ಆ್ಯಪ್ನಗರ

ಎರಡು ತಿಂಗಳಲ್ಲಿ ಠೇವಣಿ ಮರುಪಾವತಿಗೆ ಆದೇಶ

ತೀರ್ಪು ಪ್ರಕಟಿಸಿದ ಎರಡು ತಿಂಗಳೊಳಗೆ ಬಡ್ಡಿ ಸಹಿತ ಠೇವಣಿ ಮರುಪಾವತಿಸುವಂತೆ ಜಿಲ್ಲಾಗ್ರಾಹಕರ ನ್ಯಾಯಾಲಯ ಇಲ್ಲಿನ ಆಂಜನೇಯ ನಗರದಲ್ಲಿಶಾಖೆ ಹೊಂದಿರುವ ಚಿಕ್ಕೋಡಿಯ ಬಸವೇಶ್ವರ ...

Vijaya Karnataka 24 Oct 2019, 5:00 am
ಬೆಳಗಾವಿ: ತೀರ್ಪು ಪ್ರಕಟಿಸಿದ ಎರಡು ತಿಂಗಳೊಳಗೆ ಬಡ್ಡಿ ಸಹಿತ ಠೇವಣಿ ಮರುಪಾವತಿಸುವಂತೆ ಜಿಲ್ಲಾಗ್ರಾಹಕರ ನ್ಯಾಯಾಲಯ ಇಲ್ಲಿನ ಆಂಜನೇಯ ನಗರದಲ್ಲಿಶಾಖೆ ಹೊಂದಿರುವ ಚಿಕ್ಕೋಡಿಯ ಬಸವೇಶ್ವರ ಮಲ್ಟಿಪರ್ಪಸ್‌ ಸೌಹಾರ್ದ ಸಹಕಾರಿ ಸಂಸ್ಥೆ ಆಡಳಿತ ಮಂಡಳಿಗೆ ನಿರ್ದೇಶನ ನೀಡಿದೆ.
Vijaya Karnataka Web order for repayment of deposit within two months
ಎರಡು ತಿಂಗಳಲ್ಲಿ ಠೇವಣಿ ಮರುಪಾವತಿಗೆ ಆದೇಶ


ಹಣಕಾಸು ಸಂಸ್ಥೆಯ ಅಧ್ಯಕ್ಷ ರಾಜನಗೌಡ ರಾವಸಾಹೇಬ ಪಾಟೀಲ, ಉಪಾಧ್ಯಕ್ಷ ಶಶಿಕಾಂತ ಅಣ್ಣಪ್ಪ ಕೋರೆ ಮತ್ತು ನಿರ್ದೇಶಕ ಸಿದ್ಧಲಿಂಗಪ್ಪ ಗುರುಲಿಂಗಪ್ಪ ಮನ್ನೋಳಿ ಸೇರಿದಂತೆ ಆಡಳಿತ ಮಂಡಳಿಯ 27 ಸದಸ್ಯರ ವಿರುದ್ಧ ರಾಮತೀರ್ಥ ನಗರದ ನಿವಾಸಿಗಳಾದ ಗಂಗಪ್ಪ ಬಸವಂತಪಪ್ಪ ಹಾರುಗೊಪ್ಪ ಹಾಗೂ ಕಾಶವ್ವ ಗಂಗಪ್ಪ ಹಾರುಗೊಪ್ಪ ಜು.8ರಂದು ಜಿಲ್ಲಾಗ್ರಾಹಕರ ನ್ಯಾಯಾಲಯದಲ್ಲಿಠೇವಣಿ ವಂಚನ ಪ್ರಕರಣ ದಾಖಲಿಸಿದ್ದರು. 2017ರಲ್ಲಿತಲಾ 2.5 ಲಕ್ಷ ರೂ.ಒಂದು ವರ್ಷದ ಅವಧಿಗೆ ಠೇವಣಿ ಇಟ್ಟಿದ್ದ ದೂರುದಾರರಿಗೆ ಅವಧಿ ಮುಗಿದರೂ ಸೊಸೈಟಿ ಆಡಳಿತ ಮಂಡಳಿ ಠೇವಣಿ ಮರುಪಾವತಿಸಿರಲಿಲ್ಲ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಚ್‌.ಡಿ.ಏಕತಾ ಅ.19 ರಂದು ತೀರ್ಪು ಪ್ರಕಟಿಸಿ ನ್ಯಾಯಲಾಯದ ಖರ್ಚು ಆರು ಸಾವಿರ ರೂ. ಒಳಗೊಂಡಂತೆ ಠೇವಣಿ ಹಣ ಮರುಪಾವತಿಸಲು ಆದೇಶಿಸಿದ್ದಾರೆ ಎಂದು ಅರ್ಜಿದಾರರ ಪರ ವಕೀಲ ಎನ್‌.ಆರ್‌.ಲಾತೂರ ಮಾಹಿತಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ