ಆ್ಯಪ್ನಗರ

ಸರಕಾರದ ಶವಯಾತ್ರೆ ನಡೆಸಿ ಆಕ್ರೋಶ

ಬಾವನ ಸೌಂದತ್ತಿ (ಬೆಳಗಾವಿ) ಕೃಷ್ಣಾ ನದಿ ಬತ್ತಿಹೋಗಿ ಜನ ದಾರುಣ ಸ್ಥಿತಿ ಅನುಭವಿಸುತ್ತಿದ್ದರೂ ರಾಜ್ಯ ಸರಕಾರ ಯಾವ ಕ್ರಮಕ್ಕೂ ಮುಂದಾಗದೆ ಮೌನ ವಹಿಸಿದೆ ಎಂದು ...

Vijaya Karnataka 4 May 2019, 5:00 am
ಬಾವನ ಸೌಂದತ್ತಿ (ಬೆಳಗಾವಿ) : ಕೃಷ್ಣಾ ನದಿ ಬತ್ತಿಹೋಗಿ ಜನ ದಾರುಣ ಸ್ಥಿತಿ ಅನುಭವಿಸುತ್ತಿದ್ದರೂ ರಾಜ್ಯ ಸರಕಾರ ಯಾವ ಕ್ರಮಕ್ಕೂ ಮುಂದಾಗದೆ ಮೌನ ವಹಿಸಿದೆ ಎಂದು ಆರೋಪಿಸಿರುವ ಇಲ್ಲಿನ ಗ್ರಾಮಸ್ಥರು ಶುಕ್ರವಾರ ಸರಕಾರದ ಶವಯಾತ್ರೆ ನಡೆಸಿ ಆಕ್ರೋಶ ಹೊರಹಾಕಿದರು.
Vijaya Karnataka Web BEL-03 BSDT 01 (2)


ಗ್ರಾಮದಿಂದ ಬೊಬ್ಬೆ ಹೊಡೆಯುತ್ತಾ, ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ಕೃಷ್ಣಾ ನದಿಗೆ ಶವಯಾತ್ರೆ ನಡೆಸಿದ ಜನ, ಬತ್ತಿಹೋದ ನದಿಯ ಮಧ್ಯಭಾಗದಲ್ಲಿ ಅದನ್ನು ಸುಟ್ಟು ಪ್ರತಿಭಟನೆ ವ್ಯಕ್ತಪಡಿಸಿದರು.

''ನೀರಿಲ್ಲದೆ ಜನ ಪರದಾಡುವ ಸ್ಥಿತಿ ಎದುರಾದರೂ ಸರಕಾರ ಹಾಗೂ ಈ ಭಾಗದ ಜನಪ್ರತಿನಿಧಿಗಳು ಯಾರೂ ಕ್ಯಾರೇ ಎನ್ನುತ್ತಿಲ್ಲ. ಸಿಎಂ ಎಚ್‌.ಡಿ. ಕುಮಾರಸ್ವಾಮಿ ಕೇವಲ ದಕ್ಷಿಣ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾರೆ'', ಎಂದು ಕಿಡಿಕಾರಿದ ಪ್ರತಿಭಟನಾಕಾರರು, ''ತಕ್ಷಣ ಸರಕಾರ ಎಚ್ಚೆತ್ತು ಮಹಾರಾಷ್ಟ್ರದಿಂದ ಕೃಷ್ಣೆಗೆ ನೀರು ಹರಿಸುವ ಕೆಲಸ ಮಾಡದಿದ್ದರೆ ಈ ಭಾಗದ ಜನರ ಸಹನೆಯ ಕಟ್ಟೆಯೊಡೆದೀತು'', ಎಂದು ಎಚ್ಚರಿಕೆ ನೀಡಿದರು.

ಕೃಷ್ಣಾ ನದಿಗೆ ತಕ್ಷ ಣ ನೀರು ಬಿಡುವ ವ್ಯವಸ್ಥೆ ಮಾಡದಿದ್ದರೆ ಎಸಿ ಕಚೇರಿ ಎದುರು ಆಮರಣ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು.
- ಅನಿಲ್‌ ಹಂಜಿ, ಗ್ರಾಮಸ್ಥ

ನೀರಿಗಾಗಿ ಜನರ ಗೋಳು ಹೆಚ್ಚುತ್ತಿದೆ. ಸರಕಾರ ಇದರ ಬಗ್ಗೆ ಗಮನ ಹರಿಸದಿದ್ದರಿಂದ ಶವಯಾತ್ರೆ ನಡೆಸಿದ್ದೇವೆ. ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಮುಂದಾಗುವ ಅನಾಹುತಕ್ಕೆ ಸರಕಾರವೇ ನೇರ ಹೊಣೆ.
- ಚಿದಾನಂದ ಮಂಗಸೂಳೆ, ಗ್ರಾಮಸ್ಥ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ