ಆ್ಯಪ್ನಗರ

ನಾಳೆಯಿಂದ ಪಾಂಡುರಂಗ ಸಪ್ತಾಹ

ಚಿಕ್ಕೋಡಿ : ತಾಲೂಕಿನ ಹಿರೇಕೋಡಿ ಗ್ರಾಮದ ಹತ್ತಿಮರಡಿಯಲ್ಲಿರುವ ವಿಠ್ಠಲ-ರುಕ್ಮಿಣಿ ಮಂದಿರದಲ್ಲಿ ಏ 29 ರಿಂದ ಮೇ 1 ರವರೆಗೆ ಪಾಂಡುರಂಗ ಸಪ್ತಾಹ ಹಮ್ಮಿಕೊಳ್ಳಲಾಗಿದೆ...

Vijaya Karnataka 28 Apr 2019, 5:00 am
ಚಿಕ್ಕೋಡಿ : ತಾಲೂಕಿನ ಹಿರೇಕೋಡಿ ಗ್ರಾಮದ ಹತ್ತಿಮರಡಿಯಲ್ಲಿರುವ ವಿಠ್ಠಲ-ರುಕ್ಮಿಣಿ ಮಂದಿರದಲ್ಲಿ ಏ. 29 ರಿಂದ ಮೇ 1 ರವರೆಗೆ ಪಾಂಡುರಂಗ ಸಪ್ತಾಹ ಹಮ್ಮಿಕೊಳ್ಳಲಾಗಿದೆ.
Vijaya Karnataka Web panduranga weak celebration from tomorrow
ನಾಳೆಯಿಂದ ಪಾಂಡುರಂಗ ಸಪ್ತಾಹ


ಪಂಢರಪುರದ ವಾಸ್ಕರ್‌ ಮಹಾರಾಜರ ಆಶೀರ್ವಾದದೊಂದಿಗೆ ಹರಿಭಕ್ತ ಪ್ರಹ್ಲಾದ ಪಾಂಡವ ಮಹಾರಾಜರ ನೇತೃತ್ವದಲ್ಲಿ ನಡೆಯಲಿರುವ ಸಪ್ತಾಹದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. 29 ರಂದು ಬೆಳಗ್ಗೆ ವೀಣಾ ಪೂಜೆ ಹಾಗೂ ಪಾರಾಯಣ ನಡೆಯಲಿದೆ.

30 ರಂದು ಸಂಜೆ 4 ರಿಂದ 7ರವರೆಗೆ ಗ್ರಾಮದಲ್ಲಿ ದಿಂಡಿ ಪ್ರದಕ್ಷಿಣೆ ಹಾಗೂ ರಾತ್ರಿ 8ಕ್ಕೆ ವಡಗೋಲದ ಸಂತೋಷ ವಾಳಕೆ ಅವರಿಂದ ಕೀರ್ತನೆ ನಡೆಯಲಿವೆ. ಮೇ 1 ರಂದು ಮಧ್ಯಾಹ್ನ ಮಹಾಪ್ರಸಾದದ ನಂತರ ಸಂಜೆ ಸಪ್ತಾಹ ಸಮಾರೋಪಗೊಳ್ಳಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ