ಆ್ಯಪ್ನಗರ

ಉಕ ಬಂದ್‌ಗೆ ಕನ್ನಡ ಪರ ಸಂಘಟನೆಗಳ ವಿರೋಧ

ಅಥಣಿ: ''ಉತ್ತರ ಕರ್ನಾಟಕ ಪ್ರತ್ಯೇಕತೆ ಹೋರಾಟದ ಬಂದ್‌ ಕರೆ ರಾಜಕೀಯ ಪ್ರೇರಿತವಾಗಿದ್ದು ಇದಕ್ಕೆ ...

Vijaya Karnataka 3 Aug 2018, 5:00 am
ಅಥಣಿ: ''ಉತ್ತರ ಕರ್ನಾಟಕ ಪ್ರತ್ಯೇಕತೆ ಹೋರಾಟದ ಬಂದ್‌ ಕರೆ ರಾಜಕೀಯ ಪ್ರೇರಿತವಾಗಿದ್ದು ಇದಕ್ಕೆ ನಮ್ಮ ಬೆಂಬಲವಿಲ್ಲ. ಹಾಗಂತ ನಾವು ಸುಮ್ಮನೆ ಕೂಡುವುದಿಲ್ಲ. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳು ವಿಶೇಷ ಅನುದಾನ ನೀಡುವಂತೆ ನಿರಂತರ ಹೋರಾಟ ನಡೆಸುತ್ತೇವೆ'' ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷ ಅಣ್ಣಾಸಾಬ ತೆಲಸಂಗ ಹೇಳಿದರು.
Vijaya Karnataka Web BEL-02 ATHANI-01


ಅವರು ಉತ್ತರ ಕರ್ನಾಟಕ ಬಂದ್‌ ಕರೆ ವಿರೋಧಿಸಿ ಪಟ್ಟಣದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದರು. ಅಖಂಡ ಕರ್ನಾಟಕದ ರಚನೆಯಲ್ಲಿ ಅನೇಕ ಮಹನೀಯರ ಶ್ರಮವಿದೆ. ಭಾರತ ದೇಶದಲ್ಲಿಯೇ ಸಮೃದ್ಧ ರಾಜ್ಯವಾಗಿರುವ ನಮ್ಮ ಶ್ರೇಷ್ಠ ಕನ್ನಡ ನಾಡು ಇಬ್ಭಾಗ ಮಾಡುವುದು ಬೇಡ. ಮೊದಲು ರಾಜಕಾರಣಿಗಳು ಪ್ರತ್ಯೇಕತೆಯ ಕೂಗು ಬಿಡಿ, ಉಕ ವಿಶೇಷ ಅನುದಾನ ನೀಡಿ ಅಭಿವೃದ್ಧಿ ಮಾಡಿ ಎಂದು ಒತ್ತಾಯಿಸಿದರು.

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ತಾಲೂಕಾಧ್ಯಕ್ಷ ಮಹಾದೇವ ಮಡಿವಾಳ ಮಾತನಾಡಿ, ಅಖಂಡ ಕರ್ನಾಟಕವೇ ಹಸಿರಾಗಬೇಕು. ನಮ್ಮ ರಾಜಕಾರಣಿಗಳು ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಹೋರಾಟ ನಡೆಸಬೇಕು. ಉತ್ತರ ಕರ್ನಾಟಕದ ಪ್ರಮುಖ ನೀರಾವರಿ ಯೋಜನೆಗಳು, ಕನ್ನಡ ಶಾಲೆಗಳ ಅಭಿವೃದ್ಧಿಗಾಗಿ, ಕೈಗಾರಿಕೆಗಳ ಸ್ಥಾಪನೆಗಾಗಿ ಮೊದಲು ಪ್ರತ್ಯೇಕ ಬಜೆಟ್‌ ಮಾಡಲು ಧ್ವನಿ ಎತ್ತಬೇಕು ಕಿವಿಮಾತು ಹೇಳಿದರು.

ಈ ವೇಳೆ ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಗಜಾನನ ಕಾಂಬಳೆ, ಕರ್ನಾಟಕ ವಿಜಯ ಸೇನೆಯ ಅಧ್ಯಕ್ಷ ಚಿದಾನಂದ ಶೇಗುಣಸಿ, ಕರವೇ ಕಾರ್ಯದರ್ಶಿ ಜಗನ್ನಾಥ ಬಾಮಣೆ, ರಾಜು ತಂಗಡಿ, ಸಿದ್ದು ಹಂಡಗಿ, ಪುಂಡಲೀಕ ಸೂರ್ಯವಂಶಿ, ಶಂಕರ ಮದಗುಮ್ಮ ಇನ್ನಿತರರು ಉಪಸ್ಥಿತರಿದ್ದರು.

ಪ್ರತ್ಯೇಕ ರಾಜ್ಯಕ್ಕೆ ಒತ್ತಾಯಿಸಿ ನೀಡಿದ್ದ ಬಂದ್‌ ಕರೆಗೆ ಅಥಣಿ ಪಟ್ಟಣದಲ್ಲಿ ಯಾವುದೇ ಪತ್ರಿಕ್ರಿಯೆ ವ್ಯಕ್ತವಾಗಲಿಲ್ಲ. ಎಂದಿನಂತೆ ಅಂಗಡಿ, ಮುಂಗಟ್ಟುಗಳು, ಸಾರಿಗೆ ಸಂಚಾರ, ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ