ಆ್ಯಪ್ನಗರ

ನಮ್ಮದು ‘ಎಲ್‌ಓಸಿ’ ಸರಕಾರ

ಬೆಳಗಾವಿ: ''ಸಮ್ಮಿಶ್ರ ಸರಕಾರ ಎಂದರೆ ಎಲ್‌ಓಸಿ (ಲೈನ್‌ ಆಫ್‌ ಕಂಟ್ರೋಲ್‌) ಇದ್ದ ...

Vijaya Karnataka 27 Jan 2019, 5:00 am
ಬೆಳಗಾವಿ: ''ಸಮ್ಮಿಶ್ರ ಸರಕಾರ ಎಂದರೆ ಎಲ್‌ಓಸಿ (ಲೈನ್‌ ಆಫ್‌ ಕಂಟ್ರೋಲ್‌) ಇದ್ದ ಹಾಗೆ. ಈ ಸರಕಾರದಲ್ಲಿ ನಾವೆಲ್ಲ ಕಾಶ್ಮೀರದ ಎಲ್‌ಓಸಿಯಲ್ಲಿ ಇದ್ದ ಹಾಗೆ ಇದ್ದೇವೆ. ಶತ್ರುಗಳ ಬಗ್ಗೆ ಸದಾ ಎಚ್ಚರಿಕೆಯಲ್ಲಿ ಇರಬೇಕು''.
Vijaya Karnataka Web ours is the loc government
ನಮ್ಮದು ‘ಎಲ್‌ಓಸಿ’ ಸರಕಾರ


ಕಾಂಗ್ರೆಸ್‌, ಜೆಡಿಎಸ್‌ ಮೃತ್ರಿ ಸರಕಾರವನ್ನು ಹೀಗೆಂದು ವ್ಯಾಖ್ಯಾನಿಸಿದ್ದು, ಅರಣ್ಯ ಸಚಿವ ಸತೀಶ ಜಾರಕಿಹೊಳಿ.

ಶನಿವಾರ ನಗರದಲ್ಲಿ ಗಣರಾಜ್ಯೋತ್ಸವ ಧ್ವಜಾರೋಹಣ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಆಪರೇಷನ್‌ ಕಮಲ ಕುರಿತ ಪ್ರಶ್ನೆಗೆ ಅವರು ಉತ್ತರಿಸಿದರು, ''ಒಂದು ಸಾರಿ ಅವರಿಂದ (ಬಿಜೆಪಿ) ದಾಳಿಯಾಗುತ್ತದೆ. ಇನ್ನೊಮ್ಮೆ ನಮ್ಮಿಂದ ದಾಳಿಯಾಗುತ್ತದೆ. ಈ ಸಾರಿ ನಾವು ಗೆದ್ದಿದ್ದೇವೆ. ಕಳೆದ ಏಳು ತಿಂಗಳಿನಿಂದ ಆಪರೇಷನ್‌ ಕಮಲದ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಸಮ್ಮಿಶ್ರ ಸರಕಾರ ಭದ್ರವಾಗಿದೆ'' ಎಂದರು.

''ಈಗಲ್ಟನ್‌ ರೆಸಾರ್ಟ್‌ನಲ್ಲಿ ಶಾಸಕ ಆನಂದ ಸಿಂಗ್‌ ಹಾಗೂ ಗಣೇಶ ಪರಸ್ಪರ ಗಲಾಟೆ ಮಾಡಿದ ವೇಳೆ ನಾನು ಅಲ್ಲಿ ಇರಲಿಲ್ಲ. ಹಿಂದಿನ ದಿನವೇ ನಮ್ಮನ್ನು ಕಳುಹಿಸಲಾಗಿತ್ತು. ಅವರಿಬ್ಬರ ಮಧ್ಯೆ ಯಾವ ಕಾರಣಕ್ಕೆ ಜಗಳವಾಗಿದೆ ಎಂದು ಇನ್ನೂ ತಿಳಿದು ಬಂದಿಲ್ಲ. ಪೊಲೀಸರು ತನಿಖೆ ನಡೆಸಿದ್ದಾರೆ. ರಮೇಶ ಜಾರಕಿಹೊಳಿ ಅವರು ಇನ್ನೂ ಸಿಕ್ಕಿಲ್ಲ. ಅವರನ್ನು ಭೇಟಿ ಮಾಡಿ ಎಂದು ವರಿಷ್ಠರು ಹೇಳಿದ್ದಾರೆ. ಸಮಯ ನೋಡಿ ಮಾತನಾಡುತ್ತೇನೆ'' ಎಂದರು.

ಹುಲಿ ಸಫಾರಿಗೆ 10 ಕೋಟಿ ರೂ. :
ಭೂತರಾಮನಟ್ಟಿ ಪ್ರಾಣಿ ಸಂಗ್ರಹಾಲಯದಲ್ಲಿ ಸಫಾರಿ ಆರಂಭಿಸಲು ಈಗಾಗಲೇ ಎರಡು ಹುಲಿಗಳನ್ನು ಕಾಯ್ದಿರಿಸಲಾಗಿದೆ. ಆರು ತಿಂಗಳೊಳಗೆ ಹುಲಿಗಳನ್ನು ಇಲ್ಲಿಗೆ ತರಲಾಗುವುದು. ಇದಕ್ಕಾಗಿ 10 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಮೈಸೂರು ಪ್ರಾಣಿ ಸಂಗ್ರಹಾಲಯದಲ್ಲಿರುವ ಹುಲಿಗಳನ್ನು ಇಲ್ಲಿಗೆ ತರುತ್ತಿಲ್ಲ ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

ಭೀಮಗಡ ಅಭಯಾರಣ್ಯದೊಳಗಿನ ಗ್ರಾಮಗಳ ಕುಟುಂಬಗಳ ಸ್ಥಳಾಂತರ ವಿಚಾರ ಸದ್ಯಕ್ಕೆ ಇಲ್ಲ. ಅರಣ್ಯ ಸಮಿತಿಯ ಸಭೆಯ ಬಳಿಕ ನಿರ್ಣಯ ತೆಗೆದುಕೊಳ್ಳಲಾಗುವುದು. ಕಸ್ತೂರಿ ರಂಗನ್‌ ವರದಿಯನ್ನೂ ಕೆಲ ವಿನಾಯಿತಿಗಳೊಂದಿಗೆ ಅನುಷ್ಠಾನ ಮಾಡಲಾಗುವುದು ಎಂದರು.

ಕತ್ತರಿಸಿದ ಮರಗಳ ಸಂಖ್ಯೆ ಗೊತ್ತಿಲ್ಲ! :
ಬೆಳಗಾವಿ- ಖಾನಾಪುರ ರಸ್ತೆ ವಿಸ್ತರಣೆ ಕಾಮಗಾರಿಯಲ್ಲಿ ಎಷ್ಟು ಮರಗಳನ್ನು ಕಡಿಯಲಾಗುತ್ತಿದೆ. ಅದಕ್ಕೆ ಪರ್ಯಾಯವಾಗಿ ಮರ ಬೆಳೆಸಲು ಎಲ್ಲಿ ಜಾಗ ನೋಡಲಾಗಿದೆ ಎಂದು ಸುದ್ದಿಗಾರರ ಪ್ರಶ್ನಿಸಿದಾಗ, ತಮ್ಮ ಬಳಿ ಮಾಹಿತಿಯೇ ಇಲ್ಲ ಎಂದು ಅರಣ್ಯ ಸಚಿವರು ಹೇಳಿದರು.

ರಸ್ತೆ ವಿಸ್ತರಣೆ ಪಡೆದ ಗುತ್ತಿಗೆ ಕಂಪೆನಿ 28 ಸಾವಿರ ಮರಗಳನ್ನು ಕಡಿಯಲು ಗುರುತಿಸಿತ್ತು. ಅದನ್ನು 16 ಸಾವಿರಕ್ಕೆ ಇಳಿಸಿದ್ದೇವೆ ಎಂದು ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿ ತಿಳಿಸಿದರು.

ಕತ್ತರಿಸಿದ ಮರಗಳಿಗೆ ಪ್ರತಿಯಾಗಿ ಎಲ್ಲಿ ಗಿಡಗಳನ್ನು ನಡೆಡಲಾಗುತ್ತಿದೆ? ಎನ್ನುವ ಪ್ರಶ್ನೆಗೆ, ಇನ್ನೂ ಜಾಗ ಗುರುತಿಸಿಲ್ಲ ಎಂದು ಸಚಿವರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ