ಆ್ಯಪ್ನಗರ

ಮನೆ ಹಾನಿ ಪರಿಹಾರಕ್ಕೆ ಗೋಕಾಕದಲ್ಲಿ ಪರದಾಟ

ಗೋಕಾಕ: ಪ್ರವಾಹದಲ್ಲಿಹಾನಿಯಾದ ಮನೆಗಳಿಗೆ ಪರಿಹಾರ ಘೋಷಣೆ ...

Vijaya Karnataka 20 Dec 2019, 5:00 am
ಗೋಕಾಕ: ಪ್ರವಾಹದಲ್ಲಿಹಾನಿಯಾದ ಮನೆಗಳಿಗೆ ಪರಿಹಾರ ಘೋಷಣೆ ಮಾಡಿದ ಬಳಿಕ ಉಪಚುನಾವವಣೆ ನಡೆದು ಶಾಸಕರ ಆಯ್ಕೆ ಮುಗಿದರೂ ಗೋಕಾಕ ತಾಲೂಕಿನಲ್ಲಿಇನ್ನೂ ಎಲ್ಲಫಲಾನುಭವಿಗಳಿಗೆ ಮೊದಲ ಕಂತಿನ ಪರಿಹಾರವೇ ಸಿಕ್ಕಿಲ್ಲ.
Vijaya Karnataka Web 18GOK2064719
ನಿರ್ಮಾಣ ಹಂತದಲ್ಲಿರುವ ನಿರಾಶ್ರಿತರ ಮನೆ.


ಪ್ರವಾಹದಲ್ಲಿಮನೆ ಕಳೆದುಕೊಂಡ ನೂರಕ್ಕೂ ಹೆಚ್ಚು ಸಂತ್ರಸ್ತರು ಇನ್ನೂ ಮೊದಲ ಕಂತಿನ ಪರಿಹಾರಕ್ಕಾಗಿಯೇ ಎದುರು ನೋಡುತ್ತಿದ್ದಾರೆ. ಇನ್ನೊಂದೆಡೆ ಮೊದಲ ಕಂತಿನ ಹಣ ಪಡೆದು ಮನೆ ನಿರ್ಮಾಣ ಆರಂಭಿಸಿದವರಿಗೂ ಎರಡನೇ ಕಂತಿನ ಹಣ ಕೊಡುವ ಕೆಲಸವೂ ಆರಂಭವಾಗಿಲ್ಲ. ಇದರಿಂದ ಸಂತ್ರಸ್ತರು ಅಧಿಕಾರಿಗಳ ವಿರುದ್ಧ ಮತ್ತೆ ಅಸಮಾಧಾನ ಹೊರಹಾಕಲು ಶುರು ಮಾಡಿದ್ದಾರೆ. ಗೆದ್ದರೂ ಪರಿಹಾರ ಕೊಟ್ಟಿಲ್ಲಎಂದು ಅಲ್ಲಲ್ಲಿನೂತನ ಶಾಸಕರಿಗೂ ಹಿಡಿ ಶಾಪ ಹಾಕುತ್ತಿದ್ದಾರೆ.

ಗೋಕಾಕ ನಗರದಲ್ಲಿಒಟ್ಟು 1538 ಮನೆಗಳು ಪ್ರವಾಹದಲ್ಲಿಹಾನಿಯಾಗಿವೆ. ಅದರಲ್ಲಿ841 'ಎ' ವರ್ಗದ (ಶೇ. 75ಕ್ಕಿಂತ ಹೆಚ್ಚು ಹಾನಿ) ಮನೆಗಳಿಗೆ ಮೊದಲ ಕಂತು 1.25 ಲಕ್ಷ ರೂ. ಮತ್ತು 'ಬಿ' ವರ್ಗದ (ಶೇ. 25ರಿಂದ ಶೇ. 75 ರಷ್ಟು ಹಾನಿ) 79 ಮನೆಗಳಿಗೆ ಒಂದು ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. 'ಸಿ' ವರ್ಗದ (ಶೇ. 15ರಿಂದ ಶೇ. 25 ರಷ್ಟು ಹಾನಿ) ಮನೆಗಳಿಗೆ 50 ಸಾವಿರ ರೂ. ಪೈಕಿ 25 ಸಾವಿರ ರೂ. ಮಾತ್ರ ಸಂತಸ್ತರ ಖಾತೆಗಳಿಗೆ ಜಮೆ ಮಾಡಲಾಗಿದೆ. ಇನ್ನೂ ನೂರಾರು ಮನೆ ಹಾನಿ ಪ್ರಕರಣಗಳಲ್ಲಿಪರಿಹಾರವೇ ವಿತರಣೆ ಆಗಿಲ್ಲ.

ಮೊದಲ ಕಂತಿನ ಪರಿಹಾರ ಪಡೆದವರ ಪೈಕಿ ಶೇ. 50 ರಷ್ಟು ಜನ ಮನೆ ನಿರ್ಮಾಣದ ಕಾರ್ಯಗಳಲ್ಲಿತೊಡಗಿದ್ದಾರೆ. ಇನ್ನುಳಿದ ಜನರು ಮನೆ ನಿರ್ಮಾಣ ಕಾರ್ಯದಿಂದ ಹಿಂದುಳಿದ್ದಾರೆ. ಈಗಾಗಲೇ ಕಟ್ಟುತ್ತಿರುವ ಮನೆಗಳ ಜಿಪಿಎಸ್‌ ಮಾಡದ ಅಧಿಕಾರಿಗಳು ಇನ್ನುಳಿದ ಅನುದಾನ ಬಿಡುಗಡೆ ಆಗುತ್ತದೆಯೋ - ಇಲ್ಲವೋ ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ. ಇದರಿಂದ ಸಂತ್ರಸ್ತರೂ ಗೊಂದಲಕ್ಕೆ ಸಿಲುಕಿದ್ದಾರೆ.

287 ಹೆಸರು ಡಿಲಿಟ್‌!
ಒಟ್ಟೂ ಫಲಾನುಭವಿಗಳ ಪೈಕಿ ಹೆಸರು, ದಾಖಲೆ ಹೊಂದಾಣಿಕೆಯಾಗದ 287 ಸಂತ್ರಸ್ತರ ಹೆಸರನ್ನು ಫಲಾನುಭವಿಗಳ ಪಟ್ಟಿಯಿಂದ ಡಿಲಿಟ್‌ ಮಾಡಲಾಗಿತ್ತು. ನಂತರ ಸರಿಪಡಿಸಿ ಅವುಗಳನ್ನು ಸೇರಿಸಲಾಗಿದೆ ಎಂದು ತಹಸೀಲ್ದಾರ್‌ ಪ್ರಕಾಶ ಹೊಳೆಪ್ಪಗೋಳ ಹೇಳುತ್ತಾರೆ. ಆ 287 ಸಂತ್ರಸ್ತರಿಗೆ ಇನ್ನೂ ಮೊದಲ ಕಂತಿನ ಹಣವೇ ಬಂದಿಲ್ಲ. ಅಲ್ಲದೆ, 53 ಪ್ರಕರಣಗಳನ್ನು ನಾಟ್‌ ಓಕೆ ಮಾಡಲಾಗಿದೆ. ಇದಕ್ಕೆ ಕಾರಣ ಗೊತ್ತಿಲ್ಲಎನ್ನುತ್ತಾರೆ ಅಧಿಕಾರಿಗಳು.

ಮನೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಒಂದು ಲಕ್ಷ ರೂ. ಬಿಡುಗಡೆ ಮಾಡಿದೆ. ಮನೆ ನಿರ್ಮಾಣದ ಮೊದಲ ಹಂತ ಜಿಪಿಎಸ್‌ ಮಾಡಿ ಒಂದು ತಿಂಗಳಾಯಿತು. ಇನ್ನೂ ಮುಂದಿನ ಕಂತಿನ ಹಣ ಬಂದಿಲ್ಲ. ಅದಕ್ಕೆ ಸಂಬಂಧಿಕರಲ್ಲಿಸಾಲ ಮಾಡಿ ಮನೆ ಕಟ್ಟುತ್ತಿದ್ದೇವೆ.
- ಮಲ್ಲಪ್ಪ ಕೆ.ಡಿ, ನೆರೆ ಸಂತ್ರಸ್ತ

ಹೆಸರು ತಪ್ಪಾದ ಸಂತ್ರಸ್ತರ ಹೆಸರನ್ನು ಫಲಾನುಭವಿಗಳ ಯಾದಿಯಿಂದ ಡಿಲೀಟ್‌ ಮಾಡಿ ಮರಳಿ ಸರಿ ಮಾಡಿ ದಾಖಲಿಸಲಾಗಿದೆ. ನಾಟ್‌ಓಕೆ ಯಾದ ಫಲಾನುಭವಿಗಳ ಯಾದಿಯನ್ನು ಸರಕಾರಕ್ಕೆ ಕಳುಹಿಸಲಾಗಿದೆ. ಶೀಘ್ರದಲ್ಲಿಯೇ ಸಂತ್ರಸ್ತರ ಖಾತೆಗಳಿಗೆ ಪರಿಹಾರ ಧನ ಜಮೆ ಆಗಲಿದೆ. ನಿರ್ಮಾಣವಾಗುತ್ತಿರುವ ಮನೆಗಳನ್ನು ಹಂತ ಹಂತವಾಗಿ ಜಿಪಿಎಸ್‌ ಮಾಡಲಾಗುವುದು.
-ಪ್ರಕಾಶ ಹೊಳೆಪ್ಪಗೋಳ, ಗೋಕಾಕ ತಹಸೀಲ್ದಾರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ