ಆ್ಯಪ್ನಗರ

ದೋಸ್ತಿ ಸರಕಾರ ಪತನಕ್ಕೆ ಜಾರಕಿಹೊಳಿ ಕುಟುಂಬ ಕಾರಣ ಅಲ್ವೆ ಅಲ್ಲ ಎಂದ ಸತೀಶ್

ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರಕಾರ ಪತನಕ್ಕೆ ಜಾರಕಿಹೊಳಿ ಕುಟುಂಬ ಕಾರಣ ಅಲ್ವೆ ಅಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

Vijaya Karnataka Web 26 Jul 2019, 12:43 pm
ಬೆಳಗಾವಿ: ಮೈತ್ರಿ ಸರಕಾರ ಬೀಳಲು ಜಾರಕಿಹೊಳಿ ಕುಟುಂಬ ಅಂತಿದ್ದಾರೆ. ಸರಕಾರ ಬೀಳಲು ಜಾರಕಿಹೊಳಿ ಕುಟುಂಬ ಕಾರಣ ಅಲ್ಲವೇ ಅಲ್ಲ, ಒಂದು ವಸ್ತುವಿನ ಕಾರಣದಿಂದ ಸರಕಾರಕ್ಕೆ ಇಂತಹ ಪರಿಸ್ಥಿತಿ ಬಂದಿತು. ಅದನ್ನ ಸಮಯ ಬಂದಾಗ ಹೇಳುತ್ತೆನೆ ಹೇಳಲೆಬೇಕು. ಇಲ್ಲದಿದ್ರೆ ಇದು ಇತಿಹಾಸದಲ್ಲಿ ಹಾಗೆ ಉಳಿಯುತ್ತೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
Vijaya Karnataka Web SATISH


ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ರಚನೆಗೆ 111 ಸೀಟುಗಳು ಬೇಕು. ತಾಂತ್ರಿಕವಾಗಿ ಅವರಿಗೆ ಸಂಖ್ಯಾಬಲ ಇಲ್ಲ. ಸಂಖ್ಯಾಬಲ ಇಲ್ಲದಕ್ಕೆ ಇಷ್ಟೆಲ್ಲ ಡ್ರಾಮಾ ನಡೆದಿದೆ. ಯಾವ ಆದಾರದ ಮೇಲೆ‌ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ ಕಾದುನೋಡಬೇಕಿದೆ‌ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಆಪರೇಶನ್ ಕಮಲದ ಬಗ್ಗೆ ಈ ಮೊದಲೆ ಪಕ್ಷದ ನಾಯಕರಿಗೆ ಎಚ್ಚರಿಕೆ ನೀಡಿದ್ದೆ.‌ ಈ ಕುರಿತು ಹೈಕಮಾಂಡ್‌ ಗಂಭೀರವಾಗಿ ಪರಿಗಣಿಸಲಿಲ್ಲ. ಪರಿಗಣಿಸಿದ್ದರೆ ಸರಕಾರ ಪತನವಾಗುತ್ತಿರಲಿಲ್ಲ. ಕಾಂಗ್ರೆಸ್ ರಿವರ್ಸ್ ಆಪರೇಷನ್ ಮಾಡಿದ್ದರೆ ಸಕ್ಸಸ್ ಆಗುತ್ತಿತ್ತು‌. ನಾವು ಸಿರಿಯಸ್ ಆಪರೇಶನ್ ಮಾಡಲಿಲ್ಲ. ಇನ್ನೂ ಒಂದು ವರ್ಷದ ವರೆಗೆ ರಾಜ್ಯದಲ್ಲಿ ಮಧ್ಯಂತರ ಚುಣಾವಣೆ ಬರುವುದಿಲ್ಲ‌ ಎಂದರು.

ಬಿಜೆಪಿಯವರಿಗೆ ಸಂಖ್ಯಾ ಬಲ ಇಲ್ಲ. ಯಾವ ಆಧಾರದ‌ ಮೇಲೆ ಬಿ.ಎಸ್‌.ಯಡಿಯೂರಪ್ಪ ಸಿಎಂ ಆಗಿ ಪ್ರಮಾಣ ವಚನ‌ ಸ್ವೀಕರಿಸುತ್ತಾರೆ ಎನ್ನುವುದನ್ನು ಕಾದು ನೋಡಣ ಎಂದ ಸತೀಶ್ ಜಾರಕಿಹೊಳಿ, ಅತೃಪ್ತ ಶಾಸಕರನ್ನು ಸ್ಪೀಕರ್ ರಮೇಶಕುಮಾರ ಅನರ್ಹ ಮಾಡಿರುವುದನ್ನು ಸ್ವಾಗತ ಮಾಡುತ್ತೇನೆ. ಅತೃಪ್ತ ಶಾಸಕರನ್ನು ಮುಂಚೆಯೇ ಅನರ್ಹ ಮಾಡಿದ್ದರೆ ಸರಕಾರ ಉಳಿಯುತ್ತಿತ್ತು. ಇನ್ನುಳಿದ 13 ಜನ ಅತೃಪ್ತ ಶಾಸಕರನ್ನು ಅನರ್ಹ ಮಾಡುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅವರೆಲ್ಲ ಪಕ್ಷ ವಿರೋದಿ ಚಟುವಟಿಗಳನ್ನ ಮಾಡಿದ್ದಾರೆ. ಅತೃಪ್ತರನ್ನ ಸೇರಿಸಿಕ್ಕೊಳ್ಳುವುದು ಹೈಕಮಾಂಡ್‌ಗೆ ಬಿಟ್ಟಿದ್ದು. ಸ್ಪೀಕರ್ ರಮೇಶ ಕುಮಾರ ನಿಷ್ಪಕ್ಷಪಾತವಾಗಿ ಕೆಲಸ ಮಾಡಿದ್ದಾರೆ. ಬಿಜೆಪಿ ಅವರಿಗೆ ಸ್ಪೀಕರ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಸ್ಪೀಕರ್ ರಮೇಶ್ ಕುಮಾರ ನಮ್ಮ ಪಕ್ಷದಲ್ಲಿದರೂ ಸರಿಯಾದ ಕ್ರಮ ತೆಗೆದುಕ್ಕೊಂಡಿದ್ದಾರೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ