಿರುವ ರೈತರು ಬೀದಿ ಪಾಲಾಗುತ್ತಾರೆ. ರೈತರ ಸಾಲಮನ್ನಾ ಮತ್ತು ಭೂಸ್ವಾಧೀನ ವಿಷಯದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ರೈತರಿಗೆ ಅನ್ಯಾಯ ಮಾಡಿದ್ದಾರೆ. ರೈತ ಪರ ಎಂದು ಹೇಳಿಕೊಳ್ಳುವ ಸಿಎಂ ಬಿ.ಎಸ್‌.ಯಡಿಯೂರಪ್ಪ ಭೂಸ್ವಾಧೀನ ಕಾಯಿದೆಗೆ ತಿದ್ದುಪಡಿ ತಂದು ರೈತರ ಹಿತ ಕಾಪಾಡಬೇಕು. ಕಬ್ಬಿನ ವಿಷಯದಲ್ಲಿ ಎಸ್‌ಎಪಿ ಕಾಯಿದೆಗೂ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡರಾದ ಭೀಮಶಿ ಗಡಾಡಿ, ಗಣಪತಿ ಈಳಿಗೇರ, ರವಿ ಸಿದ್ದಮ್ಮನವರ, ಸತ್ಯಪ್ಪ ಮಲ್ಲಾಪುರೆ, ಭರಮಪ್ಪ ಖೇಮಲಾಪುರೆ, ಮಂಜು ಪೂಜೇರಿ, ಎಸ್‌.ಎಂ.ಬಿಳ್ಳೂರ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ