ಆ್ಯಪ್ನಗರ

ವಿದ್ಯಾರ್ಥಿಗಳಿಗೆ ಥಳಿತ: ಶಾಲೆಗೆ ಪಾಲಕರ ಮುತ್ತಿಗೆ

ಗೋಕಾಕ: ವಿದ್ಯಾರ್ಥಿಗಳಿಗೆ ಅಮಾನವೀಯವಾಗಿ ಥಳಿಸಿದ ಪ್ರಕರಣಕ್ಕೆ ...

Vijaya Karnataka 31 Jan 2020, 5:00 am
ಗೋಕಾಕ: ವಿದ್ಯಾರ್ಥಿಗಳಿಗೆ ಅಮಾನವೀಯವಾಗಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಖಾಸಗಿ ಶರ್ಫಡ ಮಿಶನ್‌ ಶಾಲೆಗೆ ಪಾಲಕರು ಮುತ್ತಿಗೆ ಹಾಕಿ ಪ್ರತಿಭಟಿಸಿದರು.
Vijaya Karnataka Web parents siege to the school opposing assault on students
ವಿದ್ಯಾರ್ಥಿಗಳಿಗೆ ಥಳಿತ: ಶಾಲೆಗೆ ಪಾಲಕರ ಮುತ್ತಿಗೆ


ಗುರುವಾರ ಭಾಗ್ಯನಗರದಲ್ಲಿರುವ ಶರ್ಫಡ ಮಿಶನ್‌ ಶಾಲೆಗೆ ಮುತ್ತಿಗೆ ಹಾಕಿದ ಪಾಲಕರು, ಮುಖ್ಯೋಪಾಧ್ಯಾಯ ಸಂದೀಪ ಅನಿಗೋಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಶಿಕ್ಷಣಾಧಿಕಾರಿ, ಸಿಡಿಪಿಒ ಮತ್ತು ಪೊಲೀಸ್‌ ಇಲಾಖೆಯ ಸಿಬ್ಬಂದಿ ಪಾಲಕರ ಮನವೊಲಿಸಲು ಹರಸಾಹಸಪಟ್ಟರು. 'ನಾವೇ ಗಲಾಟೆ ಮಾಡಿದ್ದೇವೆ. ಅದಕ್ಕಾಗಿ ಶಿಕ್ಷಕರು ನಮಗೆ ಶಿಕ್ಷಿಸಿದ್ದಾರೆ' ಎಂದು ಮುಚ್ಚಳಿಕೆ ರೂಪದ ಪತ್ರ ಬರೆಯಿಸಿಕೊಂಡಿದ್ದರ ಬಗ್ಗೆ ವಿದ್ಯಾರ್ಥಿಗಳು, ಅಧಿಕಾರಿಗಳ ಮುಂದೆ ಹೇಳಿದಾಗ ಪಾಲಕರು ಮತ್ತಷ್ಟು ರೊಚ್ಚಿಗೆದ್ದು ಅಧಿಕಾರಿಗಳ ಸಮ್ಮುಖದಲ್ಲಿಮುಖ್ಯೋಪಾಧ್ಯಾಯರನ್ನು ತರಾಟೆಗೆ ತೆಗೆದುಕೊಂಡರು.

ಪೊಲೀಸರು, ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಮತ್ತು ಶಿಶು ಅಭಿವೃದ್ಧಿ ಅಧಿಕಾರಿ ಅನಿಲಕುಮಾರ ಕಾಂಬ್ಳೆ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿ ಮುಖ್ಯೋಪಾಧ್ಯಾಯ, ವಿದ್ಯಾರ್ಥಿ ಮತ್ತು ಪಾಲಕರ ಲಿಖಿತ ಹೇಳಿಕೆಗಳನ್ನು ಪಡೆದು ತಪ್ಪಿತಸ್ಥ ಮುಖ್ಯೋಪಾಧ್ಯಾಯರ ಮೇಲೆ ಕಾನೂನು ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ.

'' ಈ ಘಟನೆ ಬಗ್ಗೆ ಪರಿಶೀಲನೆ ನಡೆಸಿದ್ದು, ಮೇಲ್ನೋಟಕ್ಕೆ ಮಕ್ಕಳ ಮೇಲೆ ಹಲ್ಲೆನಡೆಸಿರುವ ಘಟನೆ ಕಂಡು ಬಂದಿದ್ದು ಜಿಲ್ಲಾಮಕ್ಕಳ ರಕ್ಷಣಾ ಘಟಕ ಹಾಗೂ ಉಪನಿರ್ದೇಶಕರ ಗಮನಕ್ಕೆ ತಂದು ಕಾನೂನು ಕ್ರಮ ಕೈಗೊಳ್ಳಲಾಗುವುದು'', ಎಂದು ಶಿಶು ಅಭಿವೃದ್ಧಿ ಅಧಿಕಾರಿ ಅನಿಲಕುಮಾರ ಕಾಂಬ್ಳೆ ಹೇಳಿದರು.

''ಪ್ರಕರಣ ಕುರಿತು ಪಾಲಕರ ಹಾಗೂ ವಿದ್ಯಾರ್ಥಿಗಳ ಹೇಳಿಕೆ ಪಡೆಯಲಾಗಿದ್ದು, ಶೀಘ್ರ ಕಾರಣ ಕೇಳಿ ನೋಟಿಸ್‌ ಅನ್ನು ಆಡಳಿತ ಮಂಡಳಿಗೆ ಜಾರಿ ಮಾಡಿ ಅವರು ನೀಡಿದ ವರದಿ ಆಧರಿಸಿ ಕಾನೂನು ಕ್ರಮ ಕೈಗೊಳ್ಳಲಾಗುವದು'' ಎಂದು ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಪ್ರತಿಕ್ರಿಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ